ಅಮೆರಿಕ ಮಾಜಿ ಅಧ್ಯಕ್ಷ ಕಾರ್ಟರ್ ನಿಧನ ಭೇಟಿ ನೆನಪಿಗೆ ಹರ್ಯಾಣ ಹಳ್ಳಿ ಹೆಸರು ಕಾರ್ಟ‌್ರಪುರಿ!

ಅಮೆರಿಕ ಮಾಜಿ

ಅಮೆರಿಕ ಮಾಜಿ ಅಧ್ಯಕ್ಷ ಕಾರ್ಟರ್ ನಿಧನ ಭೇಟಿ ನೆನಪಿಗೆ ಹರ್ಯಾಣ ಹಳ್ಳಿ ಹೆಸರು ಕಾರ್ಟ‌್ರಪುರಿ! ನವದೆಹಲಿ: ಅಮೆರಿಕದ 39ನೇ ಅಧ್ಯಕ್ಷ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಜಿಮ್ಮಿ ಕಾರ್ಟರ್ (100) ಅಮೆರಿಕ ಜಾರ್ಜಿಯಾದ ತಮ್ಮ ಹುಟ್ಟೂರು ಪ್ಲೇನ್ಸ್‌ನಲ್ಲಿ ನಿಧನರಾಗಿದ್ದಾರೆ. 1977ರಿಂದ 1981ರವರೆಗೆ ಅಧ್ಯಕ್ಷರಾಗಿದ್ದರು. ಹುಟ್ಟೂರಿನಲ್ಲಿ ಕಡಲೇಕಾಯಿ ರೈತರಾಗಿದ್ದ ಅವರು, ಪೀಚ್ ರಾಜ್ಯದ ಗರ್ವರ್ ಆಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ನೀಡಿದ ಕೊಡುಗೆಗೆ 2002ರಲ್ಲಿ ನೊಬೆಲ್ ಪುರಸ್ಕಾರ ಪಡೆದಿದ್ದರು. ಕಾರ್ಟ‌ಪುರಿ: … Read more

ಹತ್ಯೆ-ಆತ್ಮಹತ್ಯೆಯ ಕಾರುಬಾರು

ಹತ್ಯೆ-ಆತ್ಮಹತ್ಯೆಯ

ಹತ್ಯೆ-ಆತ್ಮಹತ್ಯೆಯ ಕಾರುಬಾರು ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಆರೋಪ |ರಾಜ್ಯಪಾಲರಿಗೆ ದೂರು ವಿಜಯವಾಣಿ ಸುದ್ದಿಜಾಲ ಬೆಂಗಳೂರು ಶಾಂತಿ, ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಹತ್ಯೆ, ಆತ್ಮಹತ್ಯೆ ರಾಜ್ಯವಾಗಿ ಪರಿವರ್ತನೆಯಾಗಿದೆ. ಕಾನೂನು ಎಲ್ಲರಿಗೆ ಒಂದೇ ಆಗಿದ್ದರೂ ಆಡಳಿತ, ಪ್ರತಿಪಕ್ಷಗಳ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ನಂತರ ರಾಜಭವನದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಬೆಳಗಾವಿಯ ನೌಕರ ರುದ್ರಣ್ಣ ಯಡಣ್ಣವರ್ ಹಾಗೂ … Read more

ಬೇಜವಾಬ್ದಾರಿ ಧೋರಣೆ ಸಲ್ಲ

ಬೇಜವಾಬ್ದಾರಿ

ಬೇಜವಾಬ್ದಾರಿ ಧೋರಣೆ ಸಲ್ಲ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿವಾದಗಳ ಸರಣಿ ಮುಂದುವರಿದಿದೆ. ಆಯೋಗ ನಡೆಸುವ ಕೆಎಎಸ್ ಪರೀಕ್ಷೆಯು ಈ ಹಿಂದೆ ಪ್ರಶ್ನೆಪತ್ರಿಕೆಗಳ ಭಾಷಾಂತರದಲ್ಲಿ ಆದ ಗೊಂದಲಗಳಿಂದಾಗಿ ಮುಂದೂಡಿಕೆಯಾಗಿತ್ತು. ಭಾನುವಾರ ನಡೆದ ಅದರ ಮರುಪರೀಕ್ಷೆಯಲ್ಲಿಯೂ ಅದೇ ತಪ್ಪು ಮರುಕಳಿಸಿರುವುದು ಬೇಜವಾಬ್ದಾರಿತನಕ್ಕೆ ಸಾಕ್ಷಿ. ಅನುವಾದದಲ್ಲಿ ಹಲವು ತಪ್ಪುಗಳಾಗಿರುವುದಲ್ಲದೆ, ಕೆಲವು ವಾಕ್ಯಗಳಂತೂ ಗೊಂದಲಮಯವಾಗಿದ್ದವು. ಪ್ರಶ್ನೆಪತ್ರಿಕೆಯೇ ಇಷ್ಟು ದೋಷಪೂರ್ಣವಾಗಿದ್ದರೆ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುವುದು ಹೇಗೆ? ಪ್ರತಿ ಬಾರಿಯೂ ತಮ್ಮದಲ್ಲದ ತಪ್ಪಿಗೆ ಅಭ್ಯರ್ಥಿಗಳು ಶಿಕ್ಷೆ ಅನುಭವಿಸುವಂತಾಗಿರುವುದು ವ್ಯವಸ್ಥೆಯ ಘೋರ ವೈಫಲ್ಯಕ್ಕೆ ನಿದರ್ಶನ. ಹಳೆಯ … Read more

