ಮಕ್ಕಳಿರಲವಾ ಕಚೇರಿ ತುಂಬಾ..!

ಮಕ್ಕಳಿರಲವಾ

ಮಕ್ಕಳಿರಲವಾ ಕಚೇರಿ ತುಂಬಾ..! ಪುಟ್ಟಾ ಚಡ್ಡಿ ಮೇಲೆತೋ….. ಮೂಗಿನಿಂದ ಇಳೀತಾ ಇದೆ, ಸ್ವಲ್ಪ ಒರೆಸ್ಕೋಬಾರದಾಂದ ಇದನ್ನೆಲ್ಲ ಹೇಳುವಷ್ಟು ಆ ತಾಯಿಗೆ ಪುರುಸೊತ್ತಾದರೂ ಎಲ್ಲಿಂದ ಹೇಳಿ? ಹೊಸದಾಗಿ ತಲೆಯೆತ್ತುತ್ತಿದ್ದ ಆ ಕಟ್ಟಡದಲ್ಲಿ ಆ ಕೂಲಿ ಹೆಂಗಸಿಗೆ ಅತ್ತಿತ್ತ ನೋಡಲಾಗದಷ್ಟು ಕೆಲಸ. ಪೂರ್ಣಕುಂಭ ಕಲಶ ಹೊತ್ತಷ್ಟೇ ಭಕ್ತಿಯಿಂದ ಬಾಣಲೆಯಲ್ಲಿ ಗಾರೆ, ಇಟ್ಟಿಗೆಗಳನ್ನು ಹೊತ್ತಿದ್ದಳು ಅಮ್ಮ. ಆಕೆಯ ಮಕ್ಕಳೋ, ಅಲ್ಲಿಯೇ ಮರಳು- ಜಲ್ಲಿಗಳಲ್ಲಿ ಆಡುತ್ತಾ, ಅಮ್ಮನಿಗಿಂತ ವೇಗವಾಗಿ ಮನೆ ಕಟ್ಟುವ ಕನಸಿನಲ್ಲಿದ್ದವು. ಅವೇನಾದರೂ ರಚ್ಚೆ ಹಿಡಿದು ಅತ್ತರೆ, ಮೇಸ್ತ್ರಿಯ ಅನುಮತಿ ಕೇಳಿ, … Read more

ದೆಹಲಿಯಲ್ಲಿ ಎಎಪಿ ಸೋತಿದ್ದೇಕೆ?

ದೆಹಲಿಯಲ್ಲಿ

ಪಕ್ಷದಲ್ಲಿ ಅನಿಶ್ಚಿತತೆ ಮನೆ ಮಾಡಿದ್ದರೂ ರಾಜಧಾನಿಯಲ್ಲಿ ಅದು ಪೂರ್ತಿ ಕುಸಿದು ಬಿದ್ದಿಲ್ಲ ದೆಹಲಿಯಲ್ಲಿ ಎಎಪಿ ಸೋತಿದ್ದೇಕೆ? ಆಮ್ ಆದ್ಮಿ ಪಕ್ಷದ (ಎ ಎ ಪಿ) ಪಾಲಿನ ಬಲಿಷ್ಠ ಕೋಟೆ ಎನ್ನಲಾಗಿದ್ದ ದೆಹಲಿಯಲ್ಲಿ ಆ ಪಕ್ಷದ ಹತ್ತು ವರ್ಷಗಳ ಆಡಳಿತ ಕೊನೆಗೊಂಡಿದೆ. ಅಲ್ಲಿ ಅದು ಬಿಜೆಪಿಗೆ ಅಧಿಕಾರ ಬಿಟ್ಟು ಕೊಟ್ಟಿದೆ, ಬಿಜೆಪಿಯು ದೆಹಲಿಯಲ್ಲಿ 27 ವರ್ಷಗಳ ನಂತರದಲ್ಲಿ ಅಧಿಕಾರಕ್ಕೆ ಮರಳಿದೆ. ದೇಶದ ರಾಜಧಾನಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಪಕ್ಷವು ಸತತ ಮೂರನೆಯ ಬಾರಿಗೆ ಶೂನ್ಯ ಸಂಪಾದಿಸಿದೆ. … Read more

