ಆಧ್ಯಾತ್ಮಿಕ ಆಶ್ರಯವೆಂದರೆ ತಳವಿಲ್ಲದ ಆಳದಂತೆ!

ಆಧ್ಯಾತ್ಮಿಕ ಆಶ್ರಯವೆಂದರೆ ತಳವಿಲ್ಲದ ಆಳದಂತೆ!

ಆಧ್ಯಾತ್ಮಿಕ ಪಥದಲ್ಲಿ ಮೂರು ಅಂಶಗಳಿವೆ: ಬುದ್ಧ ಗುರು ಅಥವಾ ಜ್ಞಾನಿ; ಸಂಘ ಗುಂಪು ಮತ್ತು ಧರ್ಮ – ನಿಮ್ಮ ಸ್ವಭಾವ, ನಿಮ್ಮ ನಿಜ ಸ್ವಭಾವ. ಬುದ್ಧನ ಸಮೀಪ ಹೋದಷ್ಟೂ ಹೆಚ್ಚು ಆಕರ್ಷಣೆಯನ್ನು ಕಾಣುವಿರಿ; ಜ್ಞಾನಿಗಳಿಂದ ನೀವು ದಣಿಯುವುದೇ ಇಲ್ಲ. ಸಮೀಪವಾದಷ್ಟೂ ಹೆಚ್ಚು ನವೀನವಾಗುತ್ತದೆ. ಹೆಚ್ಚು ಪ್ರೇಮವನ್ನು ಅನುಭವಿಸುತ್ತೀರಿ. ಅದೊಂದು ತಳವಿಲ್ಲದ ಆಳದಂತೆ.

ಗುರುಗಳು ದ್ವಾರ ಮತ್ತು ದ್ವಾರವು ಜಗತ್ತಿಗಿಂತಲೂ ಆಕರ್ಷಕವಾಗಿರುತ್ತದೆ. ಇದರಿಂದಾಗಿ ಜನರು ದ್ವಾರದ ಬಳಿಗೆ ಬರುತ್ತಾರೆ. ಯಾರೋ ಬೀದಿಯಲ್ಲಿದ್ದಾರೆ ಮತ್ತು ಮಳೆ ಗುಡುಗು ಇದೆ ಉರಿಬಿಸಿಲಿದೆ. ಅವರಿಗೆ ಆಶ್ರಯಬೇಕು. ಸುತ್ತಲೂ ನೋಡುತ್ತಾರೆ ಮತ್ತು ದ್ವಾರವನ್ನು ಕಾಣುತ್ತಾರೆ. ಸ್ವಾಗತಿಸುತ್ತಿರುತ್ತದೆ, ಹೆಚ್ಚು ಆಹ್ಲಾದಕರವಾಗಿರುತ್ತದೆ. ಜಗತ್ತಿನ ಯಾವುದೂ ನಿಮಗೆ ಅಷ್ಟು ಶಾಂತಿ, ಸಂತೋಷ ಮತ್ತು ಸುಖವನ್ನು ನೀಡುವುದಿಲ್ಲ. ದ್ವಾರದ ಬಳಿ ಬಂದ ನಂತರ ಒಳ ಪ್ರವೇಶಿಸುತ್ತೀರಿ ಮತ್ತು ಜಗತ್ತನ್ನು ಅಲ್ಲಿಂದ ನೋಡುತ್ತೀರಿ. ಗುರುಗಳ ಕಣ್ಣಿನಿಂದ ಜಗತ್ತನ್ನು ನೋಡುತ್ತೀರಿ. ನೀವು ಗುರುಗಳ ಬಳಿಗೆ ಬಂದಿರುವಿರಿ ಎಂಬುದರ ಲಕ್ಷಣವಿದು. ಇಲ್ಲವಾದರೆ ಬೀದಿಯಲ್ಲೆ ನಿಂತುಬಾಗಿಲನ್ನು ನೋಡುತ್ತಲಿರುತ್ತೀರಿ.
ಒಮ್ಮೆ ಪ್ರವೇಶಿಸಿದ ನಂತರ ಗುರುಗಳ ಕಣ್ಣಿನಿಂದ ಇಡೀ ಜಗತ್ತನ್ನು ಕಾಣುತ್ತೀರಿ. ಇದರ ಅರ್ಥವೇನು? ನೀವು ಎದುರಿಸುವ ಪ್ರತಿಯೊಂದು ಪರಿಸ್ಥಿತಿಯಲ್ಲೂ, ಈ ಪರಿಸ್ಥಿತಿ ಗುರುಗಳ ಎದುರಿಗೆ ಬಂದರೆ ಅದನ್ನು

ಅವರು ಹೇಗೆ ನಿಭಾಯಿಸುತ್ತಿದ್ದರು? ಎಂದು ಆಲೋಚಿಸುತ್ತಿರಿ. ಗುರುಗಳನ್ನು ಈ 8 ರೀತಿಯಾಗಿ ಯಾರಾದರೂ ಅವರು ಹೇಗೆ ನಿಭಾಯಿಸುತ್ತಿದ್ದರು? ಎಂದು ಆಲೋಚಿಸುತ್ತೀರಿ. ಗುರುಗಳನ್ನು ಈ ರೀತಿ ಯಾಗಿ ಯಾರಾದರೂ ನಿಂದಿಸಿದರೆ ಅದನ್ನು ಅವರು ಹೇಗೆ ನಿಭಾಯಿಸುತ್ತಿದ್ದರು ಎಂದು ಆಲೋಚಿಸುತ್ತಿದ್ದರು .

