ವಿದ್ಯುತ್ ವಾಹನ ಕ್ಷೇತ್ರಕ್ಕಿದು ಮರುಪೂರಣದ ಸಮಯ

ವಿದ್ಯುತ್

ವಿದ್ಯುತ್ ವಾಹನ ಕ್ಷೇತ್ರಕ್ಕಿದು ಮರುಪೂರಣದ ಸಮಯ ನಮ್ಮೂರಿನ ಪ್ರಖ್ಯಾತ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ನಮ್ಮ ಮನೆ. ಸದಾ ಗಿಜಗುಡುವ ಜಾಗವಾಗಿದ್ದ ಕಾರಣಕ್ಕೆ ಪರೀಕ್ಷೆಯ ಸಮಯದಲ್ಲಿ ಸಾಯಂಕಾಲ ಮನೆಯ ಬಾಗಿಲುಗಳನ್ನೆಲ್ಲ ಮುಚ್ಚಿ ಅಮ್ಮ ನನ್ನನ್ನು ಗದರಿಸಿ ಓದಲು ಕೂರಿಸುತ್ತಿದ್ದರು. ಪ್ರತಿದಿನ ರಾತ್ರಿ ತಳ್ಳುಗಾಡಿಯವನೊಬ್ಬ ದೊಡ್ಡ ಗಾಜಿನ ಭರಣಿಯಲ್ಲಿ ಬೊಂಬಾಯಿ ಮಿಠಾಯಿಯನ್ನಿಟ್ಟುಕೊಂಡು ನಮ್ಮ ಮನೆಯೆದುರಿನ ರಸ್ತೆಯಿಂದ ಹೋಗುತ್ತಿದ್ದ. ಆತನ ಗಾಡಿಯ ಮುಂದೆ ಕಟ್ಟಿದ್ದ ಗಂಟೆಯ ಸದ್ದಿನಿಂದ ನಮಗೆಲ್ಲರಿಗೂ ಆತನ ಬರುವಿಕೆ ತಿಳಿಯುತ್ತಿತ್ತು. ನನ್ನಂತೆಯೇ ಮನೆಯ ಹಜಾರದ ಮೇಲೆ ಓದುತ್ತ ಕುಳಿತಿರುತ್ತಿದ್ದ … Read more

ಚುನಾವಣೆಯಲ್ಲಿ ಹಸ್ತಕ್ಷೇಪ ಸಲ್ಲ

ಚುನಾವಣೆಯಲ್ಲಿ

ಚುನಾವಣೆಯಲ್ಲಿ ಹಸ್ತಕ್ಷೇಪ ಸಲ್ಲ ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕೆ (ವೋಟರ್ ಟರ್ನ್ ಔಟ್ ಇನ್ ಇಂಡಿಯಾ) ನೆರವಾಗುವ ನೆಪದಲ್ಲಿ ಹಂಚಿಕೆ ಮಾಡಿದ್ದ 182 ಕೋಟಿ ರೂ. (21 ದಶಲಕ್ಷ ಡಾಲರ್) ಮೊತ್ತದ ನಿಧಿಯನ್ನು ಬೊಕ್ಕಸದ ವೆಚ್ಚ ಕಡಿತದ ಭಾಗವಾಗಿ ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆ (ಡಿಒಜಿಇ) ರದ್ದುಪಡಿಸಿದೆ. ಅಚ್ಚರಿಯೆಂದರೆ ಇಂಥದ್ದೊಂದು ನಿಧಿ ಬರುತ್ತಿತ್ತು ಎಂಬುದೇ ಬಹುತೇಕರಿಗೆ ತಿಳಿದಿರಲಿಲ್ಲ. ಅಂದರೆ, ಈ ನಿಧಿ ರಹಸ್ಯವಾಗಿ ಬೇರೆ ಯಾವುದೇ ರಾಜಕೀಯ ಉದ್ದೇಶ ಅಥವಾ ಹಿತಾಸಕ್ತಿಗಳಿಗೆ ಬಳಸಲಾಗುತ್ತಿತ್ತೆ ಇಲ್ಲವೆ ಸರ್ಕಾರವನ್ನು ಅಸ್ಥಿರಗೊಳಿಸಲು … Read more

