ದೆಹಲಿಯ ಬಾಗಿನವೂ, ಮಹಿಳೆಯರ ಕನಸೂ…

ದೆಹಲಿಯ

ದೆಹಲಿಯ ಬಾಗಿನವೂ, ಮಹಿಳೆಯರ ಕನಸೂ… ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ನಾಗರಹಾವಿನ ಬಾಯಿ ರಕ್ತಸಿಕ್ತವಾಗಿದ್ದನ್ನು ಕಂಡ ಮಹಿಳೆಯು, ತೊಟ್ಟಿಲಲ್ಲಿ ಮಲಗಿದ್ದ ತನ್ನ ಮಗುವನ್ನು ಈ ಹಾವು ಕಚ್ಚಿ ಕೊಂದಿತು ಎಂಬ ಎಣಿಕೆಯಲ್ಲಿ ಕೈಲಿದ್ದ ಕೊಡವನ್ನು ಎತ್ತಿಹಾಕಿ ಹಾವನ್ನು ಸಾಯಿಸಿ, ನಂತರ ಪರಾಂಬರಿಸಿದಾಗ, ಮುಂಗುಸಿಯ ಬಾಯಿಂದ ಮಗುವನ್ನು ರಕ್ಷಿಸಲು ಹಾವು ಸೆಣಿಸಿತೆಂಬುದು ಅರಿವಿಗೆ ಬರುತ್ತದೆ. ಆದರೇನು? ಕಾಲ ಮಿಂಚಿಹೋಗಿತ್ತು. ಇವತ್ತಿನ ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ವಿಷಯದ ಇನ್ನೊಂದು ಮುಖವನ್ನು ನೋಡಲಿಕ್ಕೂ ಆಸ್ಪದ ಇರದಂತೆ ಧಾವಂತ ಮಾಡುವಾಗ, ಇಂಥದ್ದು ಆಗುತ್ತಿರುತ್ತದೆ. … Read more

ಹೆಜ್ಜೆಗೊಲಿದ ಬೆಳಕು ವಿನೂತನ ಪ್ರಯೋಗ

ಹೆಜ್ಜೆಗೊಲಿದ

ಹೆಜ್ಜೆಗೊಲಿದ ಬೆಳಕು ವಿನೂತನ ಪ್ರಯೋಗ ಅವಳು ನೃತ್ಯಗಾರ್ತಿಯಾಗಿ ಕಲೆಯನ್ನು ಪೋಷಿಸುತ್ತಾಳೆ ತಾಯ್ತನದ ಸಂಕಟಗಳನ್ನು ಸೆರಗಲ್ಲಿ ಬಚ್ಚಿಡುತ್ತಾಳೆ. ಕಲೆ, ಬದುಕಿನ ನಡುವೆ ಒಂದಷ್ಟು ಸಂಘರ್ಷದಲ್ಲಿ ಬೇಯುತ್ತಲೇ ಬದುಕನ್ನು ಬೆಳಗಿದ ಶಾಂತಲೆ ಕಥೆಯಾದಳು. ಅವತ್ತಿಗೂ ಇವತ್ತಿಗೂ ನೃತ್ಯಗಾರ್ತಿಯರ ಬದುಕು ಹಾಗೂ ಕಲೆಯ ನಡುವಿನ ಹೋರಾಟ, ಸಂಘರ್ಷಗಳನ್ನು ಸುಂದರವಾಗಿ ‘ಹೆಜ್ಜೆಗೊಲಿದ ಬೆಳಕು’ ಹೆಸರಲ್ಲಿ ವೇದಿಕೆಯ ಮೇಲೆ ತೆರೆದಿಟ್ಟಿದ್ದು ಭರತನಾಟ್ಯ ವಿದುಷಿ ಸಂಸ್ಕೃತಿ ಪ್ರಭಾಕರ್.ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದರಸಿಯಾಗಿದ್ದ ನಾಟ್ಯರಾಣಿ ಶಾಂತಲೆಯ ಆತ್ಮವೃತ್ತ ಆಧರಿಸಿದ ಈ ಏಕ ವ್ಯಕ್ತಿನಾಟಕ ಉಡುಪಿಯಲ್ಲಿ ಪ್ರದರ್ಶನಗೊಂಡು ಗಮನ … Read more

ಆಹಾ! ಭಕ್ತಿಯೆಂಬುದು ಏನನ್ನು ಮಾಡದು?

