ಸಂಗೀತ ಲೋಕದ ನಾದನಿಧಿ ಪರ್ವತೀಕರಹೃದಯರೇ…

ಸಂಗೀತ

ಸಂಗೀತ ಲೋಕದ ನಾದನಿಧಿ ಪರ್ವತೀಕರ ಹೃದಯರೇ… ‘ನಾನು ನನ್ನ ವಾದ್ಯವನ್ನು ಹೊಂದಿಸಿಕೊಳ್ಳುತ್ತಿದ್ದೇನೆ. ನೀವು ಕೂಡ ನಿಮ್ಮ ದೇಹವೆಂಬ ವಾದ್ಯವನ್ನು ಹೊಂದಿಸಿಕೊಳ್ಳಿ. ನನ್ನ ಎದುರು ನೆರೆದಿರುವ ನೀವೇ ವಾದ್ಯ. ನನ್ನ ಮೂಲಕ ನಿಮ್ಮನ್ನು ನುಡಿಸಲು ಅವನಿಗೆ (ಭಗವಂತನಿಗೆ) ಅವಕಾಶ ಕೊಡಿ. ನಾದದ ಅಲೆಯಲ್ಲಿ ಎಲ್ಲರೂ ಅವನಿಗೆ ಶರಣಾಗಿ…’ ಬದರಿನಾಥ ಕ್ಷೇತ್ರದಲ್ಲಿ 70ರ ದಶಕದಲ್ಲಿ ಸಂತರೊಬ್ಬರು ಈ ಸಾಲುಗಳನ್ನು ಹೇಳಿ ವೀಣಾವಾದನ ಆರಂಭಿಸುತ್ತಿದ್ದರು. ಕೊರೆವ ಚಳಿಯಲ್ಲೂ ಅರೆಬೆತ್ತಲಾಗಿ ಕುಳಿತು ಅವರು ನುಡಿಸುತ್ತಿದ್ದ ವೀಣೆ ಅಲ್ಲಿದ್ದವರ ಅಂತರಂಗಕ್ಕೆ ದೈವಿಸ್ಪರ್ಶದ ಅನುಭವ ನೀಡುತ್ತಿತ್ತು. … Read more

ಭಂಡಾರ ಪ್ರಿಯೆ ಗುಡ್ಡದ ಯಲ್ಲಮ್ಮ

ಭಂಡಾರ

ಭಂಡಾರ ಪ್ರಿಯೆ ಗುಡ್ಡದ ಯಲ್ಲಮ್ಮ ಇಮಾಮ್‌ ಹುಸೇನ್ ಗೂಡುನವರ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ಯಲ್ಲಮ್ಮ ದೇವಿಗೆ ಜನರು ಚಿನ್ನ, ಬೆಳ್ಳಿ ಆಭರಣ, ಸೀರೆ, ಖಣ, ಬಳೆಗಳೊಂದಿಗೆ, ಕುಂಕುಮ-ಧಂಡಾರವನ್ನೂ ಅರ್ಪಿಸಿ ಭಕ್ತಿ ಮೆರೆಯುತ್ತಾರೆ. ಕೆಲವರು ‘ಉಧೋ ಉಧೋ …..ಯಲ್ಲಮ್ಮ ನಿನ ಲ್ಕ ಉಧೋ…ಎಂದು ಜಯಭೋಷ ಮೊಳಗಿಸುತ್ತ ದೇಗುಲದ ಮೇಲೆ ಭಂಡಾರ ಎರಚುತ್ತಾರೆ. ಇನ್ನೂ ಕೆಲವರು ಸಂಗೀತ ಹಚ್ಚಿ ಕುಣಿಯುತ್ತ ಭಂಡಾರದ ಓಕುಳಿಯಲ್ಲಿ ಮಿಂದೇಳುತ್ತಾರೆ. ಗುಡ್ಡಕ್ಕೆ ಬರುವ ಭಕ್ತರ ಹಣೆಗೆ ಭಂಡಾರ ಹಚ್ಚುತ್ತ, ದೇವಿ ನಾಮಸ್ಮರಣೆ ಮಾಡುತ್ತ … Read more

