ವಿಶ್ವವಿದ್ಯಾಲಯ :ಸಂಖ್ಯೆಯಷ್ಟೇ ಮುಖ್ಯವೇ?

ವಿಶ್ವವಿದ್ಯಾಲಯ

ವಿಶ್ವವಿದ್ಯಾಲಯ :ಸಂಖ್ಯೆಯಷ್ಟೇ ಮುಖ್ಯವೇ? ವ್ಯಾಪಕವಾದ, ಗಹನವಾದ ಅಂತರ್ಶಿಸ್ತೀಯ ಅಧ್ಯಯನಗಳು ನಡೆಯುವ ವಿಶ್ವವಿದ್ಯಾಲಯಗಳು ನಮ್ಮಲ್ಲಿ ಇವೆಯೇ ಎಂದು ಕೇಳಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿ ಈ ಹಿಂದೆ ಇದ್ದ ಸರ್ಕಾರವು ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ತರಾ ತುರಿಯನ್ನು ಆರಂಭಿಸಿದ 10 ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತನ್ನು ಮುಚ್ಚಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ ಎಂದು ವರದಿಯಾಗಿದೆ (ಪ್ರ.ವಾ.ಫೆ. 14)ಇದು ಸರಿಯಾದ ನಡೆ.ಇಂದು ವಿಶ್ವವಿದ್ಯಾಲಯಗಳೆಂದು ನಾವು ಕರೆಯುವ ನಮ್ಮ ಈ ಆಧುನಿಕ ಸಾಲದ ಬೋಧನ- ಶೋಧನ ಸಂಸ್ಥೆಗಳ ತತ್ವವೇನು, … Read more

ಪ್ರಧಾನಿ ಮೋದಿ ಅಮೆರಿಕ ಭೇಟಿ ಫಲಿತಾಂಶ ಅರಿಯಲು ತುಸು ಕಾಯಬೇಕು

ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅಮೆರಿಕ ಭೇಟಿ ಫಲಿತಾಂಶ ಅರಿಯಲು ತುಸು ಕಾಯಬೇಕು ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಕ್ಕೆ ನೀಡಿದ ಮೊದಲ ಭೇಟಿ ಸಂದರ್ಭದ ಮಾತುಕತೆಗಳಲ್ಲಿ ವ್ಯಾಪಾರ ವಹಿವಾಟು ಮತ್ತು ಅಕ್ರಮ ವಲಸೆ ವಿಷಯವೇ ಪ್ರಧಾನವಾಗಿತ್ತು. ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಮೋದಿ ಮತ್ತು ಟ್ರಂಪ್ ಅವರ ನಡುವೆ ಒಳ್ಳೆಯ ಭಾಂದವ್ಯ ಇತ್ತು. ಮೋದಿ ಮತ್ತು ಟ್ರಂಪ್ ಸ್ನೇಹಿತರೂ ಹೌದು ಎಂಬ ಮಾತುಗಳು ಇವೆ. … Read more

ಅಧ್ಯಕ್ಷಗಿರಿಯತ್ತ ಲಕ್ಷ್ಯ: ಜನ ಹಿತ ಅಲಕ್ಷ್ಯ

ಅಧ್ಯಕ್ಷಗಿರಿಯತ್ತ

ನೆಲಕ್ಕೆ ಕಿವಿಯನಿಸಿ ನಿಶ್ಯಬ್ದದೊಳಗಣ ಶಬ್ದ ಆಲಿಸುವವನೇ ನಿಜದ ನಾಯಕಅಧ್ಯಕ್ಷಗಿರಿಯತ್ತ ಲಕ್ಷ್ಯ: ಜನ ಹಿತ ಅಲಕ್ಷ್ಯ ವಿಧಾನಸಭೆಯ ಮೂರೂ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನ ರಾಜ್ಯ ಘಟಕಗಳಲ್ಲಿ ನಡೆಯುತ್ತಿರುವ ಕಾಲೆಳೆಯುವ ಆಟ, ಅಧ್ಯಕ್ಷ ಸ್ಥಾನವನ್ನೇ ವಿದೂಷಕನ ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾಯಕರು ನಿತ್ಯವೂ ಬೈದಾಡಿಕೊಂಡು ನಡೆಸುತ್ತಿರುವ ಪ್ರಹಸನ, ನಾಡಿನ ರಾಜಕಾರಣ ತಲುಪಿರುವ ದುರಂತಕ್ಕೆ ನಿದರ್ಶನ.ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರವನ್ನು ಉಳಿಸಿಕೊಂಡು, ಬಿಜೆಪಿ, ಜೆಡಿಎಸ್ ಪ್ರತಿನಿಧಿಸಿದ್ದ ಎರಡು ಕ್ಷೇತ್ರಗಳನ್ನೂ ಕಾಂಗ್ರೆಸ್ ಕಿತ್ತುಕೊಂಡಿತು. ಈ ಕ್ಷೇತ್ರಗಳನ್ನು … Read more

