ಪರೋಪಜೀವಿ’ಗಳುಯಾರು?
ಉಚಿತ ಕೊಡುಗೆಗಳ ಮೂಲಕ ಕರ್ನಾಟಕ ಮತ್ತು ಇತರ ಮಾಡುತ್ತಿರುವುದು ಸಂವಿಧಾನ ಹೇಳುವ ಕರ್ತವ್ಯವನ್ನೇ ‘ಉಚಿತ ಕೊಡುಗೆ’ಗಳು ಅಥವಾ ‘ಗ್ಯಾರಂಟಿ’ಗಳು ಎಂಬ ಪದಗಳು ಚಲಾವಣೆಗೆ ಬಂದುದು ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಅಂದಿನಿಂದ ಇಂದಿನವರೆಗೂ ಅಧಿಕಾರ ಪನ್ನು ಕಳೆದುಕೊಂಡ ಪಕ್ಷಗಳು ಈ ಕೊಡುಗೆಗಳನ್ನು ವರಸ್ಕಾರದಿಂದಲೇ ಕಾಣುತ್ತಿವೆ ಮತ್ತು ಅವುಗಳಿಂದಲೇ ಅಧಿಕಾರಕ್ಕೆ ಬಂದಿರುವ ಸರ್ಕಾರ’ವನ್ನೂ ತೆಗಳುತ್ತಿವೆ. ಇನ್ನೂ ಮೊದಲೇ ದೆಹಲಿಯಲ್ಲಿ ಎಎಪಿ ನೇತೃತ್ವದ ಸರ್ಕಾರವು ಉಚಿತ ವಿದ್ಯುತ್ ಕೊಟ್ಟಿದ್ದರೂ ಅದೇಕೋ ಆಗ ಆ ಉಚಿತ ಕೊಡುಗೆಯ ಬಗ್ಗೆ ಇಷ್ಟು ಟೀಕೆಗಳು ಬಂದಿರಲಿಲ್ಲ.
ರಾಜಕೀಯ ಕ್ಷೇತ್ರದಲ್ಲಿ ಯಾವ ಯೋಜನೆಯ ಬಗ್ಗೆಯಾದರೂ ಸಮರ್ಥನೆ ಹಾಗೂ ಟೀಕೆಗಳು ಸಹಜ. ಆದರೆ ಸುಪ್ರೀಂ ಕೋರ್ಟ್ ಆ ಕೊಡುಗೆಗಳ ಬಗ್ಗೆ ಕೆಳಗೆ ಕೊಟ್ಟಿರುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ (ಇದೇ 12ರಂದು ಪತ್ರಿಕೆಗಳಲ್ಲಿ ಬಂದಿರುವುದು ಸತ್ಯ ದೂರವಲ್ಲದಿದ್ದರೆ) ಎಂಬುದು ದುರದೃಷ್ಟಕರ. ಅದು, ಉಚಿತ ಕೊಡುಗೆಗಳ ಬಗ್ಗೆ ‘ಇವು ಕೆಲಸ ಮಾಡಲು ಇಚ್ಛಿಸುವವರ ಉತ್ಸಾಹವನ್ನು ಕುಗ್ಗಿಸುತ್ತವೆ. ಜನರಿಗೆ ಉಚಿತ ಕೊಡುಗೆಗಳು ಸಿಗುವಾಗ ಅವರು ಏಕೆ ಕೆಲಸ ಮಾಡುತ್ತಾರೆ? ಇವು ರಾಷ್ಟ್ರದ, ರಾಜ್ಯ ಸರ್ಕಾರಿ ಖಜಾನೆಗಳ ಮೇಲೆ ದೊಡ್ಡ ಹೊರೆಯಾಗುತ್ತವೆ. ಉಚಿತ ಕೊಡುಗೆಗಳು ಪರೋಪಜೀವಿಗಳನ್ನು ಸೃಷ್ಟಿಸುತ್ತಿವೆ’ ಎಂದು ಅವುಗಳನ್ನು ಟೀಕಿಸಿದೆ. ‘ಪ್ಯಾರಸೈಟ್’ ಪದವಂತೂ ಇನ್ನೂ ದುರದೃಷ್ಟಕರ.
ಇಂದು ಕರ್ನಾಟದಲ್ಲಿ ಮಾತ್ರವಲ್ಲದೆ ಹೆಚ್ಚು ಕಮ್ಮಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಈ ಬಗೆಯ ಉಚಿತ ಕೊಡುಗೆಗಳು ಇವೆ ಅಥವಾ ಅವುಗಳನ್ನು ಕೊಡುವ ಅಶ್ವಾಸನೆಯನ್ನು ಆಯಾ ರಾಜ್ಯಗಳ ಸರ್ಕಾರಗಳು ಪ್ರಜೆಗಳಿಗೆ ಕೊಟ್ಟಿವೆ. ಉಚಿತ ಕೊಡುಗೆಗಳು ಜಾರಿಯಾಗಿರುವ ದೇಶದ ಯಾವ ಭಾಗದಲ್ಲಿ ಅಥವಾ ರಾಜ್ಯದಲ್ಲಿ ಜನ ಕೆಲಸ ಮಾಡುತ್ತಿಲ್ಲ?