ಪೋಸ್ಟ್ ಆಫೀಸಿನ ಹುದ್ದೆಗಳು ಆನ್ಲೈನ್ ಅಪ್ಲೈ

ಗುರುಗಳ ಕಣ್ಣಿನಿಂದ ಸದಾ ಜಗತ್ತನ್ನು ನೋಡಿ ಆಗ ಜಗತ್ತು ಮತ್ತಷ್ಟು ಸುಂದರವಾಗಿ ಕಾಣುತ್ತದೆಗು. ಪ್ರೇಮ, ಸಂತೋಷ, ಸಹಕಾರ, ಕರುಣಿ ಮತ್ತು ಎಲ್ಲಾ ಸದ್ಗುಣಗಳಿಂದಲೂ ತುಂಬಿದಂತೆ ಕಾಣುತ್ತದೆ. ಜಗತ್ತಿನಲ್ಲಿ ಹೆಚ್ಚು ವಿನೋದವಿದೆ. ಒಳನಿಂತು ಬಾಗಿಲಿನಿಂದ ನೋಡಿದಾಗ ಭಯವಿರುವುದಿಲ್ಲ, ಏಕೆಂದರೆ ಆಗ ಆಶ್ರಯವಿರುತ್ತದೆ.

ಇದನ್ನೂ ಓದಿ: ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ

ಜಗತ್ತಿನ ಎಲ್ಲಾ ಸಂಬಂಧಗಳೂ ಮೇಲು ಕೆಳಗಾಗುತ್ತವೆ. ಅವುಗಳನ್ನು ಸಂಬಂಧಗಳನ್ನು ರಾಗ ಹೊಂದುತ್ತೇಹವಿದೆ. ಮಾದೇ ಜಗತ್ತು, ಇದೇ ಮುರಿಯುತ್ತೀರಿ. ರಾಗು ಮತ್ತು ದೇಪ ಸಂಬಂಧವಲ್ಲ. ಗುರುಗಳು ಎಂದಾರ ಆದರೆ ಗುರುಗಳನ್ನು ನಿಮ್ಮ ಜಗತ್ತಿನ ಒಂದು ಭಾಗವಾಗಿ ಮಾಡಿದ ಇರುವಿಗೆ ಗುರುಗಳ ಇರುವಿಕೆಯನ್ನು ಅನುಭವಿಸಿ. ಅದು ಅನಂತವಾದದ್ದು. ಆ ಇರುವಿಕೆ ನಿಮ್ಮೊಡನೆ ಮೊದಲಿನಿಂದಲೂ ಇದೆ, ಈಗಲೂ ನಿಮ್ಮೊಡನಿದೆ ಮತ್ತು ಭವಿಷ್ಯದಲ್ಲೂ ನಿಮ್ಮೊಡನಿರುತ್ತದೆ.

ಎರಡನೆಯ ಅಂಶ ಅದರೆ ಸಂಘ, ಗುಂಪು, ಗುಂಪು ದೂರದಿಂದ ಬಹಳ ಆಕರ್ಷಕವಾಗಿರುತ್ತದೆ. ಆದರೆ ಅದಕ್ಕೆ ಹತ್ತಿರವಾಗುತ್ತಿದ್ದಂತೆಯೆ ನಿಮ್ಮ ಎಲ್ಲಾ ಗುಂಡಿಗಳನ್ನೂ ಒತ್ತುತ್ತದೆ. ನಿಮ್ಮೊಳಗಿನಿಂದ ಬೇಡದಿರುವ ವಿಷಯಗಳೆಲ್ಲವನ್ನೂ ಹೊರತರುತ್ತದೆ. ದೂರದಿಂದ ಅಥವಾ ಅಲ್ಪ ಪರಿಚಯದಿಂದ ಯಾವುದೇ ಗುಂಪು ಬಹಳಒಳ್ಳೆಯದಾಗಿರುತ್ತದೆ. ಯಾವದಾದರೊಂದು ಗಂಪು ಬಹಳ ಒಳ್ಳೆಯದು ಎಂದು ನಿಮಗನಿಸಿದರೆ, ಆ ಗುಂಪಿನೊಡನೆ ನೀವಿನ್ನೂ ಪೂರ್ಣವಾಗಿ ಬೆರೆತಿಲ್ಲವೆಂದಾಯಿತು. ಆ ಗುಂಪಿನ ಪೂರ್ಣ ಭಾಗವಾಗಿಬಿಟ್ಟರೆ, ಏನೋ ಒಂದು ಕಿರಿಕಿರಿತನ ಎದ್ದು ಬರುವುದನ್ನು ಕಾಣಬಹುದು. ಆದ್ದರಿಂದಲೆ ನಿಮ್ಮ ಗುಂಪಿಗಿಂತಲೂ ಮತ್ತೊಂದು ಗುಂಪು ಉತ್ತಮವಾಗಿರುವಂತೆ ಅನಿಸುತ್ತದೆ.