ಒಂದು ಪಾದಯಾತ್ರೆ…

ಒಂದು ಪಾದಯಾತ್ರೆ…

ಒಂದು ಪಾದಯಾತ್ರೆ… ಇಂಥ ಅನಿಶ್ಚಿತತೆಯ ನಡುವೆಯೇ ಶಿಸ್ತು, ಕಲಿಕೆ ಮತ್ತು ಬದುಕು ಸಾಗುತ್ತದೆ ಎಂಬ ಸತ್ಯವನ್ನು ಈ ಹುಡುಗರಿಗೆ ತಿಳಿಸಬೇಕಿತ್ತು. ಹಾಗೇ ಮಾಡಿದೆವು. ಜೊತೆಗೇ ಕೊಂಡೊಯ್ದಿದ್ದ ಚರಕದಲ್ಲಿ ನೂಲನ್ನು ತೆಗೆಯುವ ಕೆಲಸವೂ ನಡೆಯಿತು’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸಂತೋಷ ಕೌಲಗಿ ಹೇಳಿದರು.32ರ ಸುಮನಸ ಕೌಲಗಿಯವರನ್ನು ಈ ಹುಡುಗರು ಅಣ್ಣನೆಂದೇ ಭಾವಿಸಿದ್ದಾರೆ. ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಸಸ್ಪೆಕ್ಸ್‌ನ ಅಂತರರಾಷ್ಟ್ರೀಯ ಅಭಿವೃದ್ಧಿ ವಿಭಾಗದಲ್ಲಿ ಸ್ವರಾಜ್ಯ ಪರಿಕಲ್ಪನೆಯ ಬಗ್ಗೆಯೇ ಸಂಶೋಧನೆ ಮಾಡಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಅವರೂ ಪಾದಯಾತ್ರೆಯ ಭಾಗವಾಗಿದ್ದರು.ಗಾಂಧೀಜಿಯ ವಿಚಾರಗಳಿಂದ … Read more

ಮೇರು ಸಾಧಕರಿಗೆ ನೂರರ ನಮನ

ಮೇರು ಸಾಧಕರಿಗೆ

ಮೇರು ಸಾಧಕರಿಗೆ ನೂರರ ನಮನ 1995ನೆಯ ಇಸವಿ, ರವೀಂದ್ರ ಕಲಾಕ್ಷೇತ್ರದಲ್ಲೊಂದು ಕಾರ್ಯಕ್ರಮ. ಪ್ರೊ. ಎಲ್.ಎಸ್.ಶೇಷಗಿರಿ ರಾಯರದೇ ಅಧ್ಯಕ್ಷತೆ. ಕಾರ್ಯಕ್ರಮ ಮುಗಿದ ಮೇಲೆ ‘ನೀವು ಶ್ರೀಧರ ಮೂರ್ತಿಯವರಲ್ಲವೆ?’ ಎಂದು ಅವರೇ ಮಾತನಾಡಿಸಿದರು. ನಾನು ಅಚ್ಚರಿಯಿಂದ ‘ಹೌದು’ ಎಂದಾಗ ‘ನಮ್ಮ ಮನೆಗೆ ಬರಬೇಕಲ್ಲ’ ಎಂದು ಆಹ್ವಾನ ಕೊಟ್ಟರು. ‘ಯಾವಾಗ’ ಎಂದರೆ ‘ನೀವು ವೃತ್ತಿಯಲ್ಲಿರುವವರು ಹೇಳಬೇಕು, ನಾನಾದರೂ ನಿವೃತ್ತ’ ಎಂದರು. ಅದರಂತೆ ಅವರ ಮನೆಗೆ ಹೋದಾಗ ಅವರ ಎಲ್ಲಾ ಪುಸ್ತಕಗಳ ಕಟ್ಟನ್ನು ಕೊಟ್ಟು ‘ಇದೆಲ್ಲವನ್ನೂ ಓದಿದ ಮೇಲೆ ನಿಮ್ಮ ಅಭಿಪ್ರಾಯ ಹಾಗೇ … Read more