ಆರ್‌ಸಿಬಿ ದಾಳಿಗೆ ಕುಸಿದ ಡೆಲಿ

ಆರ್‌ಸಿಬಿ

ಆರ್‌ಸಿಬಿ ದಾಳಿಗೆ ಕುಸಿದ ಡೆಲಿ ತಲಾ 3 ವಿಕೆಟ್ ಪಡೆದ ರೇಣುಕಾ, ಜಾರ್ಜಿಯಾ • ಗೆಲುವಿಗೆ 142 ರನ್ ಗುರಿ ವಡೋದರ (ಪಿಟಿಐ): ಅನುಭವಿಗಳಾದ ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 141 ರನ್‌ಗಳಿಗೆ ಕಟ್ಟಿಹಾಕಿತು. ವೇಗದ ಬೌಲರ್ ರೇಣುಕಾ 4 ಓವರುಗಳಲ್ಲಿ 23 ರನ್ನಿಗೆ 4 ವಿಕೆಟ್ ಪಡೆದರೆ, … Read more

ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್

ದೊಡ್ಡಣ್ಣ'ನ

ದೊಡ್ಡಣ್ಣ’ನ ಹಾದಿಯಲ್ಲಿ ಬ್ರಿಟನ್ ಅಮೆರಿಕದ ನಂತರ ಬ್ರಿಟನ್ ಸರ್ಕಾರವು ಆಕ್ರಮ ವಲಸೆ ಮತ್ತು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಕ್ರಮ ವಲಸಿಗರನ್ನು ಅವರ ಮೂಲದೇಶಗಳಿಗೆ ತಲುಪಿಸಲು ಸಜ್ಜಾಗಿರುವ ವಿಮಾನಗಳ ವಿಡಿಯೊ ಅನ್ನು ಫೆ.10ರಂದು ಅಲ್ಲಿನ ಗೃಹ ಇಲಾಖೆ ಹಂಚಿಕೊಂಡಿದೆ. ಅಕ್ರಮ ವಲಸೆಯ ವಿರುದ್ಧ ತಾನು ದೃಢ ನಿಲುವು ಹೊಂದಿರುವುದನ್ನು ಸಾಬೀತು ಪಡಿಸುವುದಕ್ಕಾಗಿ ಲೇಬರ್ ಪಾರ್ಟಿ ಸರ್ಕಾರವು ಈ ರೀತಿ ಮಾಡಿರುವುದಾಗಿ ಹೇಳಲಾಗುತ್ತಿದ್ದು, ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸಲಾಗುವುದು ಎಂಬ ಸಂದೇಶವನ್ನೂ ಪ್ರಧಾನಿ … Read more

ಪರೋಪಜೀವಿ’ಗಳುಯಾರು?

ಪರೋಪಜೀವಿ

ಪರೋಪಜೀವಿ’ಗಳುಯಾರು? ಉಚಿತ ಕೊಡುಗೆಗಳ ಮೂಲಕ ಕರ್ನಾಟಕ ಮತ್ತು ಇತರ ಮಾಡುತ್ತಿರುವುದು ಸಂವಿಧಾನ ಹೇಳುವ ಕರ್ತವ್ಯವನ್ನೇ ‘ಉಚಿತ ಕೊಡುಗೆ’ಗಳು ಅಥವಾ ‘ಗ್ಯಾರಂಟಿ’ಗಳು ಎಂಬ ಪದಗಳು ಚಲಾವಣೆಗೆ ಬಂದುದು ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಅಂದಿನಿಂದ ಇಂದಿನವರೆಗೂ ಅಧಿಕಾರ ಪನ್ನು ಕಳೆದುಕೊಂಡ ಪಕ್ಷಗಳು ಈ ಕೊಡುಗೆಗಳನ್ನು ವರಸ್ಕಾರದಿಂದಲೇ ಕಾಣುತ್ತಿವೆ ಮತ್ತು ಅವುಗಳಿಂದಲೇ ಅಧಿಕಾರಕ್ಕೆ ಬಂದಿರುವ ಸರ್ಕಾರ’ವನ್ನೂ ತೆಗಳುತ್ತಿವೆ. ಇನ್ನೂ ಮೊದಲೇ ದೆಹಲಿಯಲ್ಲಿ ಎಎಪಿ ನೇತೃತ್ವದ ಸರ್ಕಾರವು ಉಚಿತ ವಿದ್ಯುತ್‌ ಕೊಟ್ಟಿದ್ದರೂ ಅದೇಕೋ ಆಗ ಆ ಉಚಿತ … Read more