ಕೃಷಿಕರು ಕೆಲಸ ಮಾಡದಿದ್ದರೆ ನಮಗೆ ಆಹಾರವೇ ಸಿಗುತ್ತಿರಲಿಲ್ಲ, ಬಸ್, ಆಟೊ ಚಾಲಕರು ಕೆಲಸ ಮಾಡದಿದ್ದರೆ ನಾವು ಮನೆಯಿಂದ ಹೊರಗೆ ಹೋಗಲೇ ಸಾಧ್ಯವಿರಲಿಲ್ಲ. ಹೀಗೆಯೇ, ತಳ್ಳುಗಾಡಿ ಗಳಲ್ಲಿ ತರಕಾರಿ-ಹಣ್ಣುಗಳನ್ನು ಮಾರುವವರು, ಮನೆ ಕೆಲಸ ಮಾಡುವವರು, ಕೂಲಿ ಕಾರ್ಮಿಕರು, ದರ್ಜಿಗಳು, ಹೋಟೆಲ್ ಮಾಲ್ಗಳಲ್ಲಿ ಕೆಲಸ ಮಾಡುವವರು, ಕಚೇರಿಗಳಲ್ಲಿ ಕೆಲಸ ಮಾಡುವವರು, ಹಮಾಲರು… ಹೀಗೆ ನೂರಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವ, ಒಟ್ಟು ಜನಸಂಖ್ಯೆಯಲ್ಲಿ ಶೇಕಡ 85ರಷ್ಟಿರುವ, ಬಡತನದ ರೇಖೆಯ ಕೆಳಗಿರುವವರು (ಮತ್ತು ಉಚಿತ ಕೊಡುಗೆಗಳ ಫಲಾನುಭವಿಗಳು) ಯಾರೂ ‘ಪರೋಪಜೀವಿ’ಗಳಲ್ಲ. ಒಂದು ದಿನ ಅವರು ಕೆಲಸ ಮಾಡದಿದ್ದರೆ ಅವರಿಗೆ ಅಂದಿನ ಊಟಕ್ಕೇ ಗತಿಯಿರುವುದಿಲ್ಲ ಹಾಗೂ ಇತರರಿಗೆ ಬೇಕಾದ ಸೌಲಭ್ಯ ಸಿಗುವುದಿಲ್ಲ.
ಇದನ್ನೂ ಓದಿ:ಶ್ರೀಸಾಮಾನ್ಯ ಮತ್ತು ತೆರಿಗೆ ಲೆಕ್ಕಾಚಾರ
‘ಉಚಿತ ಕೊಡುಗೆ’ಗಳ ಬಗ್ಗೆ ಮತ್ತೆ ಮತ್ತೆ ಕೇಳಿಬರುವ ಒಂದು ಟೀಕೆಯೆಂದರೆ ‘ಇವುಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿರುವುದಿಲ್ಲ. ಆದರಿಂದ ಯಾವ ಅಭಿವೃದ್ಧಿಯೂ ಆಗುವುದಿಲ್ಲ’. ಅಭಿವೃದ್ಧಿ ಎಂದರೇನು? ಕಲ್ಯಾಣ ರಾಜ್ಯ ಅಥವಾ ವೆಲ್ಫೇರ್ಸ್ಟೇಟ್ ಎಂದರೆ’ ತನ್ನ ಪ್ರಜೆಗಳ,ವಿಶೇಷವಾಗಿ ಅರ್ಥಿಕ-ಸಾಮಾಜಿಕ ಅವಶ್ಯಕತೆ ಇರುವ ಜನರಿಗೆ ಕೊಡುಗೆ. ನಿವೃತ್ತಿ ವೇತನ ಮತ್ತು ಇತರ ರೀಗಳಿಂದೆ ಅವರ ಆರೋಗ್ಯ ಮತ್ತು ಗೌರವಪೂರ್ಣ ಬದುಕು ಇವುಗಳನ್ನು ರಕ್ಷಿಸುವ, ರಾಜ್ಯ, ರಾಷ್ಟ್ರವನ್ನು ‘ಕಲ್ಯಾಣರಾಜ್ಯ, ರಾಷ್ಟ್ರ ಎಂದು ಕರೆಯಬಹುದು. ಈ ತತ್ತವನ್ನೇ- ಎಂದರೆ ಆರೋಗ್ಯ ವಿಮೆ, ಸರ್ಕಾರಿ ಆಸತ್ರೆ, ಶಿಕ್ಷಣ, ವಸತಿಗಾಗಿ ಅನುದಾನಗಳು, ಬಡವರಿಗೆ ಅರ್ಥಿಕ ವರ್ಗಾವಣೆ. ಉಚಿತ ಬಸ್ ಅಥವಾ ಮೆಟ್ರೊ ಪ್ರಯಾಣ, ನಿರುದ್ಯೋಗ ಭತ್ಯೆಯೆಲ್ಲ ಸರ್ಕಾರಗಳ ಕರ್ತವ್ಯ ಎಂದು ಹೇಳುವ ನಮ್ಮ ಸಂವಿಧಾನದ ನಾಲ್ಕನೆಯ ಭಾಗ (ನಿರ್ದೇಶಿತ ತತ್ವಗಳು) ಮಂಡಿಸುತ್ತದೆ. ಉಚಿತ ಕೊಡುಗೆ, ನಿವೃತ್ತಿ ವೇತನ ಅನುದಾನದಂತಹವನ್ನು ಅವಶ್ಯಕತೆ ಇರುವವರಿಗೆ ಕೊಡುವುದು ಸರ್ಕಾರದ ಕರ್ತವ್ಯ. ಯಾವ ದೃಷ್ಟಿಯಿಂದಲೂ ಅವು ‘ಲಂಚ’ವಲ್ಲ.