ಏಳು ರಾಜ್ಯಗಳಲ್ಲಿ ಉಪಕ್ರಮ | ರಾಜ್ಯದ 26 ಜಿಲ್ಲೆಗಳು ಆಯ್ಕೆ

ಏಳು ರಾಜ್ಯಗಳಲ್ಲಿ

ಏಳು ರಾಜ್ಯಗಳಲ್ಲಿ ಉಪಕ್ರಮ | ರಾಜ್ಯದ 26 ಜಿಲ್ಲೆಗಳು ಆಯ್ಕೆ ಖಾದ್ಯ ತೈಲ ಸ್ವಾವಲಂಬನೆಗೆ ಮಹತ್ವದ ಹೆಜ್ಜೆ ಮೃತ್ಯುಂಜಯ ಕಪಗಲ್ ಬೆಂಗಳೂರು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಎಣ್ಣೆಕಾಳುಗಳ ಉತ್ಪಾದಕತೆ ಸಾಕಷ್ಟು ಸುಧಾರಿಸಿರುವ ನಡುವೆಯೇ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ವಿಶೇಷ ಉಪಕ್ರಮ ಆಯೋಗ ಶಿಫಾರಸು ಮಾಡಿದೆ. ಈ ಅಭಿಯಾನದಡಿ ರಾಜ್ಯದ 26 ಜಿಲ್ಲೆಗಳು ಆಯ್ಕೆಯಾಗಿದ್ದು, ವಿವಿಧ ಚಟುವಟಿಕೆಗಳಿಗೆ ಸಹಾಯಧನ ಲಭ್ಯವಾಗಲಿದೆ. ಏನೆಲ್ಲ ಉಪಕ್ರಮ?: ಬಿತ್ತನೆ ಬೀಜ ವಿತರಣೆ, … Read more

ಭಗವಂತನ ನಾನಾ ರೂಪಗಳನ್ನು ಬಲ್ಲವರಾರು?

ಭಗವಂತನ

ಭಗವಂತನ ನಾನಾ ರೂಪಗಳನ್ನು ಬಲ್ಲವರಾರು? ಅದೊಂದು ದಿನ ಬೆಳಿಗ್ಗೆ 9 ಗಂಟೆಯ ಸಮಯ. ಎಲ್ಲರೂ ಅವರವರ ಮನೆಕೆಲಸ ಮುಗಿಸಿ ತಮ್ಮ ಆಫೀಸುಗಳಿಗೆ ಹೋಗುವ ತರಾತುರಿಯಲ್ಲಿದ್ದರು. ಆಟೋ ಮತ್ತು ಕ್ಯಾಬ್ ಗಳಿಗಂತೂ ಈ ಸಮಯದಲ್ಲಿ ಎಲ್ಲಿಲ್ಲದ ಡಿಮಾಂಡು. ಅಷ್ಟರಲ್ಲಿ ಒಬ್ಬ ಹೆಣ್ಣುಮಗಳು ಹೇಗೋ ಒಂದು ಆಟೋವನ್ನು ಬುಕ್ ಮಾಡಿಕೊಂಡು ಬಿಟ್ಟಳು. ಆಕೆ, ಇನ್ನೇನು ಆಟೋವನ್ನು ಹತ್ತಬೇಕೆನ್ನುವಷ್ಟರಲ್ಲಿ, ಗೌರವಾನ್ವಿತನಂತೆ ತೋರುವ ಒಬ್ಬ ವ್ಯಕ್ತಿ ತಕ್ಷಣ ಆಕೆಯ ಬಳಿ ಓಡೋಡಿ ಬಂದು ದಯವಿಟ್ಟು ‘ಈ ಆಟೋವನ್ನು ನನಗೆ ಬಿಟ್ಟು ಬಿಡಿ’ ಎಂದು … Read more