ಸಂಘದಲ್ಲಿ ಅನೇಕ ಜನರಿರುವುದರಿಂದ ನಿಮ್ಮ ಮನಸ್ಸು ಛಿದ್ರವಾಗುತ್ತದೆ, ಚದುರುತ್ತದೆ. ಇದು ಸಂಘದ ಸ್ವಭಾವವಾದರೂ ಸಂಘವು ಸಹಾಯಕವಾಗಿರುತ್ತದೆ. ಸಂಘವು ಸದಾಕಾಲ ವಿಕರ್ಷಣೆಯನ್ನೆ ಉಂಟು ಮಾಡುತ್ತಿದ್ದರೆ, ಯಾರೂ ಸಂಘದ ಭಾಗವಾಗುತ್ತಿರಲಿಲ್ಲ. ಬುದ್ಧ ನಿಮ್ಮನ್ನು ಉತ್ಥಾಪಿಸುತ್ತಾನೆ.ಕೃಪೆಯಿಂದಪ್ರೇಮದಿಂದ, ಜ್ಞಾನದಿಂದ ನಿಮ್ಮನ್ನು ಮೇಲಕ್ಕೆಳೆಯುತ್ತಾನೆ. ಬುದ್ದ ನಿಮ್ಮನ್ನು ಮೇಲಿಂದ ಎಳೆಯುತ್ತಾನೆ ಮತ್ತು ಸಂಘವು ನಿಮ್ಮನ್ನು ಕೆಳಗಿನಿಂದ ಮೇಲಕ್ಕೆ ತಳ್ಳುತ್ತದೆ. ಧರ್ಮ ಮಧ್ಯದಲ್ಲಿರುತ್ತದೆ. ವಿಪರೀತಗಳೆಡೆಗೆ ಹೋಗದಿರುವುದು ನಿಮ್ಮ ಸ್ವಭಾವ. ಸಮತೋಲನದಿಂದಿರುವುದು, ನಿಮ್ಮ ಹೃದಯಾಂತರಾಳದಿಂದ ಮುಗುಳ್ಳಗುವುದು, ಇಡೀ ಅಸ್ತಿತ್ವ ಹೇಗಿದೆಯೊ ಹಾಗೆಯೆ ಸ್ವೀಕರಿಸುವುದು ನಮ್ಮ ಸ್ವಭಾವ. ಸಾಮಾನ್ಯವಾಗಿ ಬುದ್ಧನಿಗಾಗಿ ಹಂಬಲಿಸುತ್ತೀರಿ ಮತ್ತು ಸಂಘವನ್ನು ದ್ವೇಷಿಸುತ್ತೀರಿ ಮತ್ತು ನೀವು ಬದಲಿಸಲು ಯತ್ನಿಸುತ್ತೀರಿ. ಆದರೆ ಬುದ್ಧ ಅಥವಾ ಸಂಘವನ್ನು ಬದಲಿಸುವುದರಿಂದ ನೀವು ಬದಲಾಗುವುದಿಲ್ಲ.

ಮುಖ್ಯ ಉದ್ದೇಶವೆಂದರೆ ನಿಮ್ಮ ಅಂತರಾಳದ ಕೇಂದ್ರದೆಡೆಗೆ ಬರುವುದು, ಎಂದರೆ ನಿಮ್ಮ ಧರ್ಮವನ್ನು ಕಂಡುಕೊಳ್ಳುವುದು. ಇದು ಮೂರನೆಯ ಅಂಶ. ಧರ್ಮ ಎಂದರೇನು? ಈ ಕ್ಷಣ ಹೇಗಿದೆಯೊ ಹಾಗೆ ನನಗೆ ನೀಡಲಾಗಿದೆ ಮತ್ತು ಇದನ್ನು ಈ ರೀತಿಯಾಗಿ ಸ್ವೀಕರಿಸುತ್ತಿದ್ದೇನೆ ಎಂದು ತಿಳಿಯುವುದು. ಈ ಕ್ಷಣದ ಆಳವಾದ ಸ್ವೀಕಾರ, ಪ್ರತಿ ಕ್ಷಣದ ಆಳವಾದ ಸ್ವೀಕಾರವೇ ಧರ್ಮ. ಇದು ಮೇಲೆದ್ದರೆ ಸಮಸ್ಯೆಯೇ ಇರುವುದಿಲ್ಲ. ಆದ್ದರಿಂದ ನೀವು ನಿಮ್ಮ ಧರ್ಮದಲ್ಲಿದ್ದಾಗ, ನಿಮ್ಮ ಸ್ವಭಾವದಲ್ಲಿದ್ದಾಗ ನೀವು ಜಗತ್ತನ್ನು, ದೈವವನ್ನು ದೂಷಿಸುವುದಿಲ್ಲ.

Leave a Comment