4 ಗುರಿಗಳಲ್ಲಿ ಮುಗ್ಗರಿಸಿದ್ದು 2, ಹಳಿ ಮೇಲೆ ಬಾರದ್ದು ಒಂದು ನಿರೀಕ್ಷೆಯಂತೆ ನಡೆದ

4 ಗುರಿಗಳಲ್ಲಿ

4 ಗುರಿಗಳಲ್ಲಿ ಮುಗ್ಗರಿಸಿದ್ದು 2, ಹಳಿ ಮೇಲೆ ಬಾರದ್ದು ಒಂದು ನಿರೀಕ್ಷೆಯಂತೆ ನಡೆದ ಹೂಡಿಕೆದಾರರ ಸಮಾವೇಶ ತಲೆಕೆಳಗಾದ ರಾಜ್ಯ ಸರ್ಕಾರದ ವಿತ್ತೀಯ ಕಾರ್ಯನೀತಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಳಿ ತಪ್ಪದಂತೆ ನೋಡಿಕೊಳ್ಳುವ ಉದ್ದೇಶದಿಂದ ಸರ್ಕಾರ 2024-25ನೇ ಸಾಲಿಗೆ ತನ್ನ ವಿತ್ತೀಯ ಕಾರ್ಯನೀತಿ ಪ್ರಸ್ತಾಪಿಸಿತ್ತು, ಆದಾಯ ಮತ್ತು ವೆಚ್ಚದ ಮೇಲೆ ನಿಯಂತ್ರಣ ಸಾಧಿಸುವುದು ಈ ನೀತಿಯ ಪ್ರಮುಖ ಸಂಗತಿ, ಆದರೆ, ಸರ್ಕಾರ ಆರ್ಥಿಕ ವರ್ಷದ ಆರಂಭದಲ್ಲಿ ಅಂದುಕೊಂಡಿದ್ದೇ ಬೇರೆ, ಕೊನೆಯಲ್ಲಿ ಆಗಿದ್ದೇ ಬೇರೆ ಎಂಬಂತಾಗಿದೆ. ವಿತ್ತೀಯ ಕಾರ್ಯನೀತಿಯು ನಾಲ್ಕು … Read more

ಭಾರತವನ್ನು ಒಂದಾಗಿಸಿದ ಕುಂಭದ 3 ದರ್ಶನಗಳು!

ಭಾರತವನ್ನು

ಭಾರತವನ್ನು ಒಂದಾಗಿಸಿದ ಕುಂಭದ 3 ದರ್ಶನಗಳು! ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂದಮೇಳಕ್ಕೆ ತೆರೆ ಬಿದ್ದಿದೆ. ಈ ಬಾರಿ ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ 40 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿತ್ತು. ಈಗ ಲಭ್ಯ ಆಗುತ್ತಿರುವ ಮಾಹಿತಿಯ ಪ್ರಕಾರ ಕುಂಭಮೇಳದಲ್ಲಿ ಪಾಲ್ಗೊಂಡವರ ಸಂಖ್ಯೆ 65 ಕೋಟೆಯ ಗಡಿ ದಾಟಿರುವ ಅಂದಾಜಿದೆ. ಅಧಿಕೃತ ಸಂಖ್ಯೆ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ವಿಶೇಷ ಏನು ಅಂದರೆ ಚೀನಾ, ಭಾರತ ಹೊರತುಪಡಿಸಿ ಪ್ರಪಂಚದ ಇತರ ಯಾವುದೇ ಒಂದು ದೇಶದ ಒಟ್ಟು ಜನಸಂಖ್ಯೆಗಿಂತ ಅಧಿಕ … Read more

