‘ಹೈಟೆಕ್ ಹೂಡಿಕೆ’ಗಿಂತಲೂ ಸ್ಥಳೀಯರ ಅಭಿವೃದ್ಧಿ ಮುಖ್ಯ

‘ಹೈಟೆಕ್ ಹೂಡಿಕೆ’ಗಿಂತಲೂ ಸ್ಥಳೀಯರ ಅಭಿವೃದ್ಧಿ ಮುಖ್ಯ

ಕರ್ನಾಟಕದ 2025-26ರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳ ನಡುವೆ ಹೇಗೆ ಸಮತೋಲನ ಸಾಧಿಸಲಾಗುತ್ತದೆ ಎನ್ನುವ ಬಗ್ಗೆ ತೀವ್ರವಾದ ಕುತೂಹಲವಿದೆ.ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕರು ಮುಖ್ಯಮಂತ್ರಿಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಗ್ಯಾರಂಟಿಗಳನ್ನು ಕಡಿತಗೊಳಿಸಿದರೆ, ಕಾಂಗ್ರೆಸ್‌ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಈ ಬಾರಿಯ ಬಜೆಟ್ ಅನ್ನು ಕೂಡ ಮತ್ತೊಂದು ಸಮತೋಲನದ ಕ್ರಿಯೆ ಎಂದು ಭಾವಿಸುವರೋ ಅಥವಾ ತಮ್ಮನ್ನು ಮತ್ತು ಮುಂದಿನ ಹಣಕಾಸು ಸಚಿವರನ್ನು ಈ ಇಬ್ಬಂದಿತನದಿಂದ ಪಾರು ಮಾಡುವರೋ ಎನ್ನುವುದು ಆಸಕ್ತಿಕರವಾಗಿದೆಈ ಇಬ್ಬಂದಿತನದಿಂದ ಪಾರಾಗಲು ಇರುವ ಮಾರ್ಗವೆಂದರೆ, ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವಂಥ ಅಭಿವೃದ್ಧಿಯ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಮತ್ತು ಈ ಮೂಲಕ ಗ್ಯಾರಂಟಗಳಿಗೆ ಇರುವ ಬೇಡಿಕೆಯನ್ನು ಕಡಿಮೆ ಮಾಡುವುದು. ಅದಕ್ಕೂ ಮುನ್ನ ಅವರು ಕರ್ನಾಟಕದ ಸದ್ಯದ ಅಭಿವೃದ್ಧಿ ಮಾದರಿಯು ಗ್ಯಾರಂಟಿ ಮತ್ತು ಸಬ್ಸಿಡಿಗಳನ್ನು ಏಕೆ ಅನಿವಾರ್ಯವಾಗಿಸಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ.


ಇತರೆ ಕೆಲವು ರಾಜ್ಯಗಳಂತೆ ಕರ್ನಾಟಕದಲ್ಲೂ ಗಮನಾರ್ಹ ಪ್ರಮಾಣದಲ್ಲಿ ಜನರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ತಮ್ಮ ಸಾಂಪ್ರದಾಯಿಕ ಕಸುಬು ತೊರೆಯುತ್ತಿರುವ ಕೃಷಿಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ ‘ಗ್ರಾಮೀಣ ಬಂಡವಾಳವು ಕೃಷಿ ಕ್ಷೇತ್ರದಿಂದ ಹೊರಗೆ ಹರಿಯುವುದು ಅಗತ್ಯವಾಗಿದೆ. ಕೃಷಿ ವಲಯದ ಬಂಡವಾಳವನ್ನು ಉತ್ಪಾದನಾ ವಲಯ ಮತ್ತು ಸೇವಾ ವಲಯಕ್ಕೆ ವ್ಯಯಿಸುವುದು ಸದ್ಯ ಕೆಲವೇ ಜಿಲ್ಲೆಗಳಿಗೆ, ವಿಶೇಷವಾಗಿ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿದೆ. ಹೀಗಾಗಿ ಕೃಷಿ ಕ್ಷೇತ್ರ ತೊರೆಯುತ್ತಿರುವವರಿಗೆ ಉದ್ಯೋಗ ಕಲ್ಪಿಸಲು ಕೆಲವೇ ಕೆಲವು ಉದ್ಯಮಗಳು ಲಭ್ಯ ಇವೆ.ಆದರೆ, ಈ ತೀವ್ರವಾದ ಆರ್ಥಿಕ ಒತ್ತಡವು, ರಾಜ್ಯದ ಒಟ್ಟಾರೆ ಬೆಳವಣಿಗೆಯಲ್ಲಿ, ಅದೂ ಬೆಂಗಳೂರು ಕೇಂದ್ರಿತವಾದ ಮಾಹಿತಿ ತಂತ್ರಜ್ಞಾನ ಉದ್ಯಮ ಕೇಂದ್ರಿತ ಬೆಳವಣಿಗೆಯಲ್ಲಿ ಗೋಚರವಾಗುತ್ತಿಲ್ಲ. ಕರ್ನಾಟಕದ ಒಟ್ಟು ರಾಜ್ಯ ಅಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಮಾಹಿತಿ ತಂತ್ರಜ್ಞಾನ ಉದ್ಯಮ ಮತ್ತು ಬೆಂಗಳೂರು ನಗರ ಜಿಲ್ಲೆಯ ಪಾಲು ಹೆಚ್ಚಾಗಿದೆ.