ಶ್ರೀಸಾಮಾನ್ಯ ಮತ್ತು ತೆರಿಗೆ ಲೆಕ್ಕಾಚಾರ

ಶ್ರೀಸಾಮಾನ್ಯ

ಆದಾಯ ತೆರಿಗೆಯಲ್ಲಿ ರಿಯಾಯಿತಿ: ನಿರೀಕ್ಷಿತ ಫಲ ಸಿಗುವುದೇ? ಶ್ರೀಸಾಮಾನ್ಯ ಮತ್ತು ತೆರಿಗೆ ಲೆಕ್ಕಾಚಾರ ಮಧ್ಯಮ ವರ್ಗದವರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಅನ್ನುವ ಕೂಗು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳುತ್ತಿತ್ತು. ಅದಕ್ಕೆ ಸ್ಪಂದನವೋ ಎಂಬಂತೆ 2025-26ನೇ ಸಾಲಿನ ಬಜೆಟ್‌ನಲ್ಲಿ, ವಾರ್ಷಿಕ ₹ 12 ಲಕ್ಷದವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಘೋಷಿಸಲಾಗಿದೆ. ಇದರಿಂದ ಅನುಕೂಲ ಪಡೆದವರು ಸಹಜವಾಗಿಯೇ ಸಂಭ್ರಮಿಸಿದ್ದಾರೆ. ಹಣಕಾಸು ಸಚಿವರ ಪ್ರಕಾರ, ‘ತೆರಿಗೆ ಕಡಿಮೆಯಾದರೆ ತೆರಿಗೆ ಪಾವತಿದಾರರಲ್ಲಿ ಹಣ ಉಳಿಯುತ್ತದೆ, ಅವರು ಹೆಚ್ಚೆಚ್ಚು ಕೊಳ್ಳುತ್ತಾರೆ, ಬೇಡಿಕೆ … Read more

ಜಾಗತಿಕ ಹೂಡಿಕೆದಾರರ ಸಮಾವೇಶ ಒಪ್ಪ೦ದಗಳು ಉದ್ಯಮ ರೂಪ ತಳೆಯಲಿ

ಜಾಗತಿಕ

ಜಾಗತಿಕ ಹೂಡಿಕೆದಾರರ ಸಮಾವೇಶ ಒಪ್ಪ೦ದಗಳು ಉದ್ಯಮ ರೂಪ ತಳೆಯಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶವು ₹10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದ ಹಾಗೂ ಆರು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ಸಮಾಪ್ತಿಗೊಂಡಿದೆ. ‘₹6.23 ಲಕ್ಷ ಕೋಟಿ ಮೊತ್ತದ ಹೂಡಿಕೆಯಒಪ್ಪಂದಗಳಾಗಿವೆ. ₹4.03 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಪ್ರತಿಷ್ಠಿತ ಕಂಪನಿಗಳು ಘೋಷಿಸಿದ್ದು, ಈ ಸಂಬಂಧದ ಒಪ್ಪಂದಗಳಿಗೆ ಶೀಘ್ರ ಸಹಿಬೀಳಲಿದೆ. ಒಟ್ಟು ಮೊತ್ತದಲ್ಲಿ ಉತ್ತರ ಕರ್ನಾಟಕದಲ್ಲಿ ಶೇಕಡ 45ರಷ್ಟು ಹೂಡಿಕೆ ಮಾಡುವ ಪ್ರಸ್ತಾವಗಳು ಇವೆ. ಮುಕ್ಕಾಲು ಪಾಲು … Read more