ವಲಸೆ ಹಕ್ಕಿಗಳ ಹಾಡುಪಾಡು

ವಲಸೆ

ವಲಸೆ ಹಕ್ಕಿಗಳ ಹಾಡುಪಾಡು ಋತುಗಳಿಗೆ ತಕ್ಕಂತೆ ಭೂಮಿಯ ಮೇಲೆ ಮತ್ತು ವಾತಾವರಣ ಬದಲಾಗುತ್ತದೆ. ಆ ಬದಲಾವಣೆಗೆ ಹೊಂದಿಕೊಳ್ಳುವ ಅಗತ್ಯ ಪಕ್ಕಿಗಳಿಗೆ ಇರುತ್ತದೆ, ಒಂದು ವೇಳೆ ಹೊಂದಿಕೊಳ್ಳುವುದು ಅಸಾಧ್ಯವಾದಾಗ ಅವು ವಲಸೆ ಹೋಗುತ್ತವೆ. ಈ ಮಹಾ ವಲಸೆ ಆಹಾರಕ್ಕಾಗಿ, ಆಶ್ರಯಕ್ಕಾಗಿ ಅಥವಾ ಸಂತಾನಾಭಿವೃದ್ಧಿಗಾಗಿ ನಡೆಯುತ್ತದೆ. ಅದು ಅವುಗಳ ಅಳಿವು-ಉಳಿವಿನ ಸಮಯ ಕೂಡ ಹೌದು. ಈ ಅನಿವಾರ್ಯ ದೀರ್ಘ ಪಯಣಕ್ಕೆ ಹಲವು ದಿನಗಳ ಮತ್ತು ತಿಂಗಳುಗಳ ಪೂರ್ವ ತಯಾರಿ ನಡೆಯುತ್ತದೆ. ಅದು ಪೂರ್ವ ನಿರ್ಧರಿತ ಕೂಡ. ಈ ತಯಾರಿ ಪ್ರಕ್ರಿಯೆಯಲ್ಲಿ … Read more

ಕಾಡುಗೊಲ್ಲರ ಮೋಹನ ರಾಗ..

ಕಾಡುಗೊಲ್ಲರ

ಕಾಡುಗೊಲ್ಲರ ಮೋಹನ ರಾಗ.. ಎಲ್ಲವನ್ನೂ ಕಳೆದುಕೊಂಡು ನಿರಾಶನಾಗಿ, ಭವಿಷ್ಯವು ಗಾಢ ಕತ್ತಲಿನಂತ ಅಸ್ಪಷ್ಟವಾಗಿರುವಾಗ, ಎಲ್ಲಿಂದಲೋ ಹಾರಿ ಬಂದು ದಾರಿ ತೋರುವ ಮಿಂಚುಹುಳದಂತೆ ಮೋಹನ್ ಕುಮಾರ್ ಗೆ ಕಂಡಿದ್ದು ರಾಮನಗರ ಜಾನಪದ ಲೋಕ, ಬಡತನವನ್ನು ಬೆನ್ನಿಗಂಟಿಸಿಕೊಂಡೇ ಹುಟ್ಟಿ ಬೆಳೆದ ಮೋಹನ್ ಅವರಿಗೆ ಆಟೊಮೊಬೈಲ್ ಡಿಪ್ಲೊಮಾದ ಪಾಠಗಳು ಅರ್ಥವಾಗಲೇ ಇಲ್ಲ. ಅತ್ತ ಡಿಪ್ಲೊಮಾ ಕಲಿಕೆ ಮುಂದುವರಿಸಲೂ ಆಗದೇ, ಇತ್ತ ಮನೆಗೆ ಮರಳಲೂ ಆಗದ ಸ್ಥಿತಿ. ಆಗ ಅವರಿಗೆ ಹೊಸಬಾಳ್ವ ಭೇಟಿ ನೀಡಿದ್ದು ಜಾನಪದ ಲೋಕ ಅಲ್ಲಿಗೆ ನೀಡಿದ ಮೊದಲ ಭೇಟಿ … Read more