ಕಲಾಗ್ರಾಮದಲ್ಲಿ ಕಾಡಿದ ಬೆಂಕಿ

ಕಲಾಗ್ರಾಮದಲ್ಲಿ

ಕಲಾಗ್ರಾಮದಲ್ಲಿ ಕಾಡಿದ ಬೆಂಕಿ ಹೊಗೆ ಎದ್ದಿರಲಿಲ್ಲ; : ಕಿಡಿ ಚಿಮ್ಮುತ್ತಿರಲಿಲ್ಲ. ಸುಟ್ಟ-ಕೆಟ್ಟ ವಾಸನೆ ಇರಲೇ ಇಲ್ಲ. ಪ್ರಾಣಿ- ಪಕ್ಷಿಗಳು ದೂರಕ್ಕೆ ಧಾವಿಸಲು ಚಡಪಡಿಸುತ್ತಿರಲಿಲ್ಲ. ಬದಲಿಗೆ ದೂರದಲ್ಲಿ ಸಂಗೀತ ಇತ್ತು. ಜನಪದ ಹಾಡು, ನಾಟಕ, ನೃತ್ಯಗಳಿದ್ದವು. ಅಲ್ಲಿನ ಕಾಳಿಚ್ಚಿನ ದೃಶ್ಯವನ್ನು ರಂಗಕಲಾ ತಜ್ಞ ಶಶಿಧರ ಅಡಪ ಮತ್ತು ಅವರ ತಂಡದವರು ಸೃಷ್ಟಿಸಿದ್ದರು. ಕಲಾಗ್ರಾಮದ ಬಿದಿರು ಪೊದೆಗಳ ಬುಡದಲ್ಲಿ ಬೆಂಕಿಯ ಬಣ್ಣವನ್ನು ಹೊಮ್ಮಿಸುವ ನಿಯಾನ್ ಫಲಕಗಳನ್ನು ಇಟ್ಟಿದ್ದರು. ಪಕ್ಕದ ರಿಂಗ್‌ ರೋಡ್‌ನಲ್ಲಿ ಕತ್ತಲನ್ನು ಸೀಳಿ ಸಾಗುವ ವಾಹನ ಸವಾರರಿಗೆ ದಿಗಿಲು … Read more

‘ಕೊಳಲಿನಲ್ಲಿ ನೈಪುಣ್ಯ ಸಾಧಿಸಲು ಅಡ್ಡದಾರಿಗಳಿಲ್ಲ’

ಕೊಳಲಿನಲ್ಲಿ

‘ಕೊಳಲಿನಲ್ಲಿ ನೈಪುಣ್ಯ ಸಾಧಿಸಲು ಅಡ್ಡದಾರಿಗಳಿಲ್ಲ’ ಮೂಲತಃ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದವರಾದ ಶಶಾಂಕ್, ಬಿದಿರಿನಿಂದ ಮಾಡಿದ ಹಗುರ ವಾದ್ಯದಲ್ಲಿ ಸ್ವರ ಸಂಚಾರ ಆರಂಭಿಸಿದರೆಂದರೆ ಕೇಳುಗರು ನಾದ ಸಮ್ಮೋಹನಕ್ಕೊಳಗಾಗುತ್ತಾರೆ. ಸುಷಿರ ವಾದ್ಯದಲ್ಲಿ ಅವರು ಮೂಡಿಸುವ ಚಮತ್ಕಾರ ಅತ್ಯಂತ ಶ್ರವಣಾನಂದಕರ. ಮಧುರಾತಿಮಧುರ ನಾದ ಕೊಡುವ ಈ ವಾದ್ಯದಲ್ಲಿ ಶಶಾಂಕ್ ನುಡಿಸುವ ರಾಗ-ತಾನ-ಪಲ್ಲವಿ ಕೇಳುವುದು ಅದ್ಭುತ, ಅನನ್ಯ ಅನುಭವ ನೀಡುತ್ತದೆ. ಬೆಂಗಳೂರಿನ ‘ಭಾರತೀಯ ಸಾಮಗಾನ ಸಂಗೀತ ಸಭಾ’ ನೀಡುವ ಪ್ರತಿಷ್ಠಿತ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ 2025’, ಅವರಿಗೆ ಲಭಿಸಿದೆ. … Read more

