2ನೇ ಸ್ತರದ ನಗರಗಳಿಗೆ ಹೂಡಿಕೆ ವಿಸ್ತರಣೆ

2ನೇ ಸ್ತರದ

2ನೇ ಸ್ತರದ ನಗರಗಳಿಗೆ ಹೂಡಿಕೆ ವಿಸ್ತರಣೆ ಬೆಂಗಳೂರು ಮಾಹಿತಿ ತಂತ್ರಜ್ಞಾನ, ಐಟಿ ಆಧಾರಿತ ಸೇವಾ ವಲಯ ಜತೆಗೆ ಬಾಹ್ಯಾಕಾಶ, ರಕ್ಷಣೆ. ಬಯೋಟೆಕ್ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಆಯಾ ಪ್ರದೇಶಗಳ ಸಂಪನ್ಮೂಲ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡನೇ ಸ್ತರದ ನಗರಗಳಲ್ಲೂ ಹೂಡಿಕೆ ಉತ್ತೇಜಿಸಿದರೆ ಪ್ರಗತಿ ಸಾಧ್ಯವಾಗಲಿದೆ ಎಂದು ಟರ್ಬೊಸ್ಟಾರ್ಟ್ ಗ್ಲೋಬಲ್ ಸಿಇಒ ವೆಂಕಟ್ ರಾಜು ಅಭಿಪ್ರಾಯಪಟ್ಟರು. ‘ಬೆಳವಣಿಗೆಗೆ ಹೂಡಿಕೆಯ ಮರುಕಲ್ಪನೆ: ಕರ್ನಾಟಕದ ಕನಸು -2030 ಸಾಧಿಸಲು ಪೂರಕ 5 ವಲಯಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ”ಪಾರದರ್ಶಕತೆ, ಸ್ಥಿರತೆ ಹಾಗೂ ಮುಂದುವರಿಕೆಯಂಥ ವಾತಾವರಣ … Read more

ಜಿಮ್‌ನಿಂದ ಹೊಮ್ಮಿದ ಭರವಸೆ ಬೆಳಕು

ಜಿಮ್‌ನಿಂದ

ಜಿಮ್‌ನಿಂದ ಹೊಮ್ಮಿದ ಭರವಸೆ ಬೆಳಕು ಇನ್ವೆಸ್ಟ್ ಕರ್ನಾಟಕ-2025 ಭಾಗವಾದ ‘ಪ್ಯೂಚರ್ ಆಫ್ ಇನೋವೇಶನ್ ಎಕ್ಸ್‌ಪೋ’ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಬಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬುಧವಾರ ಚಾಲನೆ ನೀಡಿದರು. ಕರ್ನಾಟಕ ಪೆವಿಲಿಯನ್, ಟೊಯೋಟಾ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ, ಡೋನ್ ತಂತ್ರಜ್ಞಾನದ ವೈಶಿಷ್ಟ್ಯಪೂರ್ಣ ಹಂತಗಳನ್ನು ವೀಕ್ಷಿಸಿದರಲ್ಲದೆ, ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯ ಆಶಾಕಿರಣವಾಗಿರುವ ಆಗಿ ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದ ರೋಗಪತ್ತೆ ಮತ್ತು ಚಿಕಿತ್ಸೆಗಳಲ್ಲಿನ ಆರೋಗ್ಯಸೇವೆ ತಂತ್ರಜ್ಞಾನಗಳ ಬಗ್ಗೆಯೂ ಮಾಹಿತಿ ಪಡೆದರು. ನಂತರ ಮಾತನಾಡಿದ ಸಚಿವ … Read more