ರಾಜ್ಯಕ್ಕೊಂದೇ ಕೊಕ್ಕೊ ಕುರುಬೂರು

ರಾಜ್ಯಕ್ಕೊಂದೇ

ರಾಜ್ಯಕ್ಕೊಂದೇ ಕೊಕ್ಕೊ ಕುರುಬೂರು ಕುಸುಮಾ ಅಯರಹಳ್ಳಿ ಗೊ ಬ್ಬಳಿ ಮರದ ಪೋಲ್‌ಗೆ ಅಲ್ಲಿದ್ದ ಹುಡುಗಿಯರೆಲ್ಲ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೊಕ್ಕೊ ಅಭ್ಯಾಸಕ್ಕಾಗಿ ಕೋರ್ಟ್‌ಗೆ ನುಗ್ಗಿದರು. ಚಿಗರೆಯಂತೆ ಓಡುತ್ತಿದ್ದವರನ್ನು ಹಿಡಿಯುವ ಗುರಿ ಅವರದು, ಮೀನಿನಂತೆ ಜಾರಿಕೊಳ್ಳುವ ತಂತ್ರ ಇವರದು- ಹೀಗೆ ಓಡುವ, ಹಿಡಿಯುವ ಆಟ ಜೋರಾಗಿಯೇ ನಡೆಯಿತು. ಇಡೀ ಮೈ ಬೆವರಿನಿಂದ ಸ್ನಾನ ಮಾಡಿತ್ತು. ಅವರ ಅಭ್ಯಾಸದ ಬಿಡುವಿನಲ್ಲಿ ಮಾತಿಗೆ ಕುಳಿತ. ‘ನೀವು ಯಾಕೆ ಆಗೊಬ್ಬಳಿ ಮರದ ಪೋಲ್‌ಗೆ ನಮಸ್ಕರಿಸಿದ್ದು’ ಕೇಳಿದೆ. ‘ನಮಗೆ ಇಂದಿಗೂ ಸರಿಯಾದ ಕೊಕ್ಕೊ … Read more

ಪಂದ್ಯಶ್ರೇಷ್ಠ’ ಪರ್ವೇಶ್‌ಗೆ ಸಿ.ಎಂ. ಗಾದಿ?

ಪಂದ್ಯಶ್ರೇಷ್ಠ

ಪಂದ್ಯಶ್ರೇಷ್ಠ’ ಪರ್ವೇಶ್‌ಗೆ ಸಿ.ಎಂ. ಗಾದಿ? 20240 ಚುನಾವಣೆಯಲ್ಲಿ ಪರ್ವೇಶ್ ವರ್ಮಾ ಅವರನ್ನು ಪಟ್ಟಿಯಿಂದಲೇ ಬಿಜೆಪಿ ಕೈಬಿಟ್ಟಿತ್ತು. ಪುನರಾಗಮನ ಮಾಡಿರುವ ಅತಿ ದೊಡ್ಡ ವಿಕೆಟ್ ಪಡೆದಿದ್ದಾರೆ. ಅವರಿಗೆ ದೆಹಲಿ ಬಿಜೆಪಿ ಸರ್ಕಾರದ ನಾಯಕತ್ವ ಸಿಗುತ್ತದೆಯೇ? ಮತ್ತೊಮ್ಮೆ ನವದೆಹಲಿಯ ಶಾಸಕರಿಗೆ ಮುಖ್ಯಮಂತ್ರಿ ಗಾದಿ ದೊರಕಲಿದೆಯೇ? ಹೀಗೊಂದು ಪ್ರಶ್ನೆ ದೆಹಲಿ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಪಡಸಾಲೆಯಲ್ಲಿ 1998ರಿಂದ 2013ರವರೆಗೆ ಮೂರು ಅವಧಿಗೆ ಶೀಲಾ ದೀಕ್ಷಿತ್ ನವದೆಹಲಿ ಕ್ಷೇತ್ರದ ಶಾಸಕರಾಗಿದ್ದರು. 2013ರಲ್ಲಿ ದೀಕ್ಷಿತ್ ಅವರನ್ನು ಅರವಿಂದ ಕೇಜಿವಾಲ್ ಸೋಲಿಸಿದ್ದರು. ಅವರು ಹ್ಯಾಟ್ರಿಕ್ ಗೆಲುವು … Read more