ಕರ್ನಾಟಕವು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಮತ್ತು ಆನಂತರ ಕಾರ್ಯಗತಗೊಳಿಸಿರುವ ‘ಗ್ಯಾರಂಟಿ’ಗಳೆಂದರೆ ಶಕ್ತಿ (ಮಹಿಳೆಯರಿಗೆ ಉಚಿತ ಪ್ರಯಾಣ), ಅನ್ನಭಾಗ್ಯ, ಗೃಹಜ್ಯೋತಿ (200 ಯುನಿಟ್ ವರೆಗೆ ಉಚಿತ ವಿದ್ಯುತ್), ಗೃಹಲಕ್ಷ್ಮಿ (ಮನೆಯ ಯಜ ಮಾನಿಗೆ ಮಾಹೆಯಾನ ₹ 2,000) ಮತ್ತು ಯುವನಿಧಿ (ಕೆಲಸ ಸಿಗದಿರುವ ಯುವಕ-ಯುವತಿಯರಿಗೆ ಕೊಡುವ ಸಹಾಯಧನ), ಈ ‘ಗ್ಯಾರಂಟಿ’ಗಳ ಮೂಲಕ ಕರ್ನಾಟಕ ಮತ್ತು ಇತರ ರಾಜ್ಯಗಳು ಮಾಡುತ್ತಿರುವುದು ಸಂವಿಧಾನ ಹೇಳುವ ಕರ್ತವ್ಯವನ್ನೇ
ಇನ್ನೂ ಮುಂದುವರಿದು ಹೇಳಬೇಕಾದರೆ, ಅಭಿವೃದ್ಧಿ ಎಂದರೆ ಬರೀ ಬುಲೆಟ್ ಟ್ರೇನ್ಗಳಲ್ಲ, ಬೃಹತ್ ಪ್ರತಿಮೆಗಳಲ್ಲ, ಲಕ್ಷುರಿ ಕಾರುಗಳಲ್ಲ; ಆರ್ಥಿಕ ನೆಲೆಯಲ್ಲಿ ಕಟ್ಟಕಡೆಯ ಪ್ರಜೆಗೂ ಗೌರವಪೂರ್ಣ ಬಾಳೊಂದನ್ನು ಕಟ್ಟಿಕೊಡುವುದು ನಿಜವಾದ ಅಭಿವೃದ್ಧಿ. ಹಾಗೆಯೇ, ಯಾರು ಪರೋಪಜೀವಿಗಳು, ಯಾರು ಅಲ್ಲ ಎಂದು ನಾಮನಿರ್ದೇಶನ ಮಾಡುವುದು ಎಲ್ಲರಿಗೂ ಸಮಾನ ಅವಕಾಶ ಹಾಗೂ ಸಂಪತ್ತಿನ ಸಮಾನ ವಿತರಣೆ ಇರುವಾಗ ಸಾಧ್ಯ ಅನೇಕ ಸಂದರ್ಭಗಳಲ್ಲಿ, ಮುಖ್ಯವಾಗಿ ಚುನಾವಣಾ ಬಾಂಡ್ಗಳನ್ನು ನಿಷೇಧಿಸಿದಾಗ, ಮತ್ತೆ ಮತ್ತೆ ಸುಪ್ರೀಂ ಕೋರ್ಟ್ ಹೇಳಿದ್ದು ‘ಎಲ್ಲರಿಗೂ ಸಮಾನ ಸ್ಥಿತಿಯ ಮೈದಾನವಿರಬೇಕು’ (ಲೆವೆಲ್ ಫೀಲ್ಸ್). ಅಂತಹ ಪರಿಸ್ಥಿತಿ ನಿರ್ಮಾಣವಾಗುವವರೆಗೆ” ಉಚಿತ ಕೊಡುಗೆಗಳು, ಮೀಸಲಾತಿಯಂತಹವು ಮುಂದುವರಿಯುತ್ತವೆ, ಮುಂದುವರಿಯಬೇಕು.