ಹೂಡಿಕೆಗೆ ಪೂರಕವಾದ ನೀತಿ

ಹೂಡಿಕೆಗೆ ಪೂರಕವಾದ ನೀತಿ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸರ್ಕಾರದ ಉತ್ಸಾಹವನ್ನು ಹೆಚ್ಚಿಸಿದೆ. ವಿವಿಧ ರಾಷ್ಟ್ರಗಳು ಕರ್ನಾಟಕದಲ್ಲಿನ ಹೂಡಿಕೆ ಸ್ನೇಹಿ ವಾತಾವರಣವನ್ನು ಮನಗಂಡಿದ್ದು, ಉದ್ಯಮದಲ್ಲಿ ಅವಕಾಶ ಹೊಸ ತಂತ್ರಜ್ಞಾನಗಳು ಕೌಶಲ ಸೇರಿದಂತೆ ವಿವಿಧ ವಿಷಯಗಳು ಗಮನ ಸೆಳೆದಿವೆ. ಇದೇ ಸಂದರ್ಭದಲ್ಲಿ ಮಂಗಳವಾರದಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈಗಾರಿಕಾ ಸಚಿವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಉಪಸ್ಥಿತಿಯಲ್ಲಿ ಕರ್ನಾಟಕದ ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ. ಹೊಸ ಕೈಗಾರಿಕಾ ನೀತಿ ಅಸ್ತಿತ್ವಕ್ಕೆ ಬರಬೇಕು ಎಂಬ ಬೇಡಿಕೆ ಬಹುದಿನಗಳಿಂದಲೂ ಇತ್ತು. ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲೇ ಅದು ಈಡೇರಿದೆ.

ಕರ್ನಾಟಕದಲ್ಲಿ ಉದ್ಯಮ ವಲಯಕ್ಕೆ ನಿಸ್ಸಂಶಯವಾಗಿಯೂ ಹೇರಳ ಅವಕಾಶಗಳಿವೆ. ಆದರೆ, ಇದಕ್ಕೆ ಸಂಬಂಧಪಟ್ಟ ಸೂಕ್ತ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಿದಾಗ ಉತ್ತಮ ಫಲಿತಾಂಶ ಸಾಧ್ಯ.. ಸರ್ಕಾರದ ಪ್ರಕಾರ, ಹೊಸ ಕೈಗಾರಿಕಾ ನೀತಿ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಿದೆ. ಐದು ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು ಸನ್-ರೈಸ್ ವಲಯದಲ್ಲಿ ರಾಜ್ಯವನ್ನು ದೇಶಕ್ಕೆ ನಂ.1 ಆಗಿ ಪ್ರತಿಷ್ಠಾಪಿಸುವ ಹೆಗ್ಗುರಿಯನ್ನು ನೂತನ ಕೈಗಾರಿಕಾ ನೀತಿ ಹೊಂದಿದೆ. ಬೆಂಗಳೂರಿನ ಹೊರಗೆ ಹಾಗೂ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆ, ತಾಲೂಕುಗಳಿಗೆ ವಿಶೇಷ ಆದ್ಯತೆ, ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡುವುದು ನೀತಿಯ ಪ್ರಮುಖ ಅಂಶಗಳಲ್ಲೊಂದಾಗಿದೆ.

