ಟೋಲ್ ವಸೂಲಿ ಮಾಡಿದರೂ ಸೌಲಭ್ಯವಿಲ್ಲ

ಟೋಲ್ ವಸೂಲಿ

ರಸ್ತೆ ಕಾಮಗಾರಿ ಕೆಲವೆಡೆ ಅಪೂರ್ಣ, ಸೂಚನಾ ಫಲಕಗಳ ವ್ಯವಸ್ಥೆಯೂ ಇಲ್ಲ । ಬೀದಿ ದೀಪಗಳ ಸಮಸ್ಯೆ ಬಗೆಹರಿಸಲು ನಿರಾಸಕ್ತಿ ಟೋಲ್ ವಸೂಲಿ ಮಾಡಿದರೂ ಸೌಲಭ್ಯವಿಲ್ಲ ದೊಡ್ಡಬಳ್ಳಾಪುರದ ಮೂಲಕ ಹಾದು ಹೋಗಿರುವ ಯಲಹಂಕ-ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಟೋಲ್ ವಸೂಲಿ ಮಾತ್ರ ಉತ್ತಮವಾಗಿ ನಡೆಯುತ್ತಿದೆ. ಆದರೆ, ಸೌಲಭ್ಯಗಳ ವಿಷಯದಲ್ಲಿ ಮಾತ್ರ ಹಿಂದುಳಿದಿದೆ. ಈ ಮೂಲಕ ಜನರ ಸಂಚಾರಕ್ಕೆ ಸಾಕಷ್ಟು ಸವಾಲು ತಂದೊಡ್ಡಲಾಗಿದೆ. ದೊಡ್ಡಬಳ್ಳಾಪುರದ ಮಾರಸಂದ್ರದಿಂದ ಗೌರಿಬಿ ದನೂರು ಗಡಿಯವರೆಗೂ ದೊಡ್ಡಬಳ್ಳಾಪುರವನ್ನು ಹಾದು ಹೋಗಿರುವ ರಾಜ್ಯ ಹೆದ್ದಾರಿಯು 2 ಕಡೆಗಳಲ್ಲಿ ಟೋಲ್ … Read more

ಮುಡಾ ಹಗರಣ: ಇ.ಡಿ ಕಾತುಕ ಬಾಕಿ

ಮುಡಾ

ಮುಡಾ ಹಗರಣ: ಇ.ಡಿ ಕಾತುಕ ಬಾಕಿ ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ. ಸಮನ್ಸ್ ರದ್ದು ಕೋರಿ ಪಾರ್ವತಿ ಮತ್ತು ಬೈರತಿ ಸುರೇಶ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಧಾರವಾಡದಲ್ಲಿ ಗುರುವಾರ ವಿಚಾರಣೆ ನಡೆಸಿತು. ವಾದ ಪ್ರತಿವಾದ ಆಲಿಕೆ ಪೂರ್ಣಗೊಳಿಸಿದ ನ್ಯಾಯಾಲಯ, ಸಮನ್ಸ್‌ಗೆ ನೀಡಿದ್ದ … Read more