ದಟ್ಟ ಕಾಡಿಗೆ ಜನರೇ ಜೀವ

ದಟ್ಟ

ದಟ್ಟ ಕಾಡಿಗೆ ಜನರೇ ಜೀವ 1924ರಲ್ಲಿ ಬ್ರಿಟಿಷ್ ಕಾಲದಲ್ಲಿ ರಚನೆಯಾದ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಯಲ್ಲಿ ಕೃಷಿಯೇತರ ಭೂಮಿ ಹೊಂದಿರುವವರಿಗೆ ಸದಸ್ಯತ್ವ ಇಲ್ಲ. ಕಾಡಿಗೆ ಹಾನಿಯಾದರೆ, ಸದಸ್ಯತ್ವ ರದ್ದುಪಡಿಸಲಾಗುತ್ತದೆ. ಕಾಡಿಗೆ ಹಾನಿಯಾಗಿರುವ ವಿಷಯ ತಿಳಿದೂ ಸುಮ್ಮನಿರುವ ಗ್ರಾಮಸ್ಥ ಶಿಕ್ಷೆಗೆ ಗುರಿಯಾಗಬೇಕು. ಇಂತಹ ಕಟ್ಟುಪಾಡು ಇಂದಿಗೂ ಪಾಲನೆ ಆಗುತ್ತಿದೆ. ಇಂತಹ ನಿಯಮಗಳೇ ಕಾಡು ಉಳಿಯಲು ಮೂಲ ಪ್ರೇರಣೆಯಾಗಿದೆ. ಹಳಕಾರ ಅರಣ್ಯದಲ್ಲಿ ಗ್ರಾಮಸ್ಥರೇ ಗಸ್ತು ತಿರುಗುತ್ತಾರೆ. ಕತ್ತಿ, ಕೊಡಲಿ, ಗರಗಸ ಹೀಗೆ ಯಾವುದೇ ಆಯುಧ ಹಿಡಿದು ಕಾಡಿನೊಳಗೆ ಬರಲು ಯಾರಿಗೂ … Read more

ದಿಲ್ಲಿ ಮಿಠಾಯಿ, ರಾಜ್ಯದಲ್ಲಿ ಲಡಾಯಿ

ದಿಲ್ಲಿ ಮಿಠಾಯಿ

ದಿಲ್ಲಿ ಮಿಠಾಯಿ, ರಾಜ್ಯದಲ್ಲಿ ಲಡಾಯಿ ಮೊನ್ನೆ ಸಂಸತ್ ನಲ್ಲಿ ಖರ್ಗೆ ಅವರನ್ನು ಛೇಡಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ‘ಅಂಧೇರಾ ಛಟೇಗಾ, ಸೂರತ್ ನಿಖಲೇಗಾ ಔರ್ ಕಮಲ್ ಖಿಲೇಗು,” ಎಂಬ ಅಟಲ್ ಬಿಹಾರಿ ವಾಜಪೇಯಿಯವರ ಮಾತನ್ನು ನೆನಪಿಸಿದ್ದರು. ಇಂದಿರಾ ಗಾಂಧಿಯವರ ಕಾಲದ ಬಲಿಷ್ಠ ಕಾಂಗ್ರೆಸ್ ಮುಂದೆ ಬಿಜೆಪಿಗರು ಎದೆಯೊಡ್ಡಲು ವಾಜಪೇಯಿಯವರು ಇಂಥ ಪ್ರೇರಣೆ ನೀಡಿದ್ದರಂತೆ. ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಮಾತನಾಡುವಾಗ, ಹಿಂದಿಯ ಕವಿ ಗೋಪಾಲದಾಸ್ ನೀರಜ್ ರ ಕವನವನ್ನು ಪ್ರಸ್ತಾಪಿಸಿ ಮೋದಿ ಸರಕಾರದ ವಿರುದ್ಧ ಚಾಟಿ ಬೀಸಿದ್ದರು. ಇದಕ್ಕೆ … Read more