ಸುಸೂತ್ರ ಕಲಾಪ ನಡೆಯಲಿ

ಸುಸೂತ್ರ ಕಲಾಪ

ಸುಸೂತ್ರ ಕಲಾಪ ನಡೆಯಲಿ ಇಂದು (ಸೋಮವಾರ) ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 21ರವರೆಗೆ ನಡೆಯಲಿದೆ. ಸರ್ಕಾರ ಹಾಗೂ ಪತಿಪಕ್ಷಗಳು ಉತ್ಸಾಹದಲ್ಲಿವೆ. ಸರ್ಕಾರದ ನೀತಿಗಳನ್ನು ವಿರೋಧಿಸಲು, ವೈಫಲ್ಯಗಳನ್ನು ಎತ್ತಿ ತೋರಿಸಲು ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ನಾಯಕರು ಸಜ್ಜಾಗಿದ್ದಾರೆ. ಬಂಡವಾಳ ಹೂಡಿಕೆ ಸಮಾವೇಶದ ಯಶಸ್ಸು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾತನಾಡಲು ಸರ್ಕಾರದಲ್ಲಿ ಇರುವವರು ಕಾತರರಾಗಿದ್ದಾರೆ. ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದು. ವಿತ್ತೀಯ ಕೊರತೆಗೆ ಹೇಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬ ಕುತೂಹಲವೂ ಇದೆ. ಬಳಿಕ … Read more

ಅವಳು ಯಾರು?

ಅವಳು ಯಾರು?

ಅವಳು ಯಾರು? ಒಬ್ಬನೇ ಏನನೋ ಪಿಸುಗುಡುತ್ತಾ ಬೇವಿನ ಸೊಪ್ಪು ಕಿತ್ತು ಕಂಕುಳಿಗೆ ತೂರಿಸಿಕೊಂಡು ಬಂದು ಮಾವಿನ ಸೊಪ್ಪು ಕೀಳುತ್ತಿದ್ದ ಅಂಕಪ್ಪನಲ್ಲಿಗೆ ಬಂದ ರಾಮಣ್ಣ ‘ಅದೇನು ಅಂಕಪ್ಪ ಒಳ್ಳೆ ಅಮಾವಾಸ್ಯೆ ದಿನ ಬೇವಿನಸೊಪ್ಪು, ಮಾವಿನಸೊಪ್ಪು ಅಂತ ಕಿತ್ತುಕೊಂಡು ಹೊರಟಿದ್ದೀಯಲ್ಲ ಏನು ಸಮಾಚಾರ?’ ಅಂದರು.‘ನಮ್ಮ ಹಣೆಬರಹ, ಅದೇನು ಅಂತ ಹೇಳೋದು : ಬಾರಣ್ಣಯ್ಯ, ನಮ್ಮ ತಾತ ನೋಡಿದ್ರೆ ಸೋದರತ್ತೆ ಮಗಳನ್ನೇ ಮದುವೆ ಆಗೋಕು ಅಂತ್ರ್ಯಳಿ ಸತ್ತೋಗ್ಬಿಡ್ತು. ಇಲ್ಲ ನನಗವಳು ಬೇಡ ನಾನೇ ಎತ್ತಿ ಆಡಿಸಿರೋ ಮಗು ಅದು. ಅವಳ ಮೇಲೆ … Read more

ಉಪವಾಸದಿಂದ ಆಂತರಿಕ ಶುದ್ದಿ

ಉಪವಾಸದಿಂದ

ಉಪವಾಸದಿಂದ ಆಂತರಿಕ ಶುದ್ದಿ ರಂಜಾನ್ ಮಾಸ ಆರಂಭ ಮಹಮ್ಮದ್ ರಫೀ ಪಾಶ ರಂಜಾನ್ ತಿಂಗಳಲ್ಲಿ ತರಾವಿ ನಮಾಜ್ (ಪ್ರಾರ್ಥನೆ), ರೋಝಾ(ಉಪವಾಸ) ಮತ್ತು ಜಕಾತ್(ದಾನ)ಕ್ಕೆ ಹೆಚ್ಚು ಪ್ರಾಮುಖ್ಯವಿದೆ. ‘ಅಲ್ಲಾಹು ಅಕ್ಟರ್, ಅಲ್ಲಾಹು ಅಕ್ಟರ್’ ಈ ಶ್ಲೋಕವನ್ನು ಎಲ್ಲ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕದ ಮೂಲಕ ಹೇಳಿ ನಮಾಜ್‌ ಗಾಗಿ ಬನ್ನಿ’ ಎಂದು ಕರೆಯಲಾಗುತ್ತದೆ. ಐದು ಬಾರಿ ನಮಾಜ್ ಕಡ್ಡಾಯವಾಗಿ ಮಾಡಲೇಬೇಕು. ಪುರುಷರು ಸಂಘಟಿತರಾಗಿ ಮಸೀದಿಗಳಲ್ಲಿ ನಮಾಜ್ ಮಾಡಿದರೆ ಸ್ತ್ರೀಯರು. ಚಿಕ್ಕ ಮಕ್ಕಳು ಮನೆಯಲ್ಲೇ ನಮಾಜ್ ಮಾಡುತ್ತಾರೆ. ಜಗತ್ತಿನ … Read more

