ರಾಜ್ಯಕ್ಕೊಂದೇ ಕೊಕ್ಕೊ ಕುರುಬೂರು

ರಾಜ್ಯಕ್ಕೊಂದೇ ಕೊಕ್ಕೊ ಕುರುಬೂರು

ಕುಸುಮಾ ಅಯರಹಳ್ಳಿ ಗೊ ಬ್ಬಳಿ ಮರದ ಪೋಲ್‌ಗೆ ಅಲ್ಲಿದ್ದ ಹುಡುಗಿಯರೆಲ್ಲ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೊಕ್ಕೊ ಅಭ್ಯಾಸಕ್ಕಾಗಿ ಕೋರ್ಟ್‌ಗೆ ನುಗ್ಗಿದರು. ಚಿಗರೆಯಂತೆ ಓಡುತ್ತಿದ್ದವರನ್ನು ಹಿಡಿಯುವ ಗುರಿ ಅವರದು, ಮೀನಿನಂತೆ ಜಾರಿಕೊಳ್ಳುವ ತಂತ್ರ ಇವರದು- ಹೀಗೆ ಓಡುವ, ಹಿಡಿಯುವ ಆಟ ಜೋರಾಗಿಯೇ ನಡೆಯಿತು. ಇಡೀ ಮೈ ಬೆವರಿನಿಂದ ಸ್ನಾನ ಮಾಡಿತ್ತು. ಅವರ ಅಭ್ಯಾಸದ ಬಿಡುವಿನಲ್ಲಿ ಮಾತಿಗೆ ಕುಳಿತ.

‘ನೀವು ಯಾಕೆ ಆಗೊಬ್ಬಳಿ ಮರದ ಪೋಲ್‌ಗೆ ನಮಸ್ಕರಿಸಿದ್ದು’ ಕೇಳಿದೆ. ‘ನಮಗೆ ಇಂದಿಗೂ ಸರಿಯಾದ ಕೊಕ್ಕೊ ಕೋರ್ಟ್ ಇಲ್ಲ. ಶುರುವಿನಲ್ಲಿ ಶಾಲೆ ಹಿಂದೆ ಇದ್ದ ತೆಂಗಿನತೋಟದಲ್ಲಿ ನಮ್ಮ ಅಭ್ಯಾಸ ನಡೆಯುತ್ತಿತ್ತು. ಆ ಕೋರ್ಟ್ ಹೇಗಿತ್ತು ಅಂದ್ರೆ ಉದ್ದ ಸಾಕಾಗುತ್ತಿತ್ತು, ಅದರ ಅಗಲ ಕೇಳಲೇಬೇಡಿ. ಆಗ ನಮಗೆ ಸರಿಯಾಗಿ ಎರಡು ಪೋಲ್‌ಗಳೂ ಇರಲಿಲ್ಲ. ಅಲ್ಲೇ ಇದ್ದ ಗೊಬ್ಬಳಿ ಮರ ಕಡಿದು ಎರಡು ಪೋಲ್‌ಗಳನ್ನು ಮಾಡಿಕೊಂಡವು. ವರ್ಷಗಳ ನಂತರ ಒಂದು ಪೋಲ್ ಹಾಳಾಯ್ತು. ಇನ್ನೊಂದನ್ನು ಅಂದಿನಿಂದಲೂ ಇಟ್ಟುಕೊಂಡು ಹೀಗೆ ನಮಸ್ಕರಿಸಿ ಅಭ್ಯಾಸ ಶುರು ಮಾಡುತ್ತೇವೆ’ ಎಂದು ಕೋಚ್ ಮಂಜುನಾಥ್ ಹೇಳಿದರು.

