ಶುದ್ಧ ಜಲ ಮರೀಚಿಕೆಯಾಗದಿರಲಿ
ಶುದ್ಧ ಕುಡಿಯುವ ನೀರಿನ ಪೂರೈಕೆ ವಿಚಾರವಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಪ್ರಾಮಾಣಿಕ ಹಾಗೂ ಪಾರದರ್ಶಕ ನೀತಿಯನ್ನು ಅನುಸರಿಸಬೇಕಾಗಿದೆ. ಶುದ್ಧ ಗಾಳಿ, ಶುದ್ಧ ನೀರು ಇವೆರಡು ಆರೋಗ್ಯಕರ ಬದುಕಿಗೆ ಬಹಳ ಅಗತ್ಯ, ಆದರೆ ಶುದ್ಧ ಗಾಳಿಯ ಕಲ್ಪನೆ ಅದೆಂದು ಮಾಯವಾಗಿದೆ. ಉಸಿರಾಡುವ ಗಾಳಿ ನಿಧಾನ ವಿಷವಾಗಿ ಪರಿಣಮಿಸಿದೆ. ಇದರ ಜೊತೆಗೆ ಗ್ರಾಮೀಣ ಮತ್ತು ಪಟ್ಟಣದ ನಿವಾಸಿಗಳಿಗೆ ಪೂರೈಕೆ ಶುದ್ಧವಾಗಿದೆ ಎಂಬ ಪ್ರಶ್ನೆ ಕಾಡುತ್ತಲೇ ಇದೆ. ಬಹುಪಾಲು ಮಂದಿ ಈಗ ಸ್ಥಳೀಯ ಆಡಳಿತಗಳು ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ ಅಧಿಕಾರಿಶಾಹಿಯು ಇದನ್ನೊದು ಗುರು ತರ ಜವಾಬ್ದಾರಿಯಾಗಿ ಭಾವಿಸಿ, ಸಮಪ೯ಕವಾಗಿ ನಿರ್ವಹಿಸಿದ್ದಿದ್ದರೆ ಜೀವ ಜಲ ಇಂದು ಕೆಲವೆಡೆ ಕಂಟಕವಾಗಿ ಪರಿಣಮಿಸುತ್ತಿರಲಿಲ್ಲ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕುಡಿಯುವ ನೀರು ನಂಜಾಗಿ ಪರಿಣಮಿಸಿದ ಸುದ್ದಿಗಳು ಅಂಗಿದಾಗ್ಗೆ ಪ್ರಕಟವಾಗುತ್ತಲೇ ಇವೆ.
ಆದರೂ ಕುಡಿಯುವ ನೀರು ಕಲುಷಿತ ಆಗದಂತೆ ನೋಡಿಕೊಳ್ಳುವ ದಿಸೆಯಲ್ಲಿ ಕಟ್ಟು ನಿಟ್ಟಿನ ಕರ್ಮಗಳನ್ನು ಸರ್ಕಾರವಾಗಲಿ, ಆಯಾ ಪ್ರದೇಶದ ಆಡಳಿತದ ಹೊಣೆ ಹೊತ್ತ ಗ್ರಾಮ ಪಂಚಾಯಿತಿಗಳಾಗಲಿ ಕೈಗೊಂಡಂತೆ ಕಾಣುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆಗಾಗಿ ಯಾವುದೋ ಕಾಲದಲ್ಲಿ ಹಾಕಿದ್ದ ಪೈಪುಗಳಿವೆ. ಇವನ್ನು ತೆಗೆದು ನೋಡಿದರೆ ಒಳಗೆ ಒಂದಿಂಚು ದಪ್ಪ ಮಣ್ಣು, ಪಾಚಿ ಎಂತಹ ಕಲ್ಮಶಗಳು ಅಂಟಿಕೊಂಡಿರುತ್ತವೆ. ಕೊಳವೆ ಬಾವಿಗಳಿಂದ ನೀರೆಳೆಯುವ ಕಬ್ಬಿಣದ ಪೈಪುಗಳನ್ನು ಬದಲಾಯಿಸಿ ಪಿವಿಸಿ ಪೈಪುಗಳನ್ನು ಜೋಡಿಸಬಹುದಿತ್ತು. ಕಬ್ಬಿಣದ ಪೈಪುಗಳಲ್ಲಿ ಅವ್ಯಾಹತವಾಗಿ ಬರುವ ತುಕ್ಕು, ನೀರಿನ ದುರ್ವಾಸನೆಗೆ ಕಾರಣವಷ್ಟೇ ಅಲ್ಲ, ಅದನ್ನು ಕುಡಿದವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನೀರು ಸರಬರಾಜಿನ ಪೈಪುಗಳು ಅಲ್ಲಲ್ಲಿ ಹೊಡೆದು ಜೀವ ಜಲ ಸೋರಿ ನೆಲದಲ್ಲಿ ಇಂಗಿ ಹೋಗುತ್ತಿದೆ. ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಮೂಲಕ ನೀರು ಪೂರೈಕೆ ಮಾಡುವ ಜಾಹೀರಾತು ಮಾತ್ರ ಭಜಾ೯ರಿಯಾಗಿದೆ . ಹಲವು ಕಡೆ ಅದೊಂದು ಸಫಲ ಯೋಜನೆಯಾಗಿಲ್ಲ.
