ಆನೆಗಳಿಗೆ ದೇಸಿ ರೇಡಿಯೋ ಕಾಲರ್ ಅಳವಡಿಕೆ
ಆನೆಗಳ ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಸಿ ನಿರ್ಮಿತ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಆನೆ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಹೇಳಿದರು.
ಅರಣ್ಯ ಭವನಾದಲ್ಲಿ ಬುದುವಾರ ಅರಣ್ಯ ಇಲಾಖೆ, ಬೆಂಗಳೂರಿನ ಇನ್ಫೆಕ್ಷನ್ ಲ್ಯಾಬ್ ಲಿಮಿಟೆಡ್ ಜತೆಗೂಡಿ ಅಭಿವೃದ್ಧಿಪಡಿಸುತ್ತಿರುವ ವೆಚ್ಚ ದಕ್ಷ ಕರ್ನಾಟಕ ಪರಿಶೋಧಿತ ಪತ್ತೆ ಸಾಧನ ಕೆಪಿ ಟ್ರ್ಯಾಕ್ ಎಂಬ ಹೆಸರಿನ ರೇಡಿಯೋ ಕಾಲರ್ ಗಳನ್ನು ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
6395 ಆನೆಗಳನ್ನು ಹೊಂದಿರುವ ಕರ್ನಾಟಕ ದೇಶದಲ್ಲಿ ಆನೆಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಆನೆಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚಳವಾಗದ ಕಾರಣ ಆನೆ ಮಾನವ ಸಂಘರ್ಷ ಹೆಚ್ಚಾಗುತ್ತಿದೆ ಎಂದರೆ.
ಈವರಿಗೆ ದಕ್ಷಿಣ ಆಫ್ರಿಕಾದ ಆಫ್ರಿಕನ್ ವೈಲ್ಡ್ ಲೈಫ್ ಟ್ರಾಂಕಿಂಗ್ ಮತ್ತು ಜಮರ್ನಿಯ ವೆಕ್ಟೋನಿಕ್ ಸಂಸ್ಥೆಗಳಿಂದ ಈ ರೇಡಿಯೋ ಕಾಲರ್ ಗಳನ್ನು ಅಮದು ಲಾಗುತ್ತಿತ್ತು. ಸಕಾಲದಲ್ಲಿ ಲಭ್ಯವಾಗುತ್ತಿರಲಿಲ್ಲ. ಅಲ್ಲದೆ ಒಂದು ರೇಡಿಯೋ ಕಾಲರಿಗೆ 6.5 ಲಕ್ಷ ರೂ. ವೆಚ್ಚ ತಗಲುತಿತ್ತು. ಆದರೆ ಈಗ ದೇಸಿಯವಾಗಿ ಅಭಿವೃದ್ಧಿಪಡಿಸಿದಾಗ 1.80 ಲಕ್ಷ ರೂ. ಆಗುತ್ತದೆ. ವಿದೇಶಿ ಅವಲಂಬನೆ ಹಾಗೂ ವಿದೇಶಿ ಮಿನಿಮಯವನ್ನೂ ಉಳಿಸುತ್ತದೆ. ಅಮದು ಕಾಲರ್ಗಳ ತೂಕ 16 ರಿಂದ 17 ಕೆಜಿ ಇರುತ್ತಿತ್ತು. ಆದರೆ ಈಗ ಅಭಿವೃದ್ಧಿಪಡಿಸಲಾಗಿರುವ ದೇಶಿಯ ಕಾಲರ್ಗಳ ಏಳು ಕೆಜಿ ತೂಕವಿವೆ, ಎಂದರು.
ಇದನ್ನೂ ಓದಿ: ಕುಂಭಮೇಳದಲ್ಲಿ ನಾವು ಲೀನವಾದಾಗ….
ಈ ಕಾಲರ್ಗಳನ್ನು ಪರಿಸರ ಸ್ನೇಹಿಯಾಗಿ ತಯಾರಿಸಲಾಗಿದೆ. ಯಾವುದು ಅಪಾಯವಾಗುವುದಿಲ್ಲ. ಒಂದೊಮ್ಮೆ ರೇಡಿಯೋ ಕಾಲರ್ ಗಳಲ್ಲಿ ದೋಷ ಕಂಡು ಬಂದರೆ ದುರಸ್ತಿ ಮಾಡಲು, ಬ್ಯಾಟರಿ, ಬಲ್ಬ್, ಸರ್ಕ್ಯೂಟ್ ಬದಲಾಯಿಸಲು ಅವಕಾಶವಿದೆ. ಅಮ್ಮದು ಕಾಲರ್ ಗಳಲ್ಲಿ ಈ ಅವಕಾಶವಿರಲಿಲ್ಲ. ಇವುಗಳಿಂದ ನಮ್ಮ ಕಾಡುಗಳ ಮತ್ತು ವನ್ಯಿಜೀವಿಗಳ ಮಾಹಿತಿ ಸೋರಿಕೆಯಾಗುವ ಅಪಾಯವು ಇತ್ತು. ಈಗ ಆತಂಕ ಅಪಾಯವಿಲ್ಲ ಎಂದರು.
ಮೊದಲ ಹಂತದಲ್ಲಿ ಆನೆಗಳ ರೇಡಿಯೋ ಕಾಲರ್ ಮಾತ್ರ ಸಿದ್ಧವಾಗಿದೆ. ಹುಲಿ ಮತ್ತು ಚಿರತೆ ಕಾಲರ್ ಗಳ ಅಭಿವೃದ್ಧಿಯೂ ಪ್ರಗತಿಯಲ್ಲಿದ್ದು, ಇದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು, ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವನ್ಯ ಜೀವಿ ಕುಮಾರ್ ಪುಷ್ಕರ್ ಹಾಗೂ ಇನ್ಫೆಕ್ಷನ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನಾ ತಾಂತ್ರಿಕ ತಜ್ಞ ಗುರು ದೀಪ ಅವರು ಸ್ವದೇಶಿ ಜಿಎಸ್ಎಂ ಅಧಾರಿತ ಆನೆ ರೇಡಿಯೋ ಕಾಲರ್ ಅಭಿವೃದ್ಧಿಪಡಿಸಿದ್ದಾರೆ . ಈ ಕಾಲರ್ ಗೆ ಕರ್ನಾಟಕ ಪರಿಶೋಧಿತ ಟ್ರ್ಯಾಕರ್ ಅಥವಾ ಕರ್ನಾಟಕ ಕೆಪಿ ಟ್ರ್ಯಾಕರ್ ಎಂದು ಹೆಸರಿಸಲಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಅಜಿತ್ ರೇ ಉಪಸ್ಥಿತರಿದ್ದರು.