ಸನಾತನ ಧರ್ಮದಲ್ಲಿ ಭಗವಂತನ ಸಹಿ ಓಂಕಾರ

ಸನಾತನ

ಸನಾತನ ಧರ್ಮದಲ್ಲಿ ಭಗವಂತನ ಸಹಿ ಓಂಕಾರ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಒಂದು ಪ್ರಾತಿನಿಧಿಕ ಚಿಹ್ನೆಯಿದೆ. ಈ ದೃಷ್ಟಿಯಲ್ಲಿ, ‘ಓಂ- ಚಿಹ್ನೆಯು ಸನಾತನ ಧರ್ಮವನ್ನು ಪ್ರತಿನಿಧಿಸುತ್ತದೆ. ಇದ ಸಾಕ್ಷಾತ್ ಭಗವಂತನನ್ನು ಪ್ರತಿಬಿಂಬಿಸುವ ಚಿಹ್ನೆಗಳ ಪೈಕಿ ಆಳ ಹಾಗೂ ಉತ್ಕೃಷ್ಟ ಅರ್ಥವನ್ನು ಹೊಂದಿರುವ ಚಿಹ್ನೆಯಾಗಿದೆ. ‘ಓಂಕಾರ’ದಲ್ಲಿ ಭಗವಂತನ ಹಾಗೂ ಸೃಷ್ಟಿಯ ಪರಿಪೂರ್ಣತೆಯೇ ಸಾಂಕೇತಿಕವಾಗಿ ಅಡಕವಾಗಿದೆ ಮತ್ತು ಇದುವೇ ಸನಾತನ ಧರ್ಮದ ಸಾರವೂ ಆಗಿದೆ. ಇಂತಹ ಓಂಕಾರದ ಮಹತ್ವವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಓಂಕಾರವನ್ನು ವಿಶ್ವದ ಪ್ರಪ್ರಥಮ ಶಬ್ದವೆಂದು ಪರಿಗಣಿಸಲಾಗಿದೆ. … Read more

ಇ-ತ್ಯಾಜ್ಯ ಬೇಕಿದೆ ಪರಿಹಾರ

ಇ-ತ್ಯಾಜ್ಯ

ಇ-ತ್ಯಾಜ್ಯ ಬೇಕಿದೆ ಪರಿಹಾರ ಭಾರತದಲ್ಲಿ‌ ಇತ್ಯಾಜ್ಯ ಬಾರಿ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದ್ದು. ಐದು ವರ್ಷಗಳಲ್ಲಿ ಶೇ.72.54ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ 2024ರ ಡಿ. 16ರಂದು ಮಾಹಿತಿ ನೀಡಿರುವ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಟೋಖನ್ ಸಾಹು ಅವರು, 2019-20ರಲ್ಲಿ 10,14,961 ಟನ್‌ಗಳಷ್ಟಿದ್ದ (ಎಂಟಿ) ಇ-ತ್ಯಾಜ್ಯದ ಪ್ರಮಾಣ2023-24ರ ಹೊತ್ತಿಗೆ17,51,236 ಟನ್‌ಗಳಿಗೆ ಹೆಚ್ಚಳವಾಗಿದೆ ಎಂದಿದ್ದಾರೆ. ಕೈಗಾರಿಕೀಕರಣ ಮತ್ತು ನಗರೀಕರಣದಿಂದ ದೇಶದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಾಗಿದೆ. ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ … Read more