ಭರವಸೆ ಮೂಡಿಸಿದ ಜಿಮ್-2025

ಭರವಸೆ

ಭರವಸೆ ಮೂಡಿಸಿದ ಜಿಮ್-2025 ವಾಸ್ತವಕ್ಕೆ ಬರಲಿ ಹೂಡಿಕೆ ಭರವಸೆ ಪ್ರಗತಿಯ ಮರು ಕಲ್ಪನೆ ಎಂಬ ಧೈರ್ಯದೊಂದಿಗೆ ಆಯೋಜಿತಗೊಂಡಿದ್ದ ಈ ಬಾರಿಯ ಜಾಗತಿಕ ಹೂಡಿಕೆ ಸಮಾವೇಶ ಭರವಸೆಯ ರೇಖೆ ಮೂಡಿಸಿ ಸಂಪನ್ನಗೊಂಡಿದೆ. ಕರ್ನಾಟಕ ಯಾವತ್ತಿಗೂ ಹೂಡಿಕೆ ಸ್ನೇಹಿ ರಾಜ್ಯ. ಭಾರತದಲ್ಲಿ ಮೊದಲಿಂದಲೂ ಬಂಡವಾಳಿ ಗಾರನ್ನು ಅತಿ ಹೆಚ್ಚು ಆಕರ್ಷಿಸುವ ರಾಜ್ಯಗಳೆಂದರೆ ಮಹಾರಾಷ್ಟ್ರ ಗುಜರಾತ್, ಕರ್ನಾಟಕ .ಅದರಲ್ಲೂ ಕರ್ನಾಟಕದ ವೈಶಿಷ್ಟ ಪುಣ್ಯ ಪರಿಸರ ಕೈಗಾರಿಕಾ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರು ಸುತ್ತಮುತ್ತವೇ ಐಟಿ, ಬಿಟಿ ಒಳಗೊಂಡಂತೆ ಅನೇಕ … Read more

ರೈಲ್ವೆ ಹಳಿ ಧ್ವಂಸ ತಡೆಗೆ ನಾವೇನು ಮಾಡಲು ಸಾಧ್ಯ?

ರೈಲ್ವೆ ಹಳಿ ಧ್ವಂಸ ತಡೆಗೆ ನಾವೇನು ಮಾಡಲು ಸಾಧ್ಯ? ದೇಶದ ಜನತೆಗೆ ಒಳ್ಳೆಯ ರೈಲು ಸಂಚಾರ ಸೌಲಭ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಸರ್ಕಾರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಉನ್ನತ ದರ್ಜೆಯ ರೈಲುಗಳ ಸಂಖ್ಯೆ ಹೆಚ್ಚು ಮಾಡಿದೆ. ಅವುಗಳನ್ನೇ ಗುರಿಯಾಗಿಟ್ಟುಕೊಂಡು ಇತ್ತೀಚಿನ ವರ್ಷಗಳಲ್ಲಿ ಕೆಲವು ರಾಷ್ಟ್ರವಿರೋಧಿ ಶಕ್ತಿಗಳು ಕಲ್ಲು ಎಸೆಯುವ ಕೃತ್ಯದಲ್ಲಿ ತೊಡಗಿದ್ದವು. ನಮ್ಮೊಳಗಿನ ಈ ಹಿತಶತ್ರುಗಳು ಇಷ್ಟಕ್ಕೆ ತೃಪ್ತರಾದಂತಿಲ್ಲ. ಇದೀಗ ರೈಲ್ವೆ ಹಳಿಗಳ ಮೇಲೆ ಈ ದೇಶದ್ರೋಹಿಗಳ ಕಾಕದೃಷ್ಟಿ ಬಿದ್ದಂತೆ ಕಾಣುತ್ತಿದೆ. ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್, … Read more

ಭಾರತ-ಅಮೆರಿಕ ಸಹಯೋಗದಲ್ಲಿ ಹೊಸ ಶಕೆ

ಭಾರತ

ಭಾರತ-ಅಮೆರಿಕ ಸಹಯೋಗದಲ್ಲಿ ಹೊಸ ಶಕೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಫೆಬ್ರವರಿ ಅಂದ 11ರಂದು ಕೃತಕ ಬುದ್ಧಿವಂತಿಕೆಯ ಕುರಿತಾದ ಜಾಗತಿಕ ಸಮಾವೇಶದಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾ ನ್ಯೂಯೇಲ್ ಮ್ಯಾಕ್ರೋ ಜತೆ ಸಹ ಅಧ್ಯಕ್ಷತೆ ವಹಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಷಿಂಗ್‌ಟನ್ ಗೆ ಪ್ರಯಾಣಿಸಿದರು ಡೊನಾಲ್ಡ್ ಟ್ರಂಪ್ ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರಿಂದ ಆಹಾನ್ವಿತರಾಗಿ ವಾಷಿಂಗ್ಟನ್ ಗೆ ಭೇಟಿ ನೀಡುತ್ತಿರುವ, ಎರಡನೆಯ ಜಾಗತಿಕ ನಾಯಕ ಮೋದಿ, ಅಮೆರಿಕದ ಕನಿಷ್ಠ ಮಿತ್ರ ದೇಶ … Read more