ಸಸ್ಯಗಳ ಸಂಗದಿ ಬಿಜಿಎಲ್ ಸ್ವಾಮಿ ಮತ್ತು ಶಿಷ್ಯರು

ಸಸ್ಯಗಳ ಸಂಗದಿ

ಸಸ್ಯಗಳ ಸಂಗದಿ ಬಿಜಿಎಲ್ ಸ್ವಾಮಿ ಮತ್ತು ಶಿಷ್ಯರು ಕೇಶವ ಎಚ್‌. ಕೊರ್ಸೆ ಗದೀಶ್ಚಂದ್ರ ಬೋಸ್, ಬೀರ್ಬಲ್ ಸಹಾನಿ, ಪಂಚಮ್ ಮಹೇಶ್ವರಿ, ಮುಂತಾದ ಶ್ರೇಷ್ಠ ಭಾರತೀಯ ಸಸ್ಯಶಾಸ್ತ್ರಜ್ಞರ ಸಾಲಿಗೆ ಸೇರುವ ಪ್ರತಿಭೆ ಮತ್ತು ಕೊಡುಗೆ ಬಿಜಿಎಲ್ ಸ್ವಾಮಿ ಅವರದ್ದು, ಬೆಂಗಳೂರಿನಲ್ಲಿ ಓದಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದು, ಅಮೆರಿಕದ ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಅನುಭವ ಗಳಿಸಿ, ಮದ್ರಾಸಿನಲ್ಲಿ ದೀರ್ಘಕಾಲ ಅಧ್ಯಾಪಕರಾಗಿದ್ದ ಅವರ ವೃತ್ತಿಜೀವನ ತುಂಬ ಫಲಪ್ರದವಾದದ್ದು. ಆ ಸಾಧನೆಯ ವ್ಯಾಪ್ತಿಯೂ ಅಷ್ಟೇ ದೊಡ್ಡದು. ಜೀವನದುದ್ದಕ್ಕೂ ಅಧ್ಯಾಪನದ ಜೊತೆಗೆ ಸಂಶೋಧನೆಯಲ್ಲೂ … Read more

ಮುಕ್ತಾದ ಇತಿಹಾಸದ ಕೊಂಡಿ

ಮುಕ್ತಾದ ಇತಿಹಾಸದ ಕೊಂಡಿ

ಮುಕ್ತಾದ ಇತಿಹಾಸದ ಕೊಂಡಿ ಹೊಸಪೇಟೆ (ವಿಜಯನಗರ): ಹಂಪಿ ಉತ್ಸವಕ್ಕೆ ಸಿದ್ಧತೆಗಳು ನಡೆದಿರುವಾಗಲೇ ಫ್ರಾನ್ಸ್‌ನಿಂದ ನಾಲ್ವರು ಮಹಿಳಾ ಪ್ರವಾಸಿಗರು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಹಂಪಿಗೆ ಬಂದಿದ್ದರು. ವಿರೂಪಾಕ್ಷ ದೇವಸ್ಥಾನ, ಸಾಲು ಮಂಟಪಗಳು, ಎದುರು ಬಸವಣ್ಣ ಮಂಟಪ ನೋಡಿಕೊಂಡು ಅಚ್ಯುತರಾಯ ದೇವಸ್ಥಾನ ನೋಡಿದ ಸ್ವಾಸ್ವಾಸ್ ಮತ್ತು ಸೆಲ್ವಿ ಅವರಿಗೆ ಶೌಚಕ್ಕೆ ಹೋಗಬೇಕಾದ ಸ್ಥಿತಿ ಎದುರಾಯಿತು. ಸುತ್ತಮುತ್ತ ಎಲ್ಲೂ ಶೌಚಾಲಯ ಇಲ್ಲ, ಗೈಡ್ ಮುಖಬಿಳಿಚಿಕೊಂಡಿತು. ಈ ಒಂದು ಕಾರಣಕ್ಕೆ ಭಾರತದ ಮಾನ ಕಳೆಯುವುದು ಅವರಿಗೆ ಬೇಕಿರಲಿಲ್ಲ. ಬನ್ನಿ ಇಲ್ಲೇ ಮುಂದೆ … Read more