ಜಿಮ್ 025′ ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್‌ಸಿಂಗ್

ಜಿಮ್ 025

ಜಿಮ್ 025′ ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಬೆಂಗಳೂರು: ರಾಜ್ಯದ ಉದ್ಯಮ ವಲಯಕ್ಕೆ 10 ಲಕ್ಷ ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಅಕರ್ಷಣೆ ಗುರಿಯೊಂದಿಗೆ ಸರಕಾರ ಆಯೋಜಿಸಿರುವ 4 ದಿನಗಳ ಅವಧಿಯ ಜಾಗತಿಕ ಹೂಡಿಕೆದಾರರ ಸಮಾವೇಶವನು ಫೆ.11ರಂದು ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್ ಗೆಹೋಟ್, ಸಿಎಂ ಸಿದ್ದರಾಮಯ್ಯ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಲಿದ್ದು, ಈ ಸಂದರ್ಭದಲ್ಲಿ 2025-30 ಅವಧಿಯ ನೂತನ … Read more

ಶಬ್ದಾರ್ಥ ಮಥಿಸಿ ಬಂದ ಬಂಧದ ನವನೀತ

ಶಬ್ದಾರ್ಥ

ಶಬ್ದಾರ್ಥ ಮಥಿಸಿ ಬಂದ ಬಂಧದ ನವನೀತ ಘಾ ಚರ್ ಘೋಚರ್.. ಅವಳು ಇದ್ದಕ್ಕಿದ್ದಂತೆ ‘ಹಾಗೆಂದು ಹೇಳುವ ತನಕ ಆತನಿಗೆ ಶಬ್ದವನ್ನು ಕೇಳಿಯೂ ಗೊತ್ತಿರುವುದಿಲ್ಲ. ಏನೊಂದೂ ಗೊತ್ತಾಗದೆ ‘ಘಾಚರ್ ಘೋಚರ್’ ಅಂದರೇನು ಅಂತ ವಿಚಾರಿಸಿದಾಗ, ಅದು ತನ್ನ ತವರುಮನೆಯಲ್ಲಿ ಬಳಕೆಯಾದ ಶಬ್ದವೆಂದೂ, ಸೀರೆಯ ಒಳಗೆ ತೊಡುವ ಪೆಟ್ಟಿಕೋಟ್ನ ಹಗ್ಗವು ಗಂಟಾಗಿ ಗೋಜಲಾದಾಗ ಉದ್ಧರಿಸಿದ ಶಬ್ದ ಹಾಗೇ ಬಳಕೆಗೆ ಬಂತೆಂದೂ, ಅದು ತನ್ನ ತವರು ಮನೆಯವರಿಗೆ ಮಾತ್ರ ಗೊತ್ತಿರುವ ಶಬ್ದವೆಂದೂ ವಿವರಿಸುತ್ತಾಳವಳು, ವಿವೇಕ ಶಾನಭಾಗರ ‘ಘಾಚರ್ ಘೋಚರ್’ ಕಾದಂಬರಿಯಲ್ಲಿ ಬರುವ … Read more