ಭವಿಷ್ಯಕ್ಕೆ ಎಐ ದಿಕ್ಸೂಚಿ

ಭವಿಷ್ಯಕ್ಕೆ

ಭವಿಷ್ಯಕ್ಕೆ ಎಐ ದಿಕ್ಸೂಚಿ ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಅನೇಕ ಅನುಮಾನಗಳ ಜತೆ ಆತಂಕ, ಕಳವಳ ಸೃಷ್ಟಿಯಾಗುವುದು ಸ್ವಾಭಾವಿಕ. ಕೃತಕ ಬುದ್ಧಿಮತ್ತೆ (ಎಐ) ವಿಷಯದಲ್ಲೂ ಇದೇ ರೀತಿಯ ಭಾವನೆ ಸೃಷ್ಟಿಯಾಗಿರುವುದು ಸುಳ್ಳಲ್ಲ. ತಂತ್ರಜ್ಞಾನ ಹಲವು ಪ್ರಯೋಜನಗಳನ್ನು ಉಂಟು ಮಾಡಿ. ಜನರ ಜೀವನವಿಧಾನವನ್ನೇ ಬದಲಿಸಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ತಂತ್ರಜ್ಞಾನದ ವ್ಯಾಪಕ ದುರುಪಯೋಗದಿಂದ ವಂಚನೆ, ಮೋಸದಂಥ ಕೃತ್ಯಗಳು ಹೆಚ್ಚುತ್ತಲೇ ಸಾಗಿವೆ. ಈ ನಡುವೆ, ಎಐ ಆಧಾರಿತ ಸೇವೆಗಳು ಹೆಚ್ಚುತ್ತಿದ್ದು, ಇದಕ್ಕೆ ಸಂಬಂಧಿಸಿದ ಹೊಸ ಉಪಕರಣಗಳು, ಹೊಸ ಸಾಫ್ಟ್‌ವೇರ್‌ಗಳು ಮಾರುಕಟ್ಟೆಗೆ … Read more

ಶುದ್ಧ ಜಲ ಮರೀಚಿಕೆಯಾಗದಿರಲಿ

ಶುದ್ಧ

ಶುದ್ಧ ಜಲ ಮರೀಚಿಕೆಯಾಗದಿರಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ವಿಚಾರವಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಪ್ರಾಮಾಣಿಕ ಹಾಗೂ ಪಾರದರ್ಶಕ ನೀತಿಯನ್ನು ಅನುಸರಿಸಬೇಕಾಗಿದೆ. ಶುದ್ಧ ಗಾಳಿ, ಶುದ್ಧ ನೀರು ಇವೆರಡು ಆರೋಗ್ಯಕರ ಬದುಕಿಗೆ ಬಹಳ ಅಗತ್ಯ, ಆದರೆ ಶುದ್ಧ ಗಾಳಿಯ ಕಲ್ಪನೆ ಅದೆಂದು ಮಾಯವಾಗಿದೆ. ಉಸಿರಾಡುವ ಗಾಳಿ ನಿಧಾನ ವಿಷವಾಗಿ ಪರಿಣಮಿಸಿದೆ. ಇದರ ಜೊತೆಗೆ ಗ್ರಾಮೀಣ ಮತ್ತು ಪಟ್ಟಣದ ನಿವಾಸಿಗಳಿಗೆ ಪೂರೈಕೆ ಶುದ್ಧವಾಗಿದೆ ಎಂಬ ಪ್ರಶ್ನೆ ಕಾಡುತ್ತಲೇ ಇದೆ. ಬಹುಪಾಲು ಮಂದಿ ಈಗ ಸ್ಥಳೀಯ ಆಡಳಿತಗಳು ಪೂರೈಸುವ … Read more