ಬೆಂಗಳೂರು ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮ ಕೇಂದ್ರಿತ ಈ ಮಾದರಿಯ ಅಭಿವೃದ್ಧಿಯಿಂದಾಗಿ ತಲಾ ಆದಾಯವು ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಸಮಸ್ಯೆ ಏನೆಂದರೆ, ಈ ಬೆಳವಣಿಗೆಯ ಫಲವು ಕೃಷಿ ಕ್ಷೇತ್ರ ತೊರೆದು ಬರುತ್ತಿರುವವರಿಗೆ ದಕ್ಕುತ್ತಿಲ್ಲ. ಕೃಷಿ ರಂಗದಿಂದ ಹೊರಬರುತ್ತಿರುವವರು ಅವರ ಮುಂದಿನ ತಲೆಮಾರು ಕೂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಗಿಟ್ಟಿಸಲು ಅಗತ್ಯವಾದ ಕೌಶಲಗಳನ್ನು ಪಡೆದಿಲ್ಲ.ಆರ್ಥಿಕಒತ್ತಡವನ್ನು ಇನ್ನಷ್ಟು ಹೆಚ್ಚಿಸಿರುವ ಸಂಗತಿ ಏನೆಂದರೆ, ಕೃಷಿ ಬಂಡವಾಳವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸುವಂಥ ವ್ಯವಸ್ಥೆಯೇ ನಮ್ಮಲ್ಲಿ ರೂಪುಗೊಂಡಿಲ್ಲ. ಹೀಗೆ ಬೆಂಗಳೂರಿನ (ಮತ್ತು ಕರ್ನಾಟಕದ) ಅಭಿವೃದ್ಧಿಯು ಜಾಗತಿಕ ಬಂಡವಾಳವನ್ನು (ದೇಶೀಯ ಮತ್ತು ವಿದೇಶಿ) ಅವಲಂಬಿಸಿದೆ. ಜಾಗತಿಕ ಬಂಡವಾಳವನ್ನು ಆಕರ್ಷಿಸುವ ಸಲುವಾಗಿ ನಗರಾಭಿವೃದ್ಧಿಯ ಉಸ್ತುವಾರಿ ಗೊತ್ತಿರುವವರು ವಿಶ್ವ ದರ್ಜೆ ಎಂದು ತಾವು ಭಾವಿಸಿರುವಂಥ ಮೂಲ ಸೌಕರ್ಯ ಕಲ್ಪಿಸಲು ಹೊರಟಿದ್ದಾರೆ.

ಇದನ್ನೂ ಓದಿ:ತ್ರಿಭಾಷಾ ಸೂತ್ರ ಉರುಳಾಗಿರುವುದೇಕೆ?