ಆರೋಗ್ಯವೂ ಪವಿತ್ರ

ಆರೋಗ್ಯವೂ ಪವಿತ್ರ

ಆರೋಗ್ಯವೂ ಪವಿತ್ರ ಭಕ್ತಿಮಜ್ಜನದ ಜತೆ ವಿಜ್ಞಾನವನ್ನೂ ಒಪ್ಪೋಣಪ್ರಯಾಗರಾಜ್‌ನಲ್ಲಿನ ನಡೆಯುತ್ತಿರುವ ಮಹಾ ಕುಂಭಮೇಳವು ಈಗಾಗಲೇ 58 ಕೋಟಿಗೂ ಹೆಚ್ಚಿನ ಜನರನ್ನು ಆಕರ್ಷಿಸಿ, ಮತ್ತೊಂದು ಮಗದೊಂದು ದಾಖಲೆಯತ್ತ ದಾಪುಗಾಲಿಡುತ್ತಿದೆ. 144 ವರ್ಷಗಳಿಗೊಮ್ಮೆ ಬರುವ ಮಹಾಪೂರ್ಣ ಕುಂಭಕ್ಕೆ ಸಾಕ್ಷಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಕೇವಲ ಭಾರತವಷ್ಟೇ ಅಲ್ಲದೆ, ಜಗತ್ತಿನ ವಿವಿಧ ಭಾಗದವರೂ ಉತ್ಸುಕರಾಗಿರುವುದು ಹೆಮ್ಮೆಯೇ ಸರಿ. ಈ ಸಂಖ್ಯೆ, ಈ ದಾಖಲೆ, ಈ ಭಕ್ತಿಭಾವಗಳ ಸಡಗರ ಹಾಗೂ ಈ ಅಭಿಮಾನಗಳ ಮೇಲೇರುತ್ತಿರುವ ಹೊತ್ತಿನಲ್ಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) “ಸಂಗಮದ … Read more

ಕವಿತೆಗೆ ಇದು ಕಾಲವಲ್ಲವೇ?

ಕವಿತೆಗೆ

ಕವಿತೆಗೆ ಇದು ಕಾಲವಲ್ಲವೇ? ಈ ಬಾರಿ ಕವನ ಸಂಕಲನಗಳ ಬಗ್ಗೆ ಗ್ರಂಥಾಲಯ ಇಲಾಖೆ ತೋರಿಸಿಲ್ಲ.ಕವಿಗೋಷ್ಠಿಯಲ್ಲಿ ಕೇಳುಗರಿರುವುದಿಲ್ಲ ಎಂಬುದು ಹೊಸ ಸುದ್ದಿ ಏನಲ್ಲ ಪ್ರಕಾಶಕಾರಿಗೆ ಕವನ ಸಂಕಲನ ಮಾಡುವಿರಾ ಅಂತ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಕವನಸಂಕಲನಗಳು ಯಾರೂ ಕವದಿಯದ ವಸ್ತುಗಳಾಗಿವೆ. ಕವನಗಳ ಬಗ್ಗೆ ಅಸಡ್ಡೆ ಮೂಡತೊಡಗಿದೆ.ಬದುಕಿನ ಜಂಜಡಾಗಳಿಗೆ ಕವಿತೆಯಲ್ಲಿ ಉತ್ತರವಿದೆ. ಬಹುಶಃ ಕವಿತೆಯನ್ನು ಸಮಾಜವನ್ನು ಬೇರಾವುದೂ ಅಷ್ಟು ಪರಿಣಾಮಕಾರಿಯಾಗಿ ತಿದ್ದುವುದಿಲ್ಲ, ಅದೊಂದು ದಿವ್ಯ ಔಷಧ. ಕವಿತೆಯೇ ಸಾಹಿತ್ಯದ ನಿಜವಾದ ಅಭಿವ್ಯಕ್ತಿ ಅನ್ನುತ್ತಾರೆ ಕುವೆಂಪು. ”ಕವಿಗಳು ಜಗತ್ತಿನ ಅಘೋಷಿತ ಶಾಸಕರು,” … Read more

