ರಂಗಮಂಚದ ಮೇಲೆ ಗೆಜ್ಜೆಯದೇ ಸದ್ದು

ರಂಗಮಂಚದ

ರಂಗಮಂಚದ ಮೇಲೆ ಗೆಜ್ಜೆಯದೇ ಸದ್ದು ವಿದುಷಿ ಸಂಸ್ಕೃತಿ ಪ್ರಭಾಕರ ಪ್ರಸ್ತುತಪಡಿಸಿದ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕ ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಹೊಯ್ಸಳ ಸಾಮ್ರಾಜ್ಯದ ಸಾಮ್ರಾಜ್ಞೆ ಶಾಂತಲೆಯ ಆತ್ಮವೃತ್ತವನ್ನು ಆಧರಿಸಿ ಲೇಖಕಿ ಸುಧಾ ಆಡುಕಳ ರಚಿಸಿದ ರಂಗಪಠ್ಯವನ್ನು ಗಣೇಶ ಎಲ್ಲೂರು ನಿರ್ದೇಶಿಸಿದರು.ಕಲಾಭಿರುಚಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುವುದು ಸಹಜವೇ ಆಗಿದ್ದರೂ ನಾಟ್ಯವು ಕಲಾಭಿರುಚಿಯನ್ನು ತಣಿಸುವಷ್ಟು ಸಶಕ್ತವಾಗಿರುತ್ತದೆ ಎಂದು ಕಾವ್ಯಮೀಮಾಂಸಕರೇ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಯೋಚಿಸಿ ನೋಡಿದಾಗ ವರ್ತಮಾನದ ಜಗತ್ತಿನಲ್ಲಿಯೂ ನಾಟ್ಯ ಕುರಿತಾದ ಆಸಕ್ತಿ ಕಡಿಮೆಯಾಗಿಲ್ಲ. … Read more

ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ

ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ

ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ ‘ಆಡು ಮುಟ್ಟದ ಸೊಪ್ಪಿಲ್ಲ ,ಎಂಬಂತೆ ಇವತ್ತು ಎ. ಐ ಪ್ರಭಾವವಿಲ್ಲದೆ ಕ್ಷೇತ್ರವಿಲ್ಲ. ಭಾಷಾಂತರವು ಇದರಿಂದ ಹೊರತಾಗಿಲ್ಲ. ತರ್ಜುಮೆಯ ಸಮರ್ಥ್ಯದ ಜೊತೆಗೆ ಪಾಠದ ಭಾವನೆಗಳನ್ನು ಗ್ರಹಿಸುವುದನ್ನು ರೂಢಿಸಿಕೊಂಡು ಕೃತಕ ಬುದ್ಧಿಮತ್ತೆ ಬಂದರೆ ಭಾಷಾ ಕಲಿಕೆ ಯಾವ ದಿಕ್ಕಿಗೆ ಸಾಗಬಹುದು? ಹುಭಾಷೆಗಳನ್ನು ಬಲ್ಲವಳು ನಾನು. ಈವರೆಗೆ ನನಗೆ ಅದೊಂದು ಹೆಮ್ಮೆಯ ಸಂಗತಿಯೇ ಆಗಿತ್ತು. ವಿವಿಧ ಭಾಷೆಗಳ ರೋಗಿಗಳು ಆರೈಕೆಗಾಗಿ ನಿಮ್ಹಾನ್ಸ್‌ಗೆ ಬರುತ್ತಿದ್ದರು. ಕನ್ನಡ ಓದಲಾಗದ ವಿದ್ಯಾರ್ಥಿ ಮಿತ್ರರು ರೋಗಿಗಳು ಕನ್ನಡದಲ್ಲಿ ಬರೆದ ತಮ್ಮ ಅನಿಸಿಕೆಗಳನ್ನು … Read more

ಇ ಸ್ಪೋರ್ಟ್ಸ್ ಎಂದರೆ ಜೂಜಾಟವಷ್ಟೇ ಅಲ್ಲ…

ಇ ಸ್ಪೋರ್ಟ್ಸ್

ಇ ಸ್ಪೋರ್ಟ್ಸ್ ಎಂದರೆ ಜೂಜಾಟವಷ್ಟೇ ಅಲ್ಲ… ಗಿರೀಶ ದೊಡ್ಡಮನಿ ಕಣ್ಮನ ಸೆಳೆಯುವಂತೆ ಅಲಂಕರಿಸಿದ ದೊಡ್ಡ ಕೋಣೆ ಅದು. ಅಲ್ಲಿ ಜೋಡಿಸಲಾಗಿದ್ದ ಮೇಜುಗಳ ಮೇಲೆ ಕಂಪ್ಯೂಟರ್‌ಗಳನ್ನು ಸಾಲಾಗಿ ಇರಿಸಲಾಗಿತ್ತು. ಒಂದೊಂದು ಕಂಪ್ಯೂಟರ್ ಮುಂದೆ ಇಬ್ಬರು ವ್ಯಕ್ತಿಗಳಿದ್ದರು. ಅಂತಹ ಪ್ರತಿಯೊಂದು ಜೋಡಿಯಲ್ಲಿ ಒಬ್ಬರು ದೃಷ್ಟಿದೋಷವುಳ್ಳವರು. ಇನ್ನೊಬ್ಬರು ಸಾಮಾನ್ಯ ವ್ಯಕ್ತಿ, ದೃಷ್ಟಿದೋಷವುಳ್ಳ ವ್ಯಕ್ತಿ ನೀಡುವ ಸೂಚನೆಯನ್ನು ಪಾಲಿಸುತ್ತಿದ್ದ ವ್ಯಕ್ತಿ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ್ದ ಚೆಸ್ ಬೋರ್ಡ್‌ ನಲ್ಲಿ ಕಾಯಿಯನ್ನು ನಡೆಸುತ್ತಿದ್ದರು.ಇನ್ನೊಂದು ದೊಡ್ಡ ಕೋಣೆಯಲ್ಲಿ ಹಲವು ಯುವಕ, ಯುವತಿಯರು ಮೊಬೈಲ್ ಫೋನ್ … Read more

ಅಂಕಸಮುದ್ರ ಕೆರೆ ರಾಮ್‌ಸಾ‌ರ್ ತಾಣ

ಅಂಕಸಮುದ್ರ

ಅಂಕಸಮುದ್ರ ಕೆರೆ ರಾಮ್‌ಸಾ‌ರ್ ತಾಣ ಸಿ.ಶಿವಾನಂದ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಿಂದ ಕೂಗಳತೆ ದೂರದಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಎಂಬ ಗ್ರಾಮವಿದೆ. ಇಲ್ಲಿ 244 ಎಕರೆ ವಿಸ್ತಾರವಾದ ಕೆರೆಯೂ ಇದೆ. ಕೆರೆಯಲ್ಲಿ ಹರಡಿರುವ ಕರಿಜಾಲಿ ಮರಗಳು ಅಪರೂಪದ, ದೇಶ-ವಿದೇಶದ ಸಹಸ್ರಾರು ಬಾನಾಡಿಗಳಿಗೆ ಆಶ್ರಯತಾಣವಾಗಿವೆ. ಹೀಗಾಗಿ ವಿಶಾಲವಾದ ಕೆರೆಯೊಂದು ಪಕ್ಷಿಧಾಮ ಎಂದು ಹೆಗ್ಗಳಿಕೆ ಪಡೆದಿದೆ. ಇದು ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿಧಾಮ.ಕೆರೆ ಮಧ್ಯದಲ್ಲಿ ನಿರ್ಮಿಸಿರುವ 50ಕ್ಕೂ ಹೆಚ್ಚು ಕೃತಕ ನಡುಗಡ್ಡೆಗಳಲ್ಲಿ ಎತ್ತರದ ಮತ್ತು ನೆಲಕ್ಕೊರಗಿದ ಗಿಡಮರಗಳಲ್ಲಿ … Read more

ಡಿಕೆಶಿ ಎಲ್ಲಿದ್ದಾರೆ? ಎಲ್ಲಿರುತ್ತಾರೆ?

ಡಿಕೆಶಿ

ಡಿಕೆಶಿ ಎಲ್ಲಿದ್ದಾರೆ? ಎಲ್ಲಿರುತ್ತಾರೆ? Over a cup of tea anything can happen ಎಂಬ ಮಾತಿದೆ . ಸೋನಿಯಾ ಗಾಂಧಿ – ಜೆ. ಜಯಲಲಿತಾ ನಡುವಿನ ಚಾಯಪೇ ಚರ್ಚಾದಿಂದ ವಾಜಪೇಯಿ ಸರಕಾರ ಪತನವಾದದ್ದು ದೇಶದ ಇತಿಹಾಸದಲ್ಲಿ ದಾಖಲಾಗಿದೆ. ಸದ್ಯ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಯ ಉತ್ತುಂಗದಲ್ಲಿದ್ದಾರೆ. ಶಿವರಾತ್ರಿಯ ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದು ರಾಜಕೀಯ ವಲಯದಲ್ಲಿ ಸೆನ್ಸೆಷನ್ ಉಂಟು ಮಾಡಿದೆ. ಇನ್ನೇನು ಪೂರ್ಣಕುಂಭಸ್ವಾಗತದೊಂದಿಗೆ ಡಿಕೆಪಿ … Read more

ಟ್ರಂಪು ಗಾಳಿಯು ತಂದಾನ ಹಾಡಲಿಲ

ಟ್ರಂಪು

ಟ್ರಂಪು ಗಾಳಿಯು ತಂದಾನ ಹಾಡಲಿಲ ಅತ್ತ ಹಳ್ಳಿಯೂ ಅಲ್ಲದ ಇತ್ತ ಪ್ಯಾಟೆಯೂ ಅಲ್ಲದ ಕೆಂಪಾಪುರ ನಮ್ಮ ಮಲೆನಾಡ ಸೆರಗಿನ ದೊಡ್ಡರು. ಆಚೆ ತುಂಗಾ ನದಿಯೂ, ಈಚೆಗೊಂದು ಹೆದ್ದಾರಿಯೂ ಅವರ ಗರ್ಭದೊಳಗೆ ಹಾದು ಹೋಗಿ ಖುಷಿ -ನೆಮ್ಮದಿಗಳಿಂದ ಕೆಂಪಾಪುರ ಸಕಲ ರೀತಿಯಲ್ಲೂ ಸಮೃದ್ಧ ಸಂಪನ್ನವೇ. ಅದೊಂದು ರಾತ್ರಿ ಯಾರೋ ಇಬ್ಬರು ಕಿಲಾಡಿಗಳು ಆ ಊರಿನ ಮೈಲುಗಲ್ಲಿನ ಮೇಲೆ ಏನೋ ಕೈಗಮನಿಸಿದೆ. ‘ಕೆಂಪಾಪುರ’ ಹೆಸರಿನ ‘ಕೆ’ ಜಾಗದಲ್ಲಿ ಗೀಚಿದ್ದನ್ನು ಗಮನಿ ‘ಟ್ರ’ ಎಂದು ತಿದ್ದಿ, ‘ಟ್ರಂಪಾಪುರ’ವಾಗಿಸಿ, ಆ ಕತ್ತಲೆಯಲ್ಲಿ ಅವರಲ್ಲಿಗೆ … Read more

ಚಪ್ಪಾಳೆಯ ತಾಳದಲ್ಲಿ ಮನುಷ್ಯನ ಸ್ವಾಭಾವಿಕ ಸಮ್ಮಿಲನ

ಚಪ್ಪಾಳೆಯ

ಚಪ್ಪಾಳೆಯ ತಾಳದಲ್ಲಿ ಮನುಷ್ಯನ ಸ್ವಾಭಾವಿಕ ಸಮ್ಮಿಲನ ಒಬ್ಬ ಕಲಾವಿದನಿಗೆ ಪ್ರೇಕ್ಷಕರ ಚಪ್ಪಾಳೆಯೇ ದೊಡ್ಡ ಬಿರುದು. ಚಪ್ಪಾಳೆ ಮನುಷ್ಯನ ಸಹಜ ಕ್ರಿಯೆ. ಚಪ್ಪಾಳೆ ಮೆಚ್ಚುಗೆ, ಪ್ರಶಂಸೆಯ ಸೂಚಕ. ಗಂಡು, ಹೆಣ್ಣು, ಬಡವ, ಸಿರಿವಂತ, ರೈತ, ಕಾರ್ಮಿಕ… ಎಲ್ಲರ ಚಪ್ಪಾಳೆಯ ಸದ್ದೂ ಒಂದೇ. ಪ್ರೇಕ್ಷಕರು ಗುಂಪು ಕೈಸನ್ನೆ ಮಾಡಿ ಒಂದೇ ರೀತಿಯ ಮೆಚ್ಚುಗೆ ತಿಳಿಸಲು ಸಾಧ್ಯವಿಲ್ಲ. ಚಪ್ಪಾಳೆಯ ಬದಲು ಚಿಟಿಕೆ ಹೊಡೆಯೋಣವೆಂದರೆ ಎಲ್ಲರಿಗೂ ಚಿಟಿಕೆ ಹೊಡೆಯಲೂ ಬರುವುದಿಲ್ಲ. ಕಾಲುಗಳನ್ನು ನೆಲಕ್ಕೆ ಬಡಿಯುವುದು ಅಥವಾ ವಸ್ತುಗಳನ್ನು ಬಳಸಿಕೊಂಡು ಶಬ್ದ ಮಾಡುವುದಕ್ಕಿಂತ ಚಪ್ಪಾಳೆ … Read more

ಆವಿಯಾದವರ ಕಥೆ ಹೇಳಲೇನು…

ಆವಿಯಾದವರ

ಆವಿಯಾದವರ ಕಥೆ ಹೇಳಲೇನು… ಎಂದಿನಂತಿ ಅವತ್ತು ಕೂಡ ಅವನು ಕೆಲಸಕ್ಕೆ ಹೊರಟಿದ. ಎಂ.ಫಾರ್ಮಲ್ ಶರ್ಟ್ ಮತ್ತು ಟೈ ಧರಿಸಿ ಹೆಂಡತಿಗೆ ವಿದಾಯ ಹೇಳುತ್ತಾ ಕೈಯ್ಯಲ್ಲಿದ್ದ ಬೀಫ್ ಕೇಸನ್ನು ಹಿಂದಿನ ಸೀಟಿನಲ್ಲಿರಿಸಿ ಕಾರನ್ನು ಡ್ರೈವ್ ಮಾಡುತ್ತಾ ಕಚೇರಿಯತ್ತ ಹೊರಟೇಹೋದ. ರಾತ್ರಿ ಎಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಕಚೇರಿಗೆ ಫೋನ್ ಮಾಡಿದಾಗಷ್ಟೇ ಅವನನ್ನು ಒಂದು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಿದ್ದ ಸುದ್ದಿ ಹೆಂಡತಿಗೆ ಅರಿವಾಗಿದ್ದು, ವೈಫಲ್ಯವನ್ನು ಒಪ್ಪಿಕೊಳ್ಳುವ ಬದಲು ಯಾರಿಗೂ ಒಂದು ಸುಳಿವನ್ನೂ ನೀಡದಂತೆ ಕಣ್ಮರೆಯಾಗಿದ್ದ.ಹೀಗೆ ಅಚಾನಕ್ಕಾಗಿ ಕಣ್ಮರೆಯಾದ ವ್ಯಕ್ತಿ … Read more

ರಾಜಕೀಯದಲ್ಲೂ ದಳಪತಿ ಅಧಿಪತಿ?