ಈ ದಿಸೆಯಲ್ಲಿ ಅವರು ಎಲ್ಲಗ್ಯಾರಂಟಿಗಳಿಗೂ ವರ್ಷಕ್ಕೆ ತಗಲುವ ಒಟ್ಟು ಮೊತ್ತದಷ್ಟು ವೆಚ್ಚದ ಸುರಂಗ ರಸ್ತೆ ನಿರ್ಮಾಣದಂತಹ ಯೋಜನೆಗಳನ್ನುರೂಪಿಸುತ್ತಿದ್ದಾರೆ. ವಿಶ್ವದರ್ಜೆಯ ಮೂಲಸೌಕರ್ಯದ ಹೆಸರಿನ ಇಂಥ ಹೂಡಿಕೆಗಳು ಸಾಮಾನ್ಯವಾಗಿ ಹೈಟೆಕ್ ಮತ್ತು ಭಾರಿಬಂಡವಾಳ ಬೇಡುವ ಯೋಜನೆಗಳಾಗಿರುತ್ತವೆ. ಕೃಷಿ ವಲಯ ತೊರೆದು ಬರುತ್ತಿರುವವರಿಗೆ ಇಂಥ ಯೋಜನೆಗಳಿಂದಆಗುವಲಾಭ ಅತ್ಯಲ್ಪ.ಕರ್ನಾಟಕವು ಒಂದೆಡೆ ಬೆಂಗಳೂರಿನಲ್ಲಿ ವಿಶ್ವದರ್ಜೆಯಮೂಲಸೌಕರ್ಯ ಯೋಜನೆಗಳನ್ನು ರೂಪಿಸುವ, ಮತ್ತೊಂದೆಡೆ ರಾಜಧಾನಿಯ ಆಚೆಗೆ ಬಡತನದ ನಿವಾರಣೆಗೆ ಯೋಜನೆಗಳನ್ನು ಹಮ್ಮಿಕೊಳ್ಳುವ ಇಬ್ಬಗೆಯ ರಚನೆಯನ್ನು ರೂಪಿಸಿಕೊಂಡಿದ್ದು, ಇದಕ್ಕಾಗಿ ರಾಜಕೀಯ ಬೆಲೆಯನ್ನು ತೆರಬೇಕಿದೆ. 1990ರ ಮಾಹಿತಿ ತಂತ್ರಜ್ಞಾನದ ಉತ್ಕರ್ಷದ ನಂತರ ಯಾವುದೇ ಪಕ್ಷ ಎರಡನೇ ಬಾರಿಗೆ ಅಧಿಕಾರ ಪಡೆದಿಲ್ಲ. ಈ ಅನಿವಾರ್ಯದಿಂದ ಪಾರಾಗಲು ಸರ್ಕಾರಗಳು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಹಣ ವ್ಯಯಿಸುತ್ತಿವೆ. ಗ್ಯಾರಂಟಿ ಯೋಜನೆಗಳು ಈ ಕಲ್ಯಾಣ ಕಾರ್ಯಕ್ರಮಗಳ ಹೊಸ ಮಾದರಿ ಅಷ್ಟೆ.


ಶಾಸಕರು ಅಭಿವೃದ್ಧಿಗಾಗಿ ಹೆಚ್ಚು ಅನುದಾನ ಕೇಳುತ್ತಿರುವುದು, ಕಲ್ಯಾಣ ಯೋಜನೆಗಳಿಗಾಗಿ ಹಣ ವ್ಯಯಿಸುತ್ತಿರುವುದನ್ನು ವಿರೋಧಿಸುವ ರಾಜಕೀಯ ತಂತ್ರವಾಗಿರಬಹುದು ಎನ್ನುವ ಭಾವನೆ ಮೂಡಿಸಬಹುದು. ಆದರೆ, ಇದು ತಪ್ಪುದಾರಿಗೆ ಎಳೆಯುವಂತಹದ್ದು ವಾಸ್ತವವಾಗಿ ಅಭಿವೃದ್ಧಿಯ ನೆಪದಲ್ಲಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ವೆಚ್ಚ ಮಾಡುವುದಕ್ಕಾಗಿ ಅನುದಾನ ಕೇಳುತ್ತಿದ್ದಾರೆ. ಕ್ಷೇತ್ರಾಭಿವೃದ್ಧಿ ನಿಧಿಯನ್ನು ಕ್ಷೇತ್ರಕ್ಕೆ ತಮ್ಮ ಕೊಡುಗೆ ಎನ್ನುವಂತೆ ಶಾಸಕರು ವ್ಯಯಿಸಬಹುದು. ಮೌಲ್ಯಗಳ ಬಗ್ಗೆ ತಲೆಕೆಡಿಸಿ ಕೊಳ್ಳದ ಕೆಲವರು ಈ ಅನುದಾನದ ಗಮನಾರ್ಹ ಮೊತ್ತವನ್ನು ವೈಯಕ್ತಿಕ ಜಾಲಗಳಿಗೆ ತಿರುಗಿಸಿ ವ್ಯಯಿಸಿ, ನಂತರ ನೇರವಾಗಿ ಇದು ತಮ್ಮ ವೈಯಕ್ತಿಕ ಕೊಡುಗೆ ಎಂಬಂತೆ ಬಿಂಬಿಸಿಕೊಳ್ಳಬಹುದು.
ಒಂದು ವೇಳೆ ಶಾಸಕರು ಈ ಅನುದಾನವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಂಡರೂ, ಅವರು ಕೆಲವೊಂದು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲರ ಒಳಗೊಳ್ಳುವಿಕೆಗೆ ಸಂಬಂಧಿಸಿದ ಯೋಜನೆಯೊಂದರ ಯಶಸ್ಸು ಹೂಡಿರುವ ಬಂಡವಾಳವನ್ನು ಮಾತ್ರ ಅವಲಂಬಿಸಿರುವುದಿಲ್ಲ; ಬದಲಿಗೆ ಸ್ಥಳೀಯ ಆರ್ಥಿಕತೆಯು ಆ ಉದ್ಯಮ/ಯೋಜನೆಯೊಂದಿಗೆ ಎಂಥ ನಂಟು ಹೊಂದಿದೆ ಎನ್ನುವುದರ ಮೇಲೂ ಅವಲಂಬಿತವಾಗಿದೆ. ಮಾಹಿತಿ ತಂತ್ರಜ್ಞಾನ ವೃತ್ತಿಪರರು ಇಲ್ಲದಿರುವ ಪ್ರದೇಶದಲ್ಲಿ ಐ.ಟಿ ಯೋಜನೆಯನ್ನು ಕಾರ್ಯಗತಗೊಳಿಸಿದರೆ ಅದರಿಂದ ಸ್ಥಳೀಯರಿಗೆ ಆಗುವ ಪ್ರಯೋಜನ ಸೀಮಿತವಾಗಿರುತ್ತದೆ.