ಇದು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಹೆಣ್ಣುಮಕ್ಕಳ ಕೊಕ್ಕೊ ಅಭ್ಯಾಸದ ಕಥೆ. ಕೊಕ್ಕೊ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ‘ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದ ಚೈತ್ರಾ ಇದೇ ಊರಿನವರು. ಇಲ್ಲಿ ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಕೊಕ್ಕೊಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಈ ಊರಿಗೆ “ಕೊಕ್ಕೂ ಕುರುಬೂರು’ ಎನ್ನುವ ಹೆಸರನ್ನು ಜನರೇ ಕೊಟ್ಟಿದ್ದಾರೆ. ವಿಶ್ವಕಪ್ ಜಯಿಸಿದ ಕಾರಣಕ್ಕಾಗಿ ಚೈತ್ರಾ ಹೆಸರು ಎಲ್ಲೆಡೆ ಕೇಳಿಬರುತ್ತಿದೆ. ಅಚ್ಚರಿಯ ವಿಷಯವೆಂದರೆ ಇದೇ ಹಳ್ಳಿಯ ವಿದ್ಯಾದರ್ಶಿನಿ ಶಾಲೆಯಲ್ಲಿ ನೂರಾರು ಕೊಕ್ಕೊ ಪ್ರತಿಭೆಗಳಿವೆ. ಒಂದೇ ಹಳ್ಳಿಯಲ್ಲಿ ಮನೆ ಮನೆಗೂ ಪ್ರತಿಭಾವಂತ ಆಟಗಾರ್ತಿಯರು ಇರುವುದು ಬಹುಶಃ ಇದೊಂದೇ ಗ್ರಾಮದಲ್ಲಿ ಅನಿಸುತ್ತದೆ.

ಇದನ್ನೂ ಓದಿ: ಪಂದ್ಯಶ್ರೇಷ್ಠ’ ಪರ್ವೇಶ್‌ಗೆ ಸಿ.ಎಂ. ಗಾದಿ?

ಜೈತ್ರಯಾತ್ರೆಗೆ ಮುನ್ನುಡಿ

ವಿದ್ಯಾದರ್ಶಿನಿ ಶಾಲೆಯ ವಿದ್ಯಾರ್ಥಿನಿಯರು ತಾವೇ ಕೊಕ್ಕೊ ತಂಡ ಮಾಡಿಕೊಂಡು ಹೋಬಳಿ ಮಟ್ಟದ ಪಂದ್ಯಾವಳಿಗೆ ತಯಾರಿ ನಡೆಸಿರುತ್ತಾರೆ. ಮಂಜುನಾಥ್ ಎನ್ನುವವರು ಶಾಲೆಗೆ ಹೊಸದಾಗಿ ಗಣಿತದ ಶಿಕ್ಷಕರಾಗಿ ಬಂದಿರುತ್ತಾರೆ. ಮಕ್ಕಳು ಅಭ್ಯಾಸ ಮಾಡುವುದನ್ನು ಸುಮ್ಮನೆ ಗಮನಿಸುತ್ತಿರುತ್ತಾರೆ ಹೋಬಳಿ ಮಟ್ಟದ ಸ್ಪರ್ಧೆಯಲ್ಲಿ ಸೋತ ಮಕ್ಕಳು ಹೆಚ್ಚು ಮೋರೆ ಹಾಕಿ ಅಳುತ್ತಾ ಬಂದಿರುತ್ತಾರೆ. ಆಗ ಮಂಜುನಾಥ್ ಅವರಿಗೆ ಬೇಸರವಾಗುತ್ತದೆ. ಮುಂದಿನ ವರ್ಷ ಖಂಡಿತ ಗೆಲ್ಲುತ್ತೀರಿ. ನಾನು ನಿಮ್ಮನ್ನು ತಯಾರು ಮಾಡುತ್ತೇನೆ” ಎಂದು ಸಮಾಧಾನಿಸುತ್ತಾರೆ. ಮಂಜುನಾಥ್ ಅವರಿಗೆ ಕೊಕ್ಕೊ ಬಗ್ಗೆ ಅಷ್ಟೇನೂ ಗೊತ್ತಿರುವುದಿಲ್ಲ. ಮೊದಲಿಗೆ ಕೊಕ್ಕೊ ಸಂಬಂಧಿಸಿದ ಪುಸ್ತಕಗಳನ್ನು ಅಭ್ಯಾಸ ಮಾಡುತ್ತಾರೆ. ಟಿವಿಯಲ್ಲಿ ಕೊಕ್ಕೊ ಪಂದ್ಯಗಳನ್ನು ನಿರಂತರವಾಗಿ ನೋಡುತ್ತಾ ಪಟ್ಟುಗಳನ್ನು ಪಟ್ಟಿ ಮಾಡಿಕೊಳ್ಳುತ್ತಾರೆ. ಅದನ್ನು ಅನುಸರಿಸಿ ಮಕ್ಕಳನ್ನು ತಯಾರು ಮಾಡುತ್ತಾರೆ. ಆ ವರ್ಷ ರಂಗಸಮುದ್ರವನ್ನು (ಆಗಿನ ಬಲಿಷ್ಠ ತಂಡ ) ಕುರುಬೂರು ತಂಡ ಸೋಲಿಸುತ್ತದೆ. 2009ರ ಈ ಗೆಲುವು ತಂಡಕ್ಕೆ ಕಡಲಷ್ಟು ಆತ್ಮವಿಶ್ವಾಸ ತಂದು ಕೊಡುತ್ತದೆ. ಇನ್ನಷ್ಟು ಶ್ರಮ ಹಾಕಿ, ನಿರಂತರ ಅಭ್ಯಾಸ ಮಾಡುತ್ತಾರೆ. ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟ, ಇಷ್ಟೇ ಏಕೆ ಹೋದಲ್ಲೆಲ್ಲಾ ಕಪ್‌ಗಳು, ಟ್ರೋಫಿಗಳನ್ನು ಗೆದ್ದು ಬರುತ್ತಲೇ ಇರುತ್ತಾರೆ. ಊರಿನ ಜನ ‘ಮಕ್ಕಳು ಏನೋ ಆಟ ಆಡ್ಕತವೆ’ ಅಂದುಕೊಂಡಿದ್ದರು. ಕಪ್‌ಗಳು, ಟ್ರೋಫಿಗಳನ್ನು ಕಂಡು ಪುಳಕಿತರಾಗಿ ‘ಭೇಷ್’ ಎಂದು ಬೆನ್ನುತಟ್ಟತೊಡಗಿದರು. ಮಕ್ಕಳ ಬೆಳವಣಿಗೆ ಮೇಲೆ ಹೆಚ್ಚು ಹಾಗಾ ಇಟ್ಟು ಉತ್ತೇಜಿಸತೊಡಗಿದರು. ವರ್ಷಗಳು ಕಳೆದಂತೆ ಕುರುಬೂರಿನ ಹುಡುಗಿಯರು ರಾಜ್ಯಮಟ್ಟದ ತಂಡಕ್ಕೂ ಆಯ್ಕೆಯಾದರು.