ಪ್ಲಾಸ್ಟಿಕ್ ಸರ್ಜರಿ ಎಂಬ ಸುರೂಪಿ ಚಿಕಿತ್ಸೆ

ಪ್ಲಾಸ್ಟಿಕ್

ಪ್ಲಾಸ್ಟಿಕ್ ಸರ್ಜರಿ ಎಂಬ ಸುರೂಪಿ ಚಿಕಿತ್ಸೆ ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಮೂಗು ಎನ್ನುವುದು ಪ್ರತಿಷ್ಠೆಯ ‘ಸಂಕೇತವಾಗಿತ್ತು. ತಪ್ಪು ಮಾಡಿದವರ ಮೂಗನ್ನು ಕತ್ತರಿಸುವ ಪದ್ಧತಿ ಭಾರತ, ಈಜಿಪ್ಟ್, ಮೆಸೆಪೆಟೊಮಿಯಾ ನಾಗರಿಕತೆಗಳಲ್ಲಿ ನಾಲ್ಕು ಸಾವಿರ ವರ್ಷಗಳಿಂದ ದಾಖಲಾಗಿದೆ. ತಮ್ಮ ಪ್ರತಿಷ್ಠೆಗೆ ಭಂಗವಾದಾಗ ಸಿರಿವಂತರು ಏನಾದರೂ ಪರಿಹಾರ ಹುಡುಕುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಬೆಳೆದದ್ದು ಕತ್ತರಿಸಿದ ಮೂಗನ್ನು ಸರಿಪಡಿಸುವ ಸುರೂಪಿ ಚಿಕಿತ್ಸೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಕುಂಬಾರರು ಮಣ್ಣಿನಿಂದ ಮಾಡಿದ ಆಕೃತಿಗಳನ್ನು ಬಳಸಿ ಕತ್ತರಿಸಿದ ಮೂಗನ್ನು ಸಾಮಾನ್ಯವಾಗಿ … Read more

ಪ್ಯಾರಿಸ್ ಒಪ್ಪಂದ’ ಜಾರಿಗೆ ಬೇಕಿದೆ ಜಾಗತಿಕ ಬದ್ಧತೆ

ಪ್ಯಾರಿಸ್

ಪ್ಯಾರಿಸ್ ಒಪ್ಪಂದ’ ಜಾರಿಗೆ ಬೇಕಿದೆ ಜಾಗತಿಕ ಬದ್ಧತೆ ಜಾಗತಿಕ ತಾಪಮಾನ ಹಾಗೂ ಹವಾಮಾನಗಳಲ್ಲಿನ ಬದಲಾವಣೆಯನ್ನು ತಡೆಗಟ್ಟಲು ಬದ್ಧತೆ ಪ್ರದರ್ಶಿಸುವ ಸಂಬಂಧ 197 ದೇಶಗಳು ಸಹಿ ಹಾಕಿರುವ ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ನವಂಬರ್ 4, 2024ರಿಂದ ಅನ್ವಯವಾಗುವಂತೆ ಅಧಿಕೃತವಾಗಿ ನಿರ್ಗಮಿಸಿದೆ. ‘ಜಾಗತಿಕ ತಾಪಮಾನ ಏರಿಕೆ’ ಹಾಗೂ ‘ಹವಾಮಾನ ಬದಲಾವಣೆಗಳು’ ರಾಷ್ಟ್ರೀಯ ಗಡಿಗಳನ್ನು ಮೀರಿದ ಜಾಗತಿಕ ಪರಿಸ್ಥಿತಿಯಾಗಿದೆ. ಅಂತರರಾಷ್ಟ್ರೀಯ ಸಹಕಾರ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ ಇದಾಗಿದೆ ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ. ಈ … Read more

ಯಾದವ್‌, ಪೂಜಾ, ಸಾವನ್ ಕೂಟ ದಾಖಲೆ

ಯಾದವ್‌

ಯಾದವ್‌, ಪೂಜಾ, ಸಾವನ್ ಕೂಟ ದಾಖಲೆ ಡೆಹ್ರಾಡೂನ್: ಉತ್ತರ ಪ್ರದೇಶದ ಜಾವೆಲಿನ್ ಎಸೆ ತಗರ ಸಚಿನ್ ಯಾದವ್, ಹರಿಯಾಣದ 18 ವರ್ಷದ ಹೈಜಂಪರ್ ಪೂಜಾ ಸಿಂಗ್ ಮತ್ತು ಹಿಮಾಚಲ ಪ್ರದೇಶದ ಓಟಗಾರ ಸಾವನ್ ಬರ್ವಾಲ್ 38ನೇ ರಾಷ್ಟ್ರೀಯ ಬುಧವಾರ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಕೂಟದ ದಾಖಲೆಗಳನ್ನು ತಿದ್ದಿ ಬರೆದರು. ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಅವರ ಗೈರು ಹಾಜರಾತಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ 25 ವರ್ಷದ ಯಾದವ್, ತಮ್ಮ ಐದನೇ ಯತ್ನದಲ್ಲಿ 84.39 ಮೀ. ಜಾವೆಲಿನ್ ಎಸೆದು … Read more