ಸಂದೇಹ ನಿವಾರಿಸಿಕೊಳ್ಳುವ ಹೊತ್ತು

ಸಂದೇಹ

ಸಂದೇಹ ನಿವಾರಿಸಿಕೊಳ್ಳುವ ಹೊತ್ತು ಸಿದ್ಧತಾ ಪರೀಕ್ಷೆಗಳು ಸಮೀಪಿಸುತ್ತಿವೆ. ಸಂದೇಹ, ಪ್ರಶ್ನೆಗಳಿದ್ದರೆ ಗುರುಗಳನ್ನು ಕೇಳಿ ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳು ಹಿಂಜರಿಯಬಾರದು ಶಾಲೆ, ಕಾಲೇಜುಗಳಲ್ಲಿ ಈಗ ವಿವಿಧ ವಿಷಯಗಳಲ್ಲಿ ಪಠ್ಯಕ್ರಮದ ಬೋಧನೆ ಬಹುತೇಕ ಮುಗಿದಿರುತ್ತದೆ. ಸಿದ್ಧತಾ ಪರೀಕ್ಷೆಗಳು ಸಮೀಪಿಸುತ್ತಿವೆ. ಬೋಧನೆಯಾದ ಅಧ್ಯಾಯಗಳಲ್ಲಿ ಸಂದೇಹ, ಪ್ರಶ್ನೆಗಳು ಕಾಡಿದರೆ ವಿದ್ಯಾರ್ಥಿಗಳು ಗುರುಗಳನ್ನು ಕೇಳಿ ಪರಿಹರಿಸಿ ಕೊಳ್ಳುವ ದಿನಗಳಿವು. ಬೋಧನೆಗಿಂತ ಹೆಚ್ಚು ಆಸ್ಥೆ ತೋರಿ ಗುರುಗಳು ಅವುಗಳನ್ನು ನಿರ್ವಹಿಸಬೇಕಾದುದು ಅಪೇಕ್ಷಣೀಯ. ವಿದ್ಯಾರ್ಥಿಗಳಿಗೆ ಎದುರಾಗುವ ಜಿಜ್ಞಾಸೆಗಳು ಗುರುಗಳ ಅರಿವನ್ನು ಕೂಡ ಪುನಶ್ವೇತನಗೊಳಿ ಬಲ್ಲವು. ಬೋಧಿಸುವಾಗ ಅದೆಷ್ಟು ಕಣ್ಣು … Read more

ಎಲ್ಲ ಓಕೆ, ಬೆಲೆ ಒಂದೇ ಇಲ್ಲ ಏಕೆ?

ಎಲ್ಲ ಓಕೆ

ಎಲ್ಲ ಓಕೆ, ಬೆಲೆ ಒಂದೇ ಇಲ್ಲ ಏಕೆ? ಒಂದು ದೇಶ ಒಂದು ಚುನಾವಣೆ, ಒಂದು ದೇಶ ಒಂದು ತೆರಿಗೆ ಒಂದು ದೇಶ ಒಂದು ಕಾರ್ಡ್ ಒಂದು ದೇಶ ಒಂದು ವಿದ್ಯಾರ್ಥಿ ಐಡಿ ಒಂದು ದೇಶ ಒಂದು ನಂಬರ್ ಫ್ಲೇಟ್ ಭಲಾ ಭಲಾ ಏನು ಏಕರೂಪತೆ ,ಮೆಚ್ಚಬೇಕಾದ್ದೆ . ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶದಲ್ಲಿ ಏಕತೆಯ ಮಹಾಪೂರ, ಒಂದು ದೇಶ ಒಂದು ಸಾಧನೆ ಎನ್ನೋದರಲ್ಲಿ ಹಲವಾರು ಅನುಕೂಲಗಳಿವೆ ಅದರಲ್ಲಿ ಅನುಮಾನಗಳಿಲ್ಲ. ಆದರೆ ಇದಕ್ಕಿಂತಲೂ ಅಗತ್ಯವಾಗಿ ಏಕತೆ ಸಾಧಿಸಲೇಬೇಕಾದ ಅನೇಕ … Read more

ಜಿಎಸ್‌ಟಿ ಮಂಡಳಿಯ ತೀರ್ಮಾನ ವ್ಯವಸ್ಥೆಯ ಅಸಮತೋಲನದ ಪ್ರದರ್ಶನ

ಜಿಎಸ್‌ಟಿ ಮಂಡಳಿ

ಜಿಎಸ್‌ಟಿ ಮಂಡಳಿಯ ತೀರ್ಮಾನ ವ್ಯವಸ್ಥೆಯ ಅಸಮತೋಲನದ ಪ್ರದರ್ಶನ ರಾಜಸ್ಥಾನದ ಜೈಸಲೇರ್‌ನಲ್ಲಿ ಈಚೆಗೆ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯು ಹಲವು ಪ್ರಮುಖ ಸಂಗತಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಮುಂದೂಡಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಸಭೆಯು ಬಹಳ ಸಣ್ಣ ಸಂಗತಿಗಳ ಬಗ್ಗೆ ತೀರಾ ಸೂಕ್ಷ್ಮವಾಗಿ ಗಮನಹರಿಸಿದೆ ಎಂಬುದು ಕೂಡ ಟೀಕೆಗಳಲ್ಲಿ ಒಂದಾಗಿದೆ. ಪಾಪ್‌ಕಾರ್ನ್ ಮೇಲೆ ಬೇರೆ ಬೇರೆ ಹಂತಗಳ ತೆರಿಗೆಯನ್ನು ಜಾರಿಗೆ ತರಲು ತೀರ್ಮಾನಿಸಿರುವುದು ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಂಗ್ಯದ ವಸ್ತುವಾಗಿದೆ. ಉಪ್ಪುಸಹಿತ … Read more