ಕರೆದರೂ ಕೇಳದೆ.., ಐದನೇ ತಲೆಮಾರಿನ ಅಂತರಂಗದ ಪಿಸುಮಾತು

ಕರೆದರೂ

ಕರೆದರೂ ಕೇಳದೆ.., ಐದನೇ ತಲೆಮಾರಿನ ಅಂತರಂಗದ ಪಿಸುಮಾತು ಸನಾದಿ ಅಪ್ಪಣ್ಣನ ಕುಡಿಯ ನೋಡಿರಣ್ಣಾ!”ಮನಸಿವಾಗ ಉಳಿದ ಮಾತ್ ಹೇಳ್ತಿನಿ ಕೇಳಿ, ಬೀಳಗಿಯಲ್ಲಿ ಮುಸಲ್ಮಾನ ಬಾಂಧವರು ಮೊಹರಂ ಹಬ್ಬ ಬಹಳ ಚಂದ ಮಾಡ್ತಾರೆ. ಸನಾದಿ ಅಪ್ಪಣ್ಣನ ಕಾಲದಲ್ಲಿ ಒಮ್ಮೆ ಹುಸೇನ್ ಪೀರ (ಮುಸ್ಲಿಂ ಸಮುದಾಯ ಪೂಜಿಸುವ ದೇವರು) ಬೀಳಗಿಯಲ್ಲಿದ್ದ ಗುಡಿಯಿಂದ ಸೀದಾ ಸೊನ್ನದ (ಬೀಳಗಿಯ ಹತ್ತಿರದ ಊರು) ಊರ್‌ಕಡೆ ಹೊಂಟಿದ್ದಂತೆ. ಅಪಣ್ಣನ ಸನಾದಿ ನಾದ ಕೇಳಿ ದೇವರೇ ವಾಪಸ್ ಬಂದಿದ್ದನಂತೆ. ಅದಕ್ಕೆ ಸುತ್ತಮುತ್ತಲಿನ ಊರ ಜನ ನೀವು ಸಾಮಾನ್ಯ ಶಕ್ತಿಯವರು … Read more

ಆಧ್ಯಾತ್ಮಿಕ ಆಶ್ರಯವೆಂದರೆ ತಳವಿಲ್ಲದ ಆಳದಂತೆ!

ಆಧ್ಯಾತ್ಮಿಕ

ಆಧ್ಯಾತ್ಮಿಕ ಆಶ್ರಯವೆಂದರೆ ತಳವಿಲ್ಲದ ಆಳದಂತೆ! ಆಧ್ಯಾತ್ಮಿಕ ಪಥದಲ್ಲಿ ಮೂರು ಅಂಶಗಳಿವೆ: ಬುದ್ಧ ಗುರು ಅಥವಾ ಜ್ಞಾನಿ; ಸಂಘ ಗುಂಪು ಮತ್ತು ಧರ್ಮ – ನಿಮ್ಮ ಸ್ವಭಾವ, ನಿಮ್ಮ ನಿಜ ಸ್ವಭಾವ. ಬುದ್ಧನ ಸಮೀಪ ಹೋದಷ್ಟೂ ಹೆಚ್ಚು ಆಕರ್ಷಣೆಯನ್ನು ಕಾಣುವಿರಿ; ಜ್ಞಾನಿಗಳಿಂದ ನೀವು ದಣಿಯುವುದೇ ಇಲ್ಲ. ಸಮೀಪವಾದಷ್ಟೂ ಹೆಚ್ಚು ನವೀನವಾಗುತ್ತದೆ. ಹೆಚ್ಚು ಪ್ರೇಮವನ್ನು ಅನುಭವಿಸುತ್ತೀರಿ. ಅದೊಂದು ತಳವಿಲ್ಲದ ಆಳದಂತೆ. ಗುರುಗಳು ದ್ವಾರ ಮತ್ತು ದ್ವಾರವು ಜಗತ್ತಿಗಿಂತಲೂ ಆಕರ್ಷಕವಾಗಿರುತ್ತದೆ. ಇದರಿಂದಾಗಿ ಜನರು ದ್ವಾರದ ಬಳಿಗೆ ಬರುತ್ತಾರೆ. ಯಾರೋ ಬೀದಿಯಲ್ಲಿದ್ದಾರೆ ಮತ್ತು … Read more

ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ

ಸಮಾಜಪ್ರಜ್ಞ

ಸಮಾಜಪ್ರಜ್ಞೆಯ ಸಾಧಕವರೇಣ್ಯ ಸರ್ವಜ್ಞ ಜಿ.ಡಾ. ಎಸ್.ಬಿ. ಚನ್ನಗೌಡ್ರ :ಸರ್ವಜ್ಞ ಲೋಕಸಂಚಾರಿ ಎಂಬುದು ಎಲ್ಲರಿಗೂತಿಳಿದ ವಿಷಯವೇ ನಿಂತ ಕಡೆ ನಿಲ್ಲದೆ ದೇಶ ಸುತ್ತಿದ ಸರ್ವಜ್ಞ ಸಮಾಜದ ಒಳಹೊರಗೆಲ್ಲ ಓಡಾಡಿ ಕೊನೆಗೆ ಜನಸಾಮಾನ್ಯರೊಡನೆ ಬೆರೆತು ಬದುಕಿದವನ್ನು ಅನುಭವಗಳನ್ನು ಬಹುಶಃ ಯಾರೂ ಹುಡುಕಿಕೊಂಡು ಹೋಗುವುದಿಲ್ಲ. ಲೋಕಕ್ಕೂ ನಮಗೂ ಇರುವ ನಿರಂತರ ಸಂಪರ್ಕ ಹಾಗೂ ಸಂಘರ್ಷಗಳ ಪರಿಣಾಮಗಳೇ ಅನುಭವಗಳಾಗಿ ಪ್ರಜ್ವಲಿಸುತ್ತವೆ. ಸರ್ವಜ್ಞನ ಸಮಾಜ ಪ್ರಜ್ಞೆ ಹಾಗೂ ಅವನು ಕಂಡ ಜೀವನ ದರ್ಶನ ಅಮೋಘವಾದದ್ದು! ತಿಳಿಯಾದ ಕೊಳದಲ್ಲಿ ಸೂರ್ಯ ಸ್ಪಷ್ಟವಾಗಿ ಪ್ರತಿಬಿಂಬಿಸುವಂತೆ ಸೂಕ್ಷ್ಮ ಸ್ವಭಾವದ … Read more

ಪ್ರೇಮದ ಆಲಿಂಗನಕ್ಕೆ ಸೋತುಹೋದ ಸಂಕಷ್ಟಗಳ ಸುನಾಮಿ

ಪ್ರೇಮದ

ಪ್ರೇಮದ ಆಲಿಂಗನಕ್ಕೆ ಸೋತುಹೋದ ಸಂಕಷ್ಟಗಳ ಸುನಾಮಿ ಜಗತ್ತು ಆಹಾರಕ್ಕಾಗಿ ಎಷ್ಟು ಹಸಿದಿದೆಯೋ ನಿಜವಾದ ಪ್ರೇಮ ಮತ್ತು ಕರುಣೆಗಾಗಿ ಅಷ್ಟೇ ಹಂಬಲಿಸುತ್ತಿದೆ. ಜೀವನ ಕ್ಷಣಿಕ ಎಂದು ಗೊತ್ತಿದ್ದರೂ ಬಹುತೇಕರು ಸ್ವಾರ್ಥಸಾಧನೆಯಲ್ಲಿ ಬದುಕನ್ನು ವ್ಯಯಿಸಿ ಬಿಡುತ್ತಾರೆ. ಹಾಗಾಗಿಯೇ, ಈ ಪ್ರಪಂಚದ ನೋವನ್ನು ನೀಗಿಸಲೆಂದೇ ಭಗವಂತನು ಕಾಲಕಾಲಕ್ಕೆ ಕೆಲ ಲೀಲೆಗಳನ್ನು ಮಾಡಿ, ಹಲವು ಅವತಾರಗಳನ್ನು ಸೃಷ್ಟಿಸುತ್ತಾನೆ. ಅಂಥ ಶಕ್ತಿಗಳನ್ನು, ದಿವ್ಯಚೇತನಗಳನ್ನು ಕೂಡ ನಮ್ಮ ಜನರು ಬಹುಬೇಗ ಒಪ್ಪಿಕೊಳ್ಳುವುದಿಲ್ಲ. ಹಲವು ಪರೀಕ್ಷೆಗಳನ್ನು ಮಾಡಿಯೇ, ತಮ್ಮೆಲ್ಲ ತರ್ಕಗಳು, ಅನುಮಾನಗಳು ಸೋತ ಬಳಿಕ ಮುಂದಿನ ಹಂತದಲ್ಲಿ … Read more

