ರಂಗಮಂಚದ ಮೇಲೆ ಗೆಜ್ಜೆಯದೇ ಸದ್ದು
ರಂಗಮಂಚದ ಮೇಲೆ ಗೆಜ್ಜೆಯದೇ ಸದ್ದು ವಿದುಷಿ ಸಂಸ್ಕೃತಿ ಪ್ರಭಾಕರ ಪ್ರಸ್ತುತಪಡಿಸಿದ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕ ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಹೊಯ್ಸಳ ಸಾಮ್ರಾಜ್ಯದ ಸಾಮ್ರಾಜ್ಞೆ ಶಾಂತಲೆಯ ಆತ್ಮವೃತ್ತವನ್ನು ಆಧರಿಸಿ ಲೇಖಕಿ ಸುಧಾ ಆಡುಕಳ ರಚಿಸಿದ ರಂಗಪಠ್ಯವನ್ನು ಗಣೇಶ ಎಲ್ಲೂರು ನಿರ್ದೇಶಿಸಿದರು.ಕಲಾಭಿರುಚಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುವುದು ಸಹಜವೇ ಆಗಿದ್ದರೂ ನಾಟ್ಯವು ಕಲಾಭಿರುಚಿಯನ್ನು ತಣಿಸುವಷ್ಟು ಸಶಕ್ತವಾಗಿರುತ್ತದೆ ಎಂದು ಕಾವ್ಯಮೀಮಾಂಸಕರೇ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಯೋಚಿಸಿ ನೋಡಿದಾಗ ವರ್ತಮಾನದ ಜಗತ್ತಿನಲ್ಲಿಯೂ ನಾಟ್ಯ ಕುರಿತಾದ ಆಸಕ್ತಿ ಕಡಿಮೆಯಾಗಿಲ್ಲ. … Read more