ಇದು 2010ರಲ್ಲಿ ನಡೆದ ಘಟನೆ. ಕುರುಬೂರಿನ ಮೇಘಾ ಎಂಬ ಆಟಗಾರ್ತಿಯನ್ನು ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿಗಾಗಿ ಕರೆತರಲು ಮಂಜುನಾಥ್ ಅವರಿಗೆ ಸೂಚಿಸಲಾಗುತ್ತದೆ. ಅದಾಗಲೇ ಮೇಘಾ, ಲತಾ ಮತ್ತು ನಮ್ರತಾ ದಾವಣಗೆರೆಯ ಅಥ್ಲೆಟಿಕ್ಸ್‌ಗೆ ಹೋಗಿರುತ್ತಾರೆ. ‘ರಾಷ್ಟ್ರಮಟ್ಟದಲ್ಲಿ ಆಡುವುದು ಅಪರೂಪದ ಅವಕಾಶ, ಸಾಧ್ಯವಾದರೆ ನಾಳೆಯೇಕರೆ ತನ್ನಿ’ ಎಂದಿರುತ್ತಾರೆ ಅವರು. ಆಗ ಮಂಜುನಾಥ್ ರಾತ್ರೋರಾತ್ರಿ
ಕೊಕ್ಕೊ ಅಭ್ಯಾಸ ನಿರತ ಆಟಗಾರ್ತಿಯರು
ಹೊರಟು, ದಾವಣಗೆರೆ ತಲುಪಿ ಮೇಘಾ ಅವರನ್ನು ಕರೆತಂದು ಬೆಂಗಳೂರಿಗೆ ಬಿಡುತ್ತಾರೆ. ಮೇಘಾ ಆ ವರ್ಷ ಕರ್ನಾಟಕ ತಂಡಕ್ಕಾಗಿ ಆಡುತ್ತಾರೆ. ತಂಡ ‘ರನ್ನರ್ ಅಪ್ ಆಗುತ್ತದೆ. ಮೇಫಾ ‘ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆಯುತ್ತಾರೆ. 2016 ರಲ್ಲಿ ಮೇಘಾ ಮತ್ತು ವೀಣಾ ದಕ್ಷಿಣ ಏಷಿಯನ್ ರಾಷ್ಟ್ರಗಳ ಕ್ರೀಡಾಕೂಟದಲ್ಲಿ ಅಡಿ, ಚಿನ್ನದ ಪದಕ ತಂದುಕೊಡುತ್ತಾರೆ. ಇದು ಕುರುಬೂರು ತಂಡಕ್ಕೆ ತಾವು ರಾಷ್ಟ್ರಮಟ್ಟದಲ್ಲೂ ಆಡಬಹುದೆಂಬ ಅಪಾರ ವಿಶ್ವಾಸವನ್ನು ಹುಟ್ಟಿಸುತ್ತದೆ. ತುಂಬಾ ಮಕ್ಕಳು ಕೊಕ್ಕೊದಲ್ಲಿ ಆಸಕ್ತಿ ತೋರುತ್ತಾರೆ. ಹೀಗಾಗಿ ಸೀನಿಯರ್ ಮತ್ತು ಜೂನಿಯರ್ ಎರಡು ತಂಡಗಳು ತಯಾರಾಗುತ್ತವೆ.