ಐತಿಹಾಸಿಕ ತೀರ್ಪು

ಐತಿಹಾಸಿಕ

ಐತಿಹಾಸಿಕ ತೀರ್ಪು ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ – ಇಡಬ್ಲ್ಯುಎಸ್) ” ಅಭ್ಯರ್ಥಿಗಳಿಗೂ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಫಲ ದೊರೆತಿದೆ. ಈ ತಾರತಮ್ಯದ ವಿರುದ್ಧ ಮಧ್ಯಪ್ರದೇಶದ ಮೈಹಾರ್ ನಗರದ ಅದಿತ್ಯ ನಾರಾಯಣ್ ಪಾಂಡೆ ಎಂಬುವವರು ಮಧ್ಯಪ್ರದೇಶ ಹೈಕೋರ್ಟ್‌ನ ಮೊರೆ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ಸುರೇಶ್‌ಕುಮಾರ್ ಕೈಟ್ ಹಾಗೂ ನ್ಯಾಯಮೂರ್ತಿ ಸುರೇಶ್ ಜೈನ್ ಅವರಿದ್ದ … Read more

ನದಿಸ್ನಾನವು ಪ್ರಕೃತಿ ಜತೆ ಬೆಸೆಯುವ ಕ್ರಿಯೆ

ನದಿಸ್ನಾನವು

ನದಿಸ್ನಾನವು ಪ್ರಕೃತಿ ಜತೆ ಬೆಸೆಯುವ ಕ್ರಿಯೆ ಪರಮಾತ್ಮನು ಪಂಚಭೂತಾತ್ಮಕ ಪ್ರಕೃತಿಯಾಗಿ ಆವಿರ್ಭವಿಸಿದ್ದಾನೆ ಎನ್ನುವುದು ಸನಾತನ ದರ್ಶನ, ಧರಿಸುವ ಭೂಮಿಯು ತಾಯಿ, ಅನ್ನ-ಇಂಧನಗಳನ್ನೀವ ವನಸ್ಪತಿಗಳು ಅನ್ನಲಕ್ಷ್ಮೀ, ಅಮೃತಜಲವನ್ನೂಡುವಂಥ ನದಿಗಳು ಮಾತೆಯರು, ಸಮಸ್ತ ಜೀವಗಳ ಒಳಗಿರುವ ಚೈತನ್ಯವು ಪರಮಾತ್ಮನೇ ಇದು ಆರ್ಷದರ್ಶನ. ಸನಾತನಿಯರ ಉತ್ಕಟ ಪ್ರಕೃತಿಪ್ರೇಮಿಗಳು. ಹಾಗಾಗಿ ನಿಸರ್ಗವು ತನ್ನ ಎಷ್ಟೋ ಸ್ಕೂಲಸೂಕ್ಷ ರಹಸ್ಯಗಳನ್ನು ಅವರಿಗೆ ಅರುಹಿದೆ. ಗೃಹನಕಾದಿಗಳ ಪ್ರಭಾವವು ಭೂಮಿಯಮೇಲಿನ ಜಲಮೂಲಗಳನ್ನೂ, ವನಸ್ಪತಿಗಳನ್ನೂ ಜೀವಕೋಟಿಯ ಉಳಿವು ಬೆಳವುಗಳನ್ನು ಪ್ರಭಾವಗೊಳಿಸುತ್ತವೆ ಎನ್ನುವ ತಥ್ಯವನ್ನು ವಿಶ್ವಾಸಿಸುತ್ತ ಬದುಕಿದ್ದಾರೆ. ‘ನಾವು ಅನಂತ ಬ್ರಹ್ಮಾಂಡದ … Read more