ಜೀತದಿಂದ ಮುಕ್ತಿ: ಸ್ವಾತಂತ್ರ್ಯದ ಮಂದಹಾಸ

ಜೀತದಿಂದ

ಜೀತದಿಂದ ಮುಕ್ತಿ: ಸ್ವಾತಂತ್ರ್ಯದ ಮಂದಹಾಸ ದಿನದ 16 ರಿಂದ 18 ತಾಸು ಅಯತಾಕಾರದ ಅಚ್ಚಿನ ಮೇಲೆ ಒದ್ದೆ ಜೇಡಿಮಣ್ಣನ್ನು ಸುರಿದು ಅದಕ್ಕೆ ಇಟ್ಟಿಗೆಯ ರೂಪ ಕೊಡುವುದು ಪೂರ್ಣಿಮಾ ಅವರಿಗೆ ವಿಪರೀತ ಕಷ್ಟವಾಗುತ್ತಿತ್ತು. ಎಂಟು ತಿಂಗಳ ಗರ್ಭಿಣಿ ದಿನಕ್ಕೆ ಸಾವಿರ ಇಟ್ಟಿಗೆಗಳನ್ನು ತಯಾರಿಸುವುದು ದೈಹಿಕ ಮತ್ತು ಮಾನಸಿಕವಾಗಿ ಅಸಾಧ್ಯ ಎನಿಸುತ್ತಿತ್ತು. ಆದರೆ ಪೂರ್ಣಿಮಾ ಮತ್ತು ಅವರ ಪತಿ ಮಾರಪ್ಪ ಅವರಿಗೆ ನೋವನ್ನು ನುಂಗಿ ಕೆಲಸ ಮಾಡುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಇಟ್ಟಿಗೆಗೂಡು ಮಾಲೀಕರಿಂದ ದೈಹಿಕ ಹಲ್ಲೆ ಮತ್ತು … Read more

ಒಂದು ಪಾದಯಾತ್ರೆ ಹತ್ತಾರು ಜೀವನ ಪಾಠ

ಒಂದು

ಒಂದು ಪಾದಯಾತ್ರೆ ಹತ್ತಾರು ಜೀವನ ಪಾಠ ಪಾದಯಾತ್ರೆ ಎಂದರೆ ಸುಮ್ಮನೆ ನಡೆದುಕೊಂಡು ಹೋಗುವುದು ಎಂದುಕೊಂಡಿದ್ದೆವು. ಆದರೆ ದಾರಿಯುದ್ದಕ್ಕೂ ಅಷ್ಟೊಂದು ಜನರನ್ನು ಭೇಟಿ ಮಾಡುತ್ತೇವೆ, ಕುಳಿತು ಮಾತಾಡುತ್ತೇವೆ. ಹೊಸ ವಿಷಯಗಳನ್ನು ಕಲಿಯುತ್ತೇವೆ ಎಂದುಕೊಂಡಿರಲಿಲ್ಲ. ಹಸಿವು, ದಣಿವು, ಜನರ ಕಷ್ಟನಷ್ಟಗಳೇನು, ಪರಿಸರ ಎಂದರೆ, ಅಭಿವೃದ್ಧಿ ಎಂದರೆ ಏನು ಎಂಬುದು ಆಗ ಗೊತ್ತಾಯಿತು. ಬೈಕಿನಲ್ಲೋ, ಬಸ್ಸಿನಲ್ಲೋ, ರೈಲಿನಲ್ಲೋ ಹೋಗಿದ್ದರೆ ಸುಮ್ಮನೆ ಹೋಗಿಬಂದಂತಾಗುತ್ತಿತ್ತಷ್ಟೇ..ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಮೂರ್ನಾಲ್ಕು ಕಿ.ಮೀ. ದೂರದಲ್ಲಿ, ಜನಪದ ಸೇವಾ ಟ್ರಸ್ಟ್‌ನ ‘ಹೊಸ ಜೀವನ ದಾರಿ’ತರಬೇತಿ ಕೇಂದ್ರದ ಆವರಣದಲ್ಲಿದ್ದ ಮರಗಳ … Read more

ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ

ರಾಜ್ಯ ಸರ್ಕಾರಕ್ಕ

ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ ಬೆಂಗಳೂರು:ಪರಿಶಿಷ್ಟ ಜಾತಿಗೆ ಸೇರಿದ ಮಾಲೀಕರಿಂದ ಖರೀದಿ ಮಾಡಿರುವುದಾಗಿ ಸುಳ್ಳು ಕ್ರಯಪತ್ರ ಸೃಷ್ಟಿಸಿಕೊಂಡು ಜಮೀನು ಸ್ವಾಧೀನಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ₹ 5 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್, ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ ವಿಧಿಸಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ಬೆಲೆಬಾಳುವ ಎರಡು ಎಕರೆ ಜಮೀನಿನ ವ್ಯಾಜ್ಯ ಪ್ರಕರಣದಲ್ಲಿ ಈ ಆದೇಶ ನೀಡಿರುವ ನ್ಯಾಯಪೀಠ, ‘ಅಕ್ರಮವಾಗಿ ಸ್ವಾಧೀನದಲ್ಲಿ ಇರಿಸಿಕೊಂಡಿರುವ ಜಮೀನನ್ನು … Read more

ಡ್ರಗ್ಸ್: ಮೂಲವೇ ನಾಪತ್ತೆ

ಡ್ರಗ್ಸ್

ಡ್ರಗ್ಸ್: ಮೂಲವೇ ನಾಪತ್ತೆ ಇವಷ್ಟೇ ಅಲ್ಲ, ರಾಜ್ಯದಲ್ಲಿ ದಾಖಲಾಗುತ್ತಿರುವ ಬಹುತೇಕ ಡ್ರಗ್ಸ್ ಪ್ರಕರಣಗಳಲ್ಲಿ ಮೂಲ ಪತ್ತೆಯೇ ಪೊಲೀಸರಿಗೆ ಸವಾಲು ಆಗಿದೆ. ಡ್ರಗ್ಸ್ ಎಂಬ ಹೆಮ್ಮರದ ಎಲೆ-ಕೊಂಬೆಗಳನ್ನು ಮಾತ್ರ ಪೊಲೀಸರು ಕತ್ತರಿಸಿದ್ದಾರೆ ಹೊರತು ಅದರ ಬುಡದವರೆಗೆ ತಲುಪಲು ಆಗಿಲ್ಲ. ಇದರಿಂದ, ‘ಡ್ರಗ್ಸ್’ ಮರದ ಬೇರು ಇನ್ನಷ್ಟು ಆಳ ಹೋಗುತ್ತಿದೆ. ಗಟ್ಟಿಯಾಗುತ್ತಿದೆ. ನೈಸರ್ಗಿಕ ಹಾಗೂ ಸಿಂಥೆಟಿಕ್ ಡ್ರಗ್ಸ್ ತರಿಸಿ, ಮಾರುವ ಆರೋಪಿಗಳು ಮಾತ್ರ ಪೊಲೀಸರಿಗೆ ಸಿಕ್ಕಿಬೀಳುತ್ತಾರೆ. ಆದರೆ, ಡ್ರಗ್ಸ್ ಕೊಟ್ಟವರು ಮತ್ತು ತಯಾರಿಸಿದವರು ಯಾರು ಎಂಬುದನ್ನು ಪತ್ತೆ ಮಾಡಲು ಪೊಲೀಸರಿಗೆ … Read more