ಸಿಪಿಎಂ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಸಿಪಿಎಂ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಸ್ಮಶಾನ ಅತಿಕ್ರಮಣ ತೆರವಿಗೆ ಒತ್ತಾಯ
ಬಾಗೇಪಲ್ಲಿ : ತಾಲೂಕಿನ ಯಲ್ಲಫಮಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕಂವಾರಿಪಲ್ಲಿ ಗ್ರಾಮದಿಂದ ವಿವಿಧ ಗ್ರಾಮಗಳ ಕಡೆ ಗಳಿಗೆ ಸಂಚರಿಸುವ ಮಾರ್ಗದಲ್ಲಿ ನಕಾಶೆ ದಾರಿಯನ್ನು ಹೊತ್ತುವರೆದಾರರಿಂದ ತೆರವುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಸಿಪಿಎಂ ನೇತೃತ್ವದಲ್ಲಿ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕು ಸಮಿತಿ ಸದಸ್ಯ ಲಕ್ಷ್ಮಣರೆಡ್ಡಿ ಮಾತನಾಡಿ ತಾಲೂಕಿನ ಶಂಕಂವಾರಿಪಲ್ಲಿ ಗ್ರಾಮದಿಂದ ಓಡಾಡುವ ರಸ್ತೆಯನ್ನು ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮದ 1. 20 ಕುಂಟೆ ಜಮೀನನ್ನು ಸರ್ಕಾರ ಸ್ಮಶಾನಕ್ಕೆ ಮೀಸಲು ಇರಿಸಿದೆ. ಆದರೆ ಕೆಲವರು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಮನವಿ

ಶಂಕಮಾರಿ ಪಲ್ಲಿ ಗ್ರಾಮದಿಂದ ಟೆಂಕಾಯಿ ಮಾಕಲಪಲ್ಲಿಗೆ ಇರುವ ನಕಾಶೆ ದಾರಿ ,ಗ್ರಾಮದ ರಂಗಸ್ವಾಮಿ ದೇವಸ್ಥಾನದಿಂದ. ಪಾತ ಪಟ್ಟಪಲ್ಲಿವರೆಗೆ ಇರುವ ನಕಾಶೆ ದಾರಿ, ಎಲ್ಲಂಪಲ್ಲಿಗೆ ಹೋಗುವ ಮುಖ್ಯ ರಸ್ತೆಯ ಇರುವ ದಾರಿ ಗಾಂಡ್ಲನಾರಾಯಣ ಸ್ವಾಮಿ ಜಮೀನಿನಿಂದ ಗೊಲ್ಲಪಲ್ಲಿಗೆ ಇರುವ ದಾರಿಯನ್ನು ಹೊತ್ತುವರೆದಾರರಿಂದ ಬಿಡಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ. ಮುನಿ ವೆಂಕಟಪ್ಪ ಮಾತನಾಡಿ, ಬಾಗೇಪಲ್ಲಿ ಹಾಗೂ ಚೇಳೂರು ತಾಲೂಕುಗಳಲ್ಲಿ ದಾರಿ ಸ್ಮಶಾನ ಒತ್ತುವರಿಯನ್ನು ತೆರವು ಮಾಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ . ಕೂಡಲೇ ತಾಲೂಕಿನಲ್ಲಿ ಸ್ಮಶಾನ , ರಸ್ತೆಗಳ ಒತ್ತುವರಿಯನ್ನು ತೆರವು ಮಾಡಿಸಬೇಕು ಇಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸಿಲ್ದಾರ್ ಮನಿಷಾ. ಎನ್ ಪತ್ರಿ ಆಗಮಿಸಿ ಮನವಿ ಸ್ವೀಕರಿಸಿ, ಸರ್ವೇ ಮಾಡಿಸಿ ರಸ್ತೆ ಸ್ಮಶಾನ ಒತ್ತುವರಿ ಆಗಿದ್ದರೆ ತೆರವು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳ್ಳೂರು ನಾಗರಾಜ್ ತಾಲೂಕು ಸಮಿತಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಸದಸ್ಯ ಸೋಮಶೇಖರ್, ಚನ್ನರಾಯಪ್ಪ, ಎಸ್.ವಿ. ನಾಗರಾಜ್, ಭಾವನಾ ,ಮುರಳಿ ಮೋಹನ, ಮಂಜು, ವೆಂಕಟಪ್ಪ, ಗಂಗುಲಪ್ಪ, ನಂಜುಂಡಪ್ಪ, ಎನ್ .ವೆಂಕಟಪ್ಪ, ಗುರ್ರಪ್ಪ, ಗಂಗರಾಜ,ಹರೀಶ್, ವೈ. ಆದಿ ನಾರಾಯಣಪ್ಪ ಇದ್ದರು.

1 thought on “ಸಿಪಿಎಂ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ”

Leave a Comment