ಆಹಾ! ಭಕ್ತಿಯೆಂಬುದು

ಆಹಾ! ಭಕ್ತಿಯೆಂಬುದು ಏನನ್ನು ಮಾಡದು? ಮೊನ್ನೆಯಷ್ಟೆ ಶಿವರಾತ್ರಿ ಕಳೆದಿದೆ. ಆದರೂ ಅದರ ಗುಂಗಿನ್ನೂ ಇದೆಯಲ್ಲವೇ? ಇಷ್ಟವಾದವರು ಮನೆಗೆ ಬಂದರೆ ಅವರಿಗೆ ಸಂತೋಷವಾಗುವಂತೆ ಮಾಡಲು ನಾವು ಯತ್ನಿಸುತ್ತೇವಲ್ಲವೆ? ಬಿಸಿಲಿನ ಬೇಗೆಯಲ್ಲಿ ಬಳಲಿ ಬಂದವರಿಗೆ ತಣಿಪನ್ನು ತರಿಸಬೇಕಲ್ಲವೆ? ಅದಕ್ಕೆ ಮೊಟ್ಟಮೊದಲು ಸಲ್ಲಬೇಕಾದುದು ತಂಪಾದ ಮಾತಿನ ಹಾರ್ವಸ್ವಾಗತವೇ. ಇಲ್ಲೊಂದು ಸೂಕ್ಷ್ಮವನ್ನು ಶ್ರೀರಂಗಮಹಾಗುರು ಗಳು ಸೂಚಿಸಿದ್ದರು. ಹಾಗೆ ಬಂದವರಿಗೆ ‘ಅಬ್ಬಾ ಅದೆಂತಹ ಸುಡುಬಿಸಿಲು!’ ಎನ್ನುವುದಲ್ಲ; ಏಕೆಂದರೆ ಹಾಗೆ ಹೇಳಿದರೆ ಮತ್ತೆ ಆ ಧಗೆಯನ್ನೇ ಅವರಿಗೆ ಜ್ಞಾಪಿಸುವಂತಾಗುವುದು! ಬದಲಾಗಿ, “ತಣ್ಣನೆಯ ತಾಣಕ್ಕೆ ಬಂದಿದ್ದೀರಿ, ತಂಪಾದ … Read more