2018ರಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಜೂನಿಯರ್ ಮತ್ತು ಸೀನಿಯರ್ ಎರಡೂ ವಿಭಾಗಗಳಲ್ಲಿಯೂ ಕುರುಬೂರಿನ ಹೆಣ್ಣುಮಕ್ಕಳು ಜಯಭೇರಿ ಬಾರಿಸುತ್ತಾರೆ. ನಗರ ಪ್ರದೇಶಗಳ ಪ್ರತಿಷ್ಠಿತ ಶಾಲೆಗಳ ಮಕ್ಕಳ ಮುಂದೆ ಅಂಗಳವೇ ಇರದೇ ತೆಂಗಿನ ತೋಟದಲ್ಲಿ ಅಭ್ಯಾಸ ಮಾಡಿದ, ಯಾವ ಸೌಲಭ್ಯವೂ ಇರದ, ಕಪ್ಪು ನೆಲದ ಹಳ್ಳಿಯ ಸಾಮಾನ್ಯ ಬಡ ರೈತರ ಮಕ್ಕಳ ಗೆಲುವು ಅಸಾಮಾನ್ಯವೇ ಸರಿ.

ಆವರಿಸಿತು ಕಾರ್ಮೋಡ

ಗೆಲುವಿನ ಯಾತ್ರೆಯಲ್ಲಿ ಯಾವಾಗಲೂ ಸಂಭ್ರಮವೇ ಇರುವುದಿಲ್ಲ. 2018, ಕುರುಬೂರು ತಂಡಕ್ಕೆ ನೋವಿನ ವರ್ಷ. ‘ನಿಮ್ಮ ಶಾಲೆ, ನಿಮ್ಮ ಕೋಚ್‌ಗಿಂತ ಹೆಚ್ಚಿನ ಶಕ್ತಿ ಮತ್ತು ಆವಕಾಶವನ್ನು ಕೊಡುತ್ತೇವೆ. ಅಲ್ಲದೇ ನಿಮ್ಮಲ್ಲೊಂದು ಕ್ಲಬ್ ಸಹ ಇಲ್ಲ’ ಎಂದು ಕೆಲವರು ಆಟಗಾರ್ತಿಯರ ಮನಸು ಕಡಿಸುತ್ತಾರೆ. ಏಕಾಏಕಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹದಿನೈದು ಆಟಗಾರ್ತಿಯರು ತಂಡ ಬಿಡುತ್ತಾರೆ. ಸೀನಿಯರ್ ತಂಡದಲ್ಲಿ ಉಳಿದವರು ವೀಣಾ, ಮಂಜುಳಾ ಮತ್ತು ಅಮೂಲ್ಯಾ ಮಾತ್ರ. ‘ನಾವಿರುತ್ತೇವೆ. ಜೂನಿಯರ್ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ’ ಎನ್ನುತ್ತಾರೆ ಅವರು. ಒಂದು ವರ್ಷ ಯಾವ ಪಂದ್ಯಾವಳಿಯಲ್ಲಿಯೂ ಭಾಗವಹಿಸದೆ ಸತತವಾಗಿ ಕಠಿಣ ಅಭ್ಯಾಸ ಮಾಡುತ್ತಾರೆ. ಮತ್ತೆ ಆರಂಭವಾಗುತ್ತದೆ ಜೈತ್ರಯಾತ್ರೆ, 2020ರಲ್ಲಿ ಕುರುಬೂರು ತಂಡ ರಾಜ್ಯ ಮಟ್ಟದ ಪ್ರಶಸ್ತಿ ಗೆಲ್ಲುತ್ತದೆ.

Leave a Comment