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಪರಿಣಾಮಕಾರಿ ಕಾರ್ಯತಂತ್ರ ಎಂದರೆ ಮೊದಲಿಗೆ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿರುವ ಅಭಿವೃದ್ಧಿಯ ವಾಹಕಗಳನ್ನು ಸಮರ್ಪಕವಾಗಿ ಗುರುತಿಸುವುದು. ಈ ಸಾಧ್ಯತೆಗಳಲ್ಲಿರುವ ಅಭಿವೃದ್ಧಿಯ ಅಂತರ್ಗತ ಪ್ರವೃತ್ತಿಎಷ್ಟೇ ಚಿಕ್ಕದಾಗಿದ್ದರೂ ತೊಂದರೆ ಇಲ್ಲ. ಇಂತಹ ಅಭಿವೃದ್ಧಿಯ ಸಾಧ್ಯತೆಗಳು ಸಾಮಾನ್ಯವಾಗಿ ಸ್ಥಳೀಯ ಕಾರ್ಮಿಕ ಶಕ್ತಿ ಮತ್ತು ಬಂಡವಾಳವನ್ನು ಆಧರಿಸಿರುತ್ತವೆ. ರಾಜ್ಯ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಸೃಷ್ಟಿಸಲು ಈ ಬಂಡವಾಳಕ್ಕೆ ಉತ್ತೇಜನ ನೀಡಬೇಕು. ಈ ಕಾರ್ಯತಂತ್ರದ ವ್ಯಾಪಕ ಯಶಸ್ಸು ಉಚಿತ ಆಹಾರ ನೀಡುವ ಅಗತ್ಯ ಕಡಿಮೆ ಮಾಡುವುದರ ಜೊತೆಗೆ ಇತರ ಗ್ಯಾರೆಂಟಿಗಳ ಬೇಡಿಕೆಯನ್ನು ಕುಗ್ಗಿಸಲಿದೆ. ಈ ಸಾಲಿನ ಬಜೆಟ್ ಆ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತದೆ ಎಂದುಕೊಳ್ಳುವುದು ಅತಿಯಾದ ನಿರೀಕ್ಷೆಯಾಗುತ್ತದೆ. ಈ ಸರಕಾರ ಧೋರಣೆ ಕೂಡ ಹಿಂದಿನ ಸರ್ಕಾರಗಳಂತೆ ಸ್ಥಳೀಯರಿಗೆ ಯಾವುದೇ ಪ್ರಯೋಜನ ಉಂಟು ಮಾಡದ ಪೂರ್ವ ನಿರ್ದಾರಿತ ಕ್ಷೇತ್ರಗಳಲ್ಲಿ ಹೈಲೈಟ್ ಹೂಡಿಕೆ ಮಾಡುವ ರೀತಿಯಲ್ಲಿಯೇ ಇದೆ ಈ ಬಜೆಟ್ ಅಭಿವೃದ್ಧಿಗೆ ಮಾತ್ರ ಗಮನ ನೀಡಿದೆ ಸ್ಥಳೀಯ ಜನರಿಗೆ ಅನುಕೂಲ ಕಲ್ಪಿಸುವಂತಹ ಅಂಶಗಳಿಗೆ ಮುನ್ನಡೆ ನೀಡಿದ್ದಾರೆ ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಉದಾಹರಣೆಗೆ ಯೋಜನೆ ರೂಪಿಸುವ ಬೆಂಗಳೂರಿನ ನಿರ್ಮಿಸಲು ಉದ್ದೇಶಿಸಲಾಗಿರುವ ಸುರಂಗ ಮಾರ್ಗದಿಂದಾಗಿ ನಗರದಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷಕವಾಗಿ ಎಷ್ಟೋ ಉದ್ಯೋಗ ಸಿಗುವುದು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬಹುದು.

Leave a Comment