ಸದ್ಯ ಗ್ರಾಮ ಪಂಚಾಯಿತಿಗಳಿಂದ ಪೂರೈಕೆಯಾಗುವ ನೀರನ್ನೇ ಈ ಹೊಸ ಪೈಪುಗಳಲ್ಲಿ ಹರಿಸಿ ಯೋಜನೆಯನ್ನು ಗುರಿ ಮುಟ್ಟಿಸುವುದು ಕಂಡು ಬರುತ್ತಿದೆ. ಇನ್ನು ಹರಿಯು ಹಳ್ಳ, ನದಿಯಂತಹ ನೀರಿನಾಸರೆಗಳಿಂದ ಪಟ್ಟಣಗಳಲ್ಲಿ ನೀರು ಶುದ್ಧೀಕರಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಬೇಸಿಗೆ ಮಧ್ಯಮಾವಾಧಿ ತಲುಪಿದಾಗ ಇಂತಹ ಘಟನೆಗಳ ಬಳಿಗೆ ಭೇಟಿ ನೀಡಿದವರಿಗೆ ನೀರು ಕುಡಿಯುವುದೇ ಬೇಡ ಎಣಿಸಬಹುದು. ಹರಿದು ಬರುವ ನೀರಿನಿಂದ ಪ್ರತ್ಯೇಕಿಸಿದ ಗೋಣಿಚೀಲಗಳು, ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು ಅಲ್ಲಿ ರಾಶಿ ಬೀಳುವ ದೃಶ್ಯವಂತೂ ಹೊಟ್ಟೆ ತೊಳಸುವಂತೆ ಇರುತ್ತದೆ. ಎಷ್ಟೇ ಶುದ್ದಿಕರಿಸಿದ್ದೇವೆ ಎಂದು ಹೇಳಿದರು ಇಂತಹ ನೀರನ್ನು ಕುಡಿಯುವಾಗ ಯೋಚಿಸಲೇಬೇಕಾಗುತ್ತದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಶುದ್ಧ ಕುಡಿಯುವ ನೀರಿನ ಪೂರಕ ವಿಚಾರವಾಗಿ ಪ್ರಾಮಾಣಿಕ ಹಾಗೂ ಪರದರ್ಶಕ ನೀತಿಯನ್ನು ಹೊಂದಿದಂತೆ ಭಾಸವಾಗುವುದಿಲ್ಲ.
ಇದನ್ನೂ ಓದಿ: ಎಸ್ಐಪಿ ಹೂಡಿಕೆ ನಿಲ್ಲಿಸಬೇಡಿ
ಪ್ರತಿವರ್ಷದ ಬಜೆಟ್ ನಲ್ಲಿ ಇದಕ್ಕಾಗಿ ಗಮನಾರ್ಹ ಮೊತ್ತವನ್ನು ತೆಗೆದಿರಿಸಿ ಜನರ ಪ್ರಾಣ ರಕ್ಷಿಸುವ ನೀರನ್ನು ಅತ್ಯಂತ ಪರಿಶುದ್ಧವಾಗಿ ಒದಗಿಸಲು ಕಾಳಜಿ ವಹಿಸಿದಂತಿಲ್ಲ. ಕ್ಷಮಾಹ೯ ವಲ್ಲದ ಅಲಕ್ಷ್ಯವೇ ಕುಡಿಯುವ ನೀರು ನಂಜಾಗಲು ಕಾರಣವಾಗುತ್ತಿದೆ. ನೀರು ಸಂಗ್ರಹಿಸುವ ತೊಟ್ಟಿಗಳನ್ನು ನಿಗದಿತ ಸಮಯದೊಳಗೆ ಶುಚಿಗೊಳಿಸದ ಗ್ರಾಮ ಪಂಚಾಯಿತಿಗಳೂ ಇವೆ. ಇದರೊಂದಿಗೆ ಹನಿ ಹನಿ ನೀರು ಕೂಡ ಚಿನ್ನಕ್ಕಿಂತ ಬೆಲೆ ಬಾಳುವುದು ಎಂಬ ಸತ್ಯವನ್ನು ಸಾರ್ವಜನಿಕರು ಮರೆಯುವುದುಂಟು. ನಲ್ಲಿಯಲ್ಲಿ ಸೋರಿ ಹೋಗುತ್ತಿರುವ ದೃಶ್ಯವನ್ನು ಕಂಡರೂ’ ನನ್ನ ಮನೆಯದ್ದಲ್ಲ’ಎಂಬ ನಿರಾಳ ಭಾವದಲ್ಲಿ ಮುಂದುವರಿಯುವವರಿದ್ದಾರೆ. ಬರುವ ನೀರನ್ನು ಆರಂಭದಲ್ಲಿ ತಮ್ಮ ಮನೆಯ ಅಗತ್ಯಗಳಿಗೆ ಭಾತಿ೯ ಮಾಡಿಕೊಂಡು, ಸಾಲಿನ ಕೊನೆಯಲ್ಲಿ ಇರುವವರಿಗೆ ತೊಟ್ಟು ನೀರು ಸಿಗದೇ ಹೋದಾಗಲೂ ಸಂತಾಪ ಪಡದವರಿದ್ದಾರೆ.
ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದಿಲ್ಲ ಎಂಬ ಕರಾರಿಗೆ ಸಹಿ ಮಾಡಿದರು ತೆಂಗು, ಮಲ್ಲಿಗೆ, ತರಕಾರಿ ಗಿಡಗಳ ಬುಡ ನೆನೆಸಿಕೊಳ್ಳುವವರಿಗು ಬರವಿಲ್ಲ. ನೀರನ್ನು ಪೋಲು ಮಾಡುವ, ಹನಿ ನೀರಿಗಾಗಿ ಪರಿತಪಿಸುವ ದೇಶಗಳ ಗ್ರಾಮೀಣ ಜನರನ್ನು ನೆನಪಿಸಿಕೊಳ್ಳಬೇಕು. ನಮ್ಮಲ್ಲಿಯೂ ಹರದಾರಿ ದೂರದಿಂದ ಕೊಡ ತುಂಬಿಕೊಂಡು ಬರುವ ಸಂಕಷ್ಟ ಈಗಲೂ ಕೆಲವೆಡೆ ಇದೆ. ಶುದ್ಧ ನೀರಿನ ಸರಬರಾಜು ಹೇಗೆ ಆಡಳಿತದ ಹೊಣೆಗಾರಿಕೆಯೋ ಪ್ರತಿ ಹನಿ ನೀರನ್ನು ದುರ್ಬಳಕೆ ಮಾಡದ ಜಾಗೃತಿ ಬಳಕೆದಾರರಲ್ಲೂ ಇರಬೇಕಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳು ಬರುವ ಅನುದಾನವನ್ನು ಗ್ರಾಮೀಣ ಜನರ ಕುಡಿಯುವ ನೀರು ಪೂರೈಕೆಯ ವಿದ್ಯುತ್ ವೆಚ್ಚಕ್ಕೆ ಬಳಸಿ, ಅಭಿವೃದ್ಧಿಗೆ ಬಿಡಿಗಾಸನ್ನೂ ಬಳಸದಿರುವ ಲೋಪ ಎದ್ದು ಕಾಣುತ್ತಿದೆ. ಮಳೆಗಾಲದಲ್ಲಿ ಚಾವಣಿಯಿಂದ ಬಳಸುವುದು, ನೀರನ್ನು ಸಂಗ್ರಹಿಸಿ, ಶುದ್ಧಿಕರಿಸಿ ಬಳಸುವುದು ಜಲಮೂಲಗಳಿಗೆ ಸೇರಿಸುವಂತಹ ಜಲ ಸಂರಕ್ಷಣೆಯ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಸಾರ್ವಜನಿಕರು ತೊಡಗಿಸುವ ಕೆಲಸಗಳನ್ನು ಸ್ಥಳೀಯ ಆಡಳಿತ ದವರು ಮಾಡಬೇಕು. ಈ ಮೂಲಕ ತಮ್ಮ ನೀರನ್ನು ತಾವೇ ಪಡೆಯಲು ಪ್ರೇರಕರಾಗಬೇಕಾದ ಅಗತ್ಯ ಇದೆ. ಬೇಸಿಗೆಯ ನೀರಿನ ಹಾಹಾಕಾರ ಶಮನಕ್ಕೂ ಇದು ನೆರವಾಯಿತು.