ಇದನ್ನೂ ಓದಿ:ಆರ್‌ಸಿಬಿಗೆ ಪಾಟೀದಾ‌ರ್ ಸರದಾರ

ಉದ್ಯಮಗಳ ಸಾಮರ್ಥ್ಯ ಮತ್ತು ಬೆಳವಣಿಗೆಗೆ ಅನುಗುಣವಾಗಿ ಇದೇ ಮೊದಲ ಬಾರಿಗೆ ವಲಯಗಳನ್ನು ರೂಪಿಸಲಾಗಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ ಇರುವಂತೆ ಎಚ್ಚರವಹಿಸಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹೊಸ ಕೈಗಾರಿಕಾ ನೀತಿಯಲ್ಲಿ ಡಿ.ಎಂ ನಂಜುಂಡಪ್ಪ ವರದಿಯನ್ನು ಆಧರಿಸಿ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ, ತಾಲೂಕುಗಳನ್ನು ಝೂನ್-1 ಮತ್ತು 2ರಡಿ ತರಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಝೂನ್-3 ಎಂದು ಗುರುತಿಸಲಾಗಿದೆ. ಕೆಐಎಡಿಬಿ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಶೇಕಡ 30ರಷ್ಟು ಜಾಗ ಮೀಸಲಿಟ್ಟು, ತಂತ್ರಜ್ಞಾನದ ಉನ್ನತೀಕರಣ, ಕೌಶಲಾಭಿವೃದ್ಧಿ, ಉತ್ಕೃಷ್ಟತಾ ಪುರಸ್ಕಾರ, ಕ್ಲಸ್ಟರ್ಸ್ ಅಭಿವೃದ್ಧಿ, ಆಕರ್ಷಕ ಪ್ರೋತ್ಸಾಹಕ ಭತ್ಯೆ ಮತ್ತು ರಿಯಾಯಿತಿಗಳಿಗೆ ಗಮನಹರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ.

ಉದ್ಯಮ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ, ತಾಲೂಕುಗಳಲ್ಲಿ ಹೂಡಿಕೆ ಮಾಡಿ, ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವುದು ಸೂಕ್ತ ನಿರ್ಧಾರವಾಗಿದೆ. ಉದ್ಯಮಗಳು ಬರೀ ಬೆಂಗಳೂರು ಕೇಂದ್ರೀತವಾಗದೆ, ರಾಜ್ಯದ ಎಲ್ಲ ಭಾಗಗಳಲ್ಲೂ ಸ್ಥಾಪನೆಯಾದರೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಿಣಾಮಕಾರಿ ಮದ್ದು ದೊರೆತಂತಾಗುತ್ತದೆ. ಆದರೆ, ಎಲ್ಲ ಪ್ರದೇಶಗಳಿಗೂ ಕೈಗಾರಿಕೆಗಳು ಬರಬೇಕಾದರೆ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲೂ, ಹಿಂದುಳಿದ ತಾಲೂಕುಗಳಲ್ಲೂ . ಮೂಲಸೌಕರ್ಯ ವಿಸ್ತರಣೆ ಯಾಗಬೇಕು .ಈಗಲೂ ಹಲವು ನಗರ ಹಾಗೂ ,ತಾಲೂಕುಗಳಿಗೆ ಉತ್ತಮ ರಸ್ತೆ ,ಶುದ್ಧ ಕುಡಿಯುವ ನೀರು, ಮರೀಚಿಕೆಯಾಗಿದ್ದು, ವಿದ್ಯುತ್ ಸಮಸ್ಯೆಯೂ ಕಾಡುತ್ತಿದೆ .ಇಂಥ ಸಮಸ್ಯೆಗಳ ವಿವರಣೆಗೆ ಮುಂದಾದಾಗಲೇ ಉದ್ಯಮಗಳು ಬೆಂಗಳೂರು ಹೊರತುಪಡಿಸಿ ಇತರ ನಗರಗಳಿಗೆ ಬರಲು ಸಾಧ್ಯ .ಮುಂಬರುವ ದಿನಗಳಲ್ಲಿ ಹೊಸ ಕೈಗಾರಿಕಾ ನೀತಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬರುವಂತಾಗಲಿ. ಈ ಮೂಲಕ ಉದ್ಯೋಗ ಸೃಷ್ಟಿಯ ಆಶಯ ಈಡೇರಿದರೆ. ದುಡಿಯುವ ವರ್ಗಕ್ಕೆ ,ಯುವ ಸಮೂಹಕ್ಕೆ ದೊಡ್ಡ ಕೊಡುಗೆ ದೊರೆತಂತಾಗುತ್ತದೆ.

Leave a Comment