ಎಸ್ಐಪಿ ಹೂಡಿಕೆ ನಿಲ್ಲಿಸಬೇಡಿ

ಎಸ್ಐಪಿ

ಎಸ್ಐಪಿ ಹೂಡಿಕೆ ನಿಲ್ಲಿಸಬೇಡಿ ಸಾಧಾರಣ ಗಳಿಕೆ ಕೊಡುತ್ತಿದ್ದ ಮ್ಯೂಚುವಲ್ ಫಂಡ್ ವೂಂದರಲ್ಲಿ ಮೂರು ತಿಂಗಳ ಹಿಂದೆ ನೀವು ಒಂದು ಲಕ್ಷ ಹೂಡಿಕೆ ಮಾಡಿದ್ದಾರೆ ಅದು ಇವತ್ತಿಗೆ ಸುಮಾರು 93,000ಕ್ಕೆ ಇಳಿಕೆಯಾಗಿರುತ್ತಿತ್ತು . ಹೌದು, ಕಳೆದ ಮೂರು ತಿಂಗಳಲ್ಲಿ ಎಲ್ಲಾ ಈಕ್ವಿಟಿ ಮ್ಯೂಚುವಲ್ ಫಂಡ್ ಗಳು ಸಹ ಶೇ 7ರಿಂದ ಶೇ 13ರವರೆಗೂ ಕುಸಿತ ಕಂಡಿವೆ. ಆರು ತಿಂಗಳ ಅಂಕಿ – ಹಂಸ ನೋಡಿದಾಗಲೂ ಮಾರುಕಟ್ಟೆಯಲ್ಲಿ ಶೇ 5ರಿಂದ ಶ್ರೀ 10ರಷ್ಟು ಇಳಿಕೆಯಾಗಿರುವುದು ಕಂಡು ಬರುತ್ತದೆ. ಷೇರು ಮಾರುಕಟ್ಟೆಯ … Read more

ಯು ಪಿ ಎಸ್‌ ಸಿಗೆ ಪಾರದರ್ಶಕತೆ ಪ್ರಶ್ನೆ .

ಯು ಪಿ ಎಸ್‌ ಸಿ

ಯು ಪಿ ಎಸ್‌ ಸಿಗೆ ಪಾರದರ್ಶಕತೆ ಪ್ರಶ್ನೆ . ಪ್ರಿಲಿಮ್ಸ್ ಬಳಿಕ ಕೀ ಉತ್ತರ ಕೋರಿ ಅರ್ಜಿ ಅಮಿಕಾಸ್ ಕ್ಯೂರಿ ನೇಮಿಸಿದ ಸುಪ್ರೀಂ. ಅಖಿಲ ಭಾರತ ನಾಗರೀಕ ಸೇವಾ ಹುದ್ದೆಗಳು ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ವಿವಿಧ ಸಚಿವಾಲಯಗಳು, ಪೊಲೀಸ್ ನೇಮಕಾತಿಗೆ ಕಾಲಮಿತಿಯಲ್ಲೇ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪ್ರತಿ ವರ್ಷ ಹತ್ತಾರು ಸಾವಿರ ಹುದ್ದೆಗಳನ್ನು ನೇಮಕಾತಿಗೆ ಶಿಫಾರಸು ಮಾಡುವ ಕೇಂದ್ರ ಲೋಕಸೇವಾ ಆರೋಗ್ಯದಲ್ಲಿ (ಯುಪಿಎಸ್ ಸಿ) ಪಾರದರ್ಶಕತೆ ಕೊರತೆಯೇ?….. ಸಧ್ಯ ಇಂಥದೊಂದು ಪ್ರಶ್ನೆ ಸುಪ್ರೀಂ ಕೋಟ್೯ಗೂ ಕಾಡುತ್ತಿದೆ … Read more

ಕರ್ತವ್ಯ ಪಥದಲ್ಲಿ ಭಾರತದ ವೈಭವ.

ಕರ್ತವ್ಯ

ಕರ್ತವ್ಯ ಪಥದಲ್ಲಿ ಭಾರತದ ವೈಭವ. ದಿಲ್ಲಿಯ ಕರ್ತವ್ಯ ಪಥದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವೈಭವೋಪೇತವಾಗಿ ನಡೆಯಿತು. ಪಥ ಸಂಚಲನದ ವೇಳೆಗೆ, ಜಾನಪದ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು ಐದು ಸಾವಿರ ಕಲಾವಿದರೂ ದೇಶದ ಬೇರೆ ಬೇರೆ ಪ್ರದೇಶಗಳ 45 ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದರು. ಜಾರ್ಖಂಡ್ ಬುಡಕಟ್ಟು ನಾಯಕ ಬಿಸಾ೯ ಮುಂಡಾ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ನಡೆದ ನೃತ್ಯ ರೂಪಕವು ಜಾನಪದ ಹಾಗೂ ಬುಡಕಟ್ಟು ಪರಂಪರೆಯ ಕಾಲ ಶ್ರೀಮಂತಿಕೆಯನ್ನು ಅನಾವರಣಗೊಳಿಸಿತು.’ ವಿಕಸಿತ ಭಾರತ ಶ್ರೇಷ್ಠ … Read more