ರಾಜಕೀಯದಲ್ಲೂ

ರಾಜಕೀಯದಲ್ಲೂ ದಳಪತಿ ಅಧಿಪತಿ? ಒಂದು ಕಡೆಯಿಂದ ಹರಿದುಕೊಂಡು ಹೋಗುತ್ತಲೇ ಇರುತ್ತದೆ. ನದಿಯನ್ನು ಕಂಡ ಜನ ದೀಪಗಳನ್ನು ತೇಲಿಬಿಟ್ಟು ನಮಸ್ಕರಿಸುತ್ತಾರೆ. ನದಿ ಹರಿಯುತ್ತಲೇ ಇರುತ್ತದೆ. ಮತ್ತೊಂದು ಕಡೆ ಜನ ಹೂವುಗಳನ್ನು ಚೆಲ್ಲಿ ನದಿಯನ್ನು ಸ್ವಾಗತಿಸುತ್ತಾರೆ. ನದಿ ತನ್ನಪಾಡಿಗೆ ಸಾಗುತ್ತಲೇ ಇರುತ್ತದೆ. ಬೇರೊಂದು ಕಡೆ ಮತ್ತೊಂದಿಷ್ಟು ಮಂದಿಯು ನದಿಗೆ ಕಲ್ಲು ಕಸ ಎಸೆಯುತ್ತಾರೆ. ಆಗಲೂ ನದಿಯ ಹರಿವು ನಿಲ್ಲುವುದಿಲ್ಲ. ಅಷ್ಟಕ್ಕೂ, ಜೀವನ ಎಂದರೆ ನದಿ ಇದ್ದಂತೆ, ಏನಾದರೂ ಆಗಲಿ, ಹರಿಯುತ್ತಿರಬೇಕು…ಜೋಸೆಫ್ವಿಜಯ್ಚಂದ್ರಶೇಖರ್ ಎಂಬ ಹೆಸರಿನಿಂದ ಜೀವನ ಆರಂಭಿಸಿ, ತಮಿಳುನಾಡಿನ ಜನರ ಹೃದಯದಲ್ಲಿ … Read more

ಕೋರ್ಟ್ ತೀರ್ಪುಗಳು ಕೂಡ ಒತ್ತಾಸೆ

ಕೋರ್ಟ್

ಕೋರ್ಟ್ ತೀರ್ಪುಗಳು ಕೂಡ ಒತ್ತಾಸೆ ರಾಜಕೀಯ ಸ್ಪರ್ಶದಾಚೆ ಸರ್ಕಾರದ ಮಟ್ಟದಲ್ಲಿ ಕಾವೇರಿದ ಚರ್ಚೆ ಮೃತ್ತುಂಜಯ ಕಪಗಲ್ ಬೆಂಗಳೂರು ಎರಡು ಸಹಕಾರಿ ಮಸೂದೆಗಳನ್ನು ಹಿಂತಿರುಗಿಸಿದ ರಾಜ್ಯಪಾಲರ ನಡೆ. ಪುನರ್ ಪರಿಶೀಲಿಸಲು ನೀಡಿದ ಸಲಹೆಗೆಸಂವಿಧಾನದ ಬಲವಿದೆ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ,ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರಅಧಿಕಾರ ಮೊಟಕುಗೊಳಿಸುವುದು ಸೇರಿ ಸರ್ಕಾರ ಕಳುಹಿಸಿದ್ದ ವಿಧೇಯಕಗಳುರಾಜಭವನದ ಸ್ಪಷ್ಟಿಕರಣವೆಂಬ ಕ್ಷಕಿರಣದ ಪರೀಕ್ಷೆಗೆ ಒಳಗಾಗಿವೆ. ಈ ಪೈಕಿ ಪಾಸಿಟಿವ್ ರಿಪೋರ್ಟ್ ಪಡೆದಸುಗ್ರೀವಾಜ್ಞೆ ಹಾಗೂ ಕೆಲವು ಬಿಲ್‌ಳು ಸರಾಗವಾಗಿ ರಾಜ್ಯಪಾಲರ ಅಂಕಿತ ಗಿಟ್ಟಿಸಿಕೊಂಡವು. ಇನ್ನೂ ಕೆಲವು … Read more