‘ಮರುಕೌಶಲ’ ಆದ್ಯತೆ ಆಗಲಿ ಅಲ್ಲಿವರೆಗೆ ‘ಖಾತರಿ’ ಇರಲಿ

'ಮರುಕೌಶಲ' ಆದ್ಯತೆ

‘ಮರುಕೌಶಲ’ ಆದ್ಯತೆ ಆಗಲಿ ಅಲ್ಲಿವರೆಗೆ ‘ಖಾತರಿ’ ಇರಲಿ ರಾಜಾರಾಂ ತಲ್ಲೂರು ದೇಶದಾದ್ಯಂತ ಇಂದು ಒಂದೇ ಚರ್ಚೆ – ‘ಎಕನಾಮಿಕ್ ಆಫ್ ಸ್ಟೇಲ್’ ಕುರಿತು. ಸಣ್ಣಗಾತ್ರದ ವ್ಯವಹಾರ, ಉತ್ಪಾದನೆ, ಸೇವೆ, ಚಟುವಟಿಕೆಗಳು ಲಾಭದಾಯಕ ಅಲ್ಲ. ಭರಪೂರ ಲಾಭಗಳಿಸಬೇಕೆಂದರೆ, ಅವುಗಳ ಗಾತ್ರ ಹಿಗ್ಗಿಸಬೇಕು ಎಂಬ ಚಿಂತನೆ.ಹೀಗೆ ಉತ್ಪಾದನೆಗಳನ್ನು, ಆರ್ಥಿಕ ಚಟುವಟಿಕೆಗಳನ್ನು ಹಿಗ್ಗಿಸಬೇಕಾದರೆ, ಆ ಚಟುವಟಿಕೆಗಳನ್ನು ಬಲಾಡ್ಯರು (ಅರ್ಥಾತ್ ಕಾರ್ಪೊರೇಟ್‌ಗಳು) ಮಾಡಬೇಕು. ಹಾಲಿ ಇರುವ ಕಿರಿಗಾತ್ರದಚಟುವಟಿಕೆಗಳನ್ನು ನಿರುತ್ಸಾಹಗೊಳಿಸಿ, ಅಲ್ಲಿ ತೊಡಗಿಕೊಂಡಿರುವವರನ್ನು ಕ್ರಮೇಣ ಅಲ್ಲಿಂದ ಕಳಚಿ ಕೊಳ್ಳುವಂತೆ ಮಾಡಬೇಕು. ಅವರಿಗೆ ಬೇರೆ ಕೌಶಲಗಳನ್ನು … Read more

‘ಹೈಟೆಕ್ ಹೂಡಿಕೆ’ಗಿಂತಲೂ ಸ್ಥಳೀಯರ ಅಭಿವೃದ್ಧಿ ಮುಖ್ಯ

'ಹೈಟೆಕ್ ಹೂಡಿಕೆ'

‘ಹೈಟೆಕ್ ಹೂಡಿಕೆ’ಗಿಂತಲೂ ಸ್ಥಳೀಯರ ಅಭಿವೃದ್ಧಿ ಮುಖ್ಯ ಕರ್ನಾಟಕದ 2025-26ರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳ ನಡುವೆ ಹೇಗೆ ಸಮತೋಲನ ಸಾಧಿಸಲಾಗುತ್ತದೆ ಎನ್ನುವ ಬಗ್ಗೆ ತೀವ್ರವಾದ ಕುತೂಹಲವಿದೆ.ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕರು ಮುಖ್ಯಮಂತ್ರಿಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಗ್ಯಾರಂಟಿಗಳನ್ನು ಕಡಿತಗೊಳಿಸಿದರೆ, ಕಾಂಗ್ರೆಸ್‌ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಈ ಬಾರಿಯ ಬಜೆಟ್ ಅನ್ನು ಕೂಡ ಮತ್ತೊಂದು ಸಮತೋಲನದ ಕ್ರಿಯೆ ಎಂದು ಭಾವಿಸುವರೋ ಅಥವಾ … Read more

ತ್ರಿಭಾಷಾ ಸೂತ್ರ ಉರುಳಾಗಿರುವುದೇಕೆ?

ತ್ರಿಭಾಷಾ

ತ್ರಿಭಾಷಾ ಸೂತ್ರ ಉರುಳಾಗಿರುವುದೇಕೆ? ಕೇಂದ್ರದ ಹಿಂದಿ ಪರ ನಿಲುವು ಕನ್ನಡದ ಹಿತಾಸಕ್ತಿಗೆ ಕುತ್ತಾಗಿ ಪರಿಣಮಿಸಿದೆ. ಹೀಗಾಗಿ, ಈ ವಿಷಯದಲ್ಲಿ ನಾವು ರಾಜಕೀಯವನ್ನು ಬದಿಗಿರಿಸಿ ಯೋಚಿಸಲಾಗದು ಶಾಲೆಗಳಲ್ಲಿ ತ್ರಿಭಾಷಾ ಕಲಿಕಾ ನೀತಿ ಅಳವಡಿಸಿಕೊಳ್ಳುವುದು ಜಾಣತನದ ನಡೆ ಎಂಬ ಅಭಿಪ್ರಾಯವುಳ್ಳ ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಫೆ. 27), ಅವರೇ ತಿಳಿಸಿರುವ ಹಾಗೆ, ‘ಭಾಷೆಯ ಕಲಿಕೆಯು ವ್ಯಕ್ತಿಯ ಅಭ್ಯುದಯಕ್ಕೆ ಪೂರಕವಾಗಿರಬೇಕು ಎಂಬ ನೆಲೆಯಿಂದ ಮಾಡಿದ ಚಿಂತನೆ’ಯಾಗಿದೆ. ಆದರೆ ಭಾಷೆಯನ್ನೂ ಒಳಗೊಂಡಂತೆ ಶಿಕ್ಷಣದ ಗುರಿ ವೃಷ್ಟಿಯ ಜೊತೆ ಜೊತೆಗೆ … Read more

ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ

ಕರ್ನಾಟಕದ ಕ್ರಿಕೆಟಿಗರು

ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ. ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ ರಾಜ್ಯದ ಹತ್ತು ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಆಡಿದರು. ಯಾವುದೇ ತಂಡದಲ್ಲಿ ಸ್ಥಾನ ಪಡೆದರೂ ತಮ್ಮಸಾಮರ್ಥ್ಯವನ್ನು ಧಾರೆಯೆರೆದು ಬರುವ ಗುಣ ಇಲ್ಲಿಯ ಆಟಗಾರರಿಗೆ ಇದೆ. ಈ ಮಾತಿಗೆ ಸದ್ಯ ಕರುಣ್ ನಾಯ‌ರ್ ಅವರು ಉತ್ತಮ ಉದಾಹರಣೆ.ಈ ಋತುವಿನಲ್ಲಿ ವಿದರ್ಭ ತಂಡವು ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಫೈನಲ್ ತಲುಪುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದರು. ವಿಜಯ್ … Read more

ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ದೂರು

ಹೈಕೋರ್ಟ್‌

ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ದೂರು ಲೋಕಪಾಲ್ ನಿಲುವು ಸ್ವೀಕಾರಾರ್ಹವಲ್ಲ ಹೈಕೋರ್ಟ್‌ಗಳ ಹಾಲಿ ನ್ಯಾಯಮೂರ್ತಿಗಳ ವಿರುದ್ಧದ ದೂರುಗಳನ್ನೂ ಪರಿಶೀಲಿಸುವ ಅಧಿಕಾರ ತನಗಿದೆಎಂದು ದೇಶದಲ್ಲಿ ಭ್ರಷ್ಟಾಚಾರ ನಿಗ್ರಹದ ಹೊಣೆಗಾರಿಕೆ ಹೊಂದಿರುವ ಅತ್ಯುನ್ನತ ಸಂಸ್ಥೆಯಾಗಿರುವ ಲೋಕಪಾಲ್ ತಳೆದಿರುವ ನಿಲುವು ಲೋಕಪಾಲ್ ಅಧಿಕಾರ ವ್ಯಾಪ್ತಿ ಮತ್ತು ನ್ಯಾಯಮೂರ್ತಿಗಳಿಗೆ ಇರುವ ರಕ್ಷಣೆ ಕುರಿತು ಚರ್ಚೆಗೆ ನಾಂದಿ ಹಾಡಿದೆ. ಹೈಕೋರ್ಟ್‌ವೊಂದರ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ತನಗೆ ಬಂದಿರುವ ಎರಡು ದೂರುಗಳು ಮತ್ತು ಅವುಗಳ ಜೊತೆ ಸಲ್ಲಿಸಿರುವ ದಾಖಲೆಗಳನ್ನು ಮುಂದಿನ ಕ್ರಮಕ್ಕಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ … Read more

ಹೊರಬಾಂಧವ್ಯಕ್ಕೆ ಮನ ಹಾತೊರೆಯುವುದೇಕೆ?

ಹೊರಬಾಂಧವ್ಯಕ್ಕೆ

ಹೊರಬಾಂಧವ್ಯಕ್ಕೆ ಮನ ಹಾತೊರೆಯುವುದೇಕೆ? ನನ್ನಗಂಡಬೇರೊಬ್ಬಳೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಸಂಬಂಧ ಹೊಂದಿದ್ದಾನೆ ಎನ್ನುವ ಗುಮಾನಿ ಇದೆ. ಅದೂ ಗುಮಾನಿಯಷ್ಟೆ ಎಂದೂ ಮನಸ್ಸು ಸಮಾಧಾನಿಸಿಕೊಂಡರೂ, ದಿನೇ ದಿನೇ ನಡೆಯುತ್ತಿರುವ ಘಟನೆಗಳು ಈ ಗುಮಾನಿಯನ್ನು ಪುಷ್ಟಿಕರಿಸುತ್ತಿವೆ. ಹಾಗಾಗಿ ಬೇರೆ ದಾರಿಯಲ್ಲಿ ನಡೆಯುತ್ತಿರುವ ಗಂಡನನ್ನು ಸರಿ ದಾರಿಗೆ ತರುವುದು ಹೇಗೆ?. ನನ್ನ ಮತ್ತು ಅವನ ಸಂಬಂಧ ಚೆನ್ನಾಗಿಯೇ ಇದೆ. ಅವನ ಸಣ್ಣ ಕದಲಿಕೆಯೂ ಬಹುಬೇಗ ಅರ್ಥವಾಗುತ್ತದೆ. ಪತ್ನಿಯೊಂದಿಗೆ ಉತ್ತಮ ಸಂಬಂಧ ಇದ್ದರೂ ಬೇರೆ ಸಂಬಂಧ ಇಟ್ಟುಕೊಳ್ಳಬೇಕು ಎಂದು ಗಂಡಸರಿಗೆ ಯಾಕೆ ಅನಿಸುತ್ತದೆ? … Read more

ಬಿಯರ್ ದರ ಏರಿಕೆಗೆ ಇಳಿದ ಕಿಕ್

ಬಿಯರ್ ದರ

ಬಿಯರ್ ದರ ಏರಿಕೆಗೆ ಇಳಿದ ಕಿಕ್ ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ಬಿಯ‌ರ್ ದರ ಹೆಚ್ಚಿಸಿದ ರಾಜ್ಯ ಸರಕಾರಕ್ಕೆ ಮದ್ಯಪ್ರಿಯರು ಶಾಕ್ ಕೊಟ್ಟಿದ್ದಾರೆ. ಬೆಲೆ ಏರಿಕೆ ಕಾರಣಕ್ಕೆ ಮದ್ಯಪ್ರಿಯರು ಬಿಯರ್ ಖರೀದಿಗೆ ನಿರಾಸಕ್ತಿ ತೋರಿದು,ರಾಜ್ಯದಲ್ಲಿ ಬಿಯರ್ ಮಾರಾಟ ಶೇ.16ರಷ್ಟು ಕುಸಿತ ಕಂಡಿದೆ. ಸರಕಾರ ಜ.20ರಿಂದ ಜಾರಿಗೆ ಬರುವಂತೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿ ದರ ಏರಿಕೆ ಮಾಡಿತ್ತು. ಇದರೊಂದಿಗೆ ಸಾಮಾನ್ಯ ಬ್ರ್ಯಾಂಡ್‌ಗಳಿಂದ ಪ್ರೀಮಿಯಂ ಬ್ರ್ಯಾಂಡ್ ಗಳವರೆಗೆ ಎಲ್ಲಾ ಬಗೆಯ ಬಿಯರ್ ದರ ಹೆಚ್ಚಳವಾಗಿದ್ದು